Rakshith Urs: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ ನಟ!

Wed, 21 Feb 2024-9:59 am,

ಕನ್ನಡ ಕಿರುತೆರೆ ನಟ ನಟ ರಕ್ಷಿತ್ ಅರಸ್ ಹಾಗೂ ಮನೋರಂಜಿತಾ ಜೈನ್, ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿ ಈ ದಂಪತಿ,ಇದೀಗ ತಮ್ಮ ಮೊದಲನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ.   

ನಟ ರಕ್ಷಿತ್‌ ಅರಸ್‌ ಸೋಶಿಯಲ್ ಮೀಡಿಯಾದ ಮೂಲಕ ಖುಷಿಯ ವಿಚಾರವನ್ನು  ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್‌ಗೆ ತಿಳಿಸಿದ್ದಾರೆ.

ರಕ್ಷಿತ್‌ ಅರಸ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ "ಪೇರೆಂಟ್ಸ್ ಟು ಬಿ" ಅಂತ ಬರೆದುಕೊಂಡಿದ್ದಾರೆ.

ನಟ ರಕ್ಷಿತ್ ಅರಸ್ ಹಾಗೂ ಮನೋರಂಜಿತಾ ಜೈನ್ ಅವರ ಲೈಫ್‌ನ ವಿಶೇಷ ಘಟ್ಟದ ಬಗ್ಗೆ ಫ್ಯಾನ್ಸ್‌ಗಳಿಗೆ ತಿಳಿದ ನಂತರ ತುಂಬಾ ಸಂತೋಷವಾಗಿ  ಶುಭಾಶಯಗಳು ಹೇಳುವುದರ ಜೊತೆಗೆ ಕೆಲವು ಕಾಪ್ಲಿಮೆಂಟ್ಸ್‌ ಸಹ ನೀಡದ್ದಾರೆ. 

ಸೀರಿಯಲ್‌ ನಟ ರಕ್ಷಿತ್‌ ಅರಸ್‌ ಹಾಗೂ ಅವರ ಪತ್ನಿ ಒಂದು ಕೈಯಲಿ ತಮ್ಮ ಸ್ಕ್ಯಾನಿಂಗ್ ನ ಫೋಟೋಗಳನ್ನು ಹಿಡಿದ ಫೋಸ್ಟ್‌ ಹಂಚಿಕೊಳ್ಳುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ "ನಮ್ಮ ಜೀವನವೆಂಬ ದಾರಿಯಲ್ಲಿ ಇನ್ನೆರಡು ಕಾಲುಗಳು ಸೇರಲಿವೆ" ಎಂದು ಬರೆದು ಸಿಹಿ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.

ನಟ ರಕ್ಷಿತ್ 'ಮಹಾದೇವಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದವರು ಬಳಿಕ 'ಮಾಂಗಲ್ಯಂ ತಂತು ನಾನೇನಾ', 'ಯಜಮಾನಿ', 'ಮತ್ತೆ ವಸಂತ' ಹಾಗೂ 'ಮುದ್ದು ಮಣಿಗಳು' ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಧಾರವಾಹಿ ನಟ ರಕ್ಷಿತ್ ಅರಸ್ ಗೋಪಾಲ್ ಸದ್ಯ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಸೀರಿಯಲ್‌ನಲ್ಲಿ ನಾಯಕ ಅಗಸ್ತ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link