ಚಾಮರಾಜನಗರದಲ್ಲಿ ರಾಗಾ ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಭೀತಿ

Mon, 01 May 2023-3:09 pm,

ಗಡಿ ಜಿಲ್ಲೆ ಚಾಮರಾಜನಗರದಲ್ಲಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ, ಇಂದು ಒಂದೇ ದಿನದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಶಿಕಾರಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಹನೂರಿನಿಂದ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿರುವ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ. ಇದೀಗ, ಮಧ್ಯಾಹ್ನ 3.45ಕ್ಕೆ ಚಾಮರಾಜನಗರದಲ್ಲಿ ಆಯೋಜನೆಗೊಂಡಿದ್ದ ರಾಹುಲ್ ಗಾಂಧಿಯವರ ಬೃಹತ್ ಸಮಾವೇಶಕ್ಕೆ ಇದೀಗ ಮಳೆ ಅಡ್ಡಿ ಭೀತಿ ಎದುರಾಗಿದೆ. 

ಕಳೆದ 20 ನಿಮಿಷದಿಂದ ಚಾಮರಾಜನಗರದಲ್ಲಿ ಎಡಬಿಡದೆ ಸುರಿಯುತ್ತಿರುವ  ಜೋರು ಮಳೆ.  

ವಿಶೇಷ ಹೆಲಿಕಾಪ್ಟರ್ ನಲ್ಲಿ ಚಾಮರಾಜನಗರಕ್ಕೆ ಆಗಮಿಸಬೇಕಿದ್ದ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.

ಜೋರು ಮಳೆಯಿಂದಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಲಿಕಾಪ್ಟರ್ ನಲ್ಲಿ ಬರುವುದಕ್ಕೂ ಕೂಡ ಅಡ್ಡಿಯಾಗಿದೆ. 

ರಾಗಾ, ಖರ್ಗೆ ಕಾರ್ಯಕ್ರಮಕ್ಕೆ ವರುಣ ಅಡ್ಡಿ-  ಕೈ ಕಾರ್ಯಕರ್ತರಲ್ಲಿ ಬೇಸರದ ವಾತಾವರಣ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link