ರೇಖಾ ಮತ್ತು ಅಮಿತಾಬ್ ಬಚ್ಚನ್ ನಡುವಿನ ಸಂಬಂಧ ಮುರಿದು ಬಿದ್ದಿದ್ದು ಇದೇ ಕಾರಣಕ್ಕೆ !

Fri, 01 Dec 2023-7:29 pm,

ದೋ ಅಂಜಾನೆ ಚಿತ್ರದ ಸೆಟ್‌ನಲ್ಲಿ ಇವರಿಬ್ಬರು ಮೊದಲು ಭೇಟಿಯಾಗಿದ್ದು.  ಈ ಸಮಯದಲ್ಲಾಗಲೇ ಅಮಿತಾಬ್ ಬಚ್ಚನ್ ಗೆ ವಿವಾಹವಾಗಿತ್ತು. ಆದರೂ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.  ಬಹಳ ಸಮಯದವರೆಗೆ ಇವರಿಬ್ಬರೂ ತಮ್ಮ  ಸಂಬಂಧವನ್ನು ರಹಸ್ಯವಾಗಿರಿಸಿದ್ದರು.

ರೇಖಾ ಮತ್ತು ಅಮಿತಾಬ್ ಎರಡನೇ ಚಿತ್ರ, ಗಂಗಾ ಕಿ ಸೌಗಂಧ್, ಇವರಿಬ್ಬರ  ಸಂಬಂಧದ ಬಗ್ಗೆ ಮಾಧ್ಯಮಗಳ ಗಮನ ಸೆಳೆಯಲು ಕಾರಣವಾಯಿತು. 

ವದಂತಿಗಳ ಪ್ರಕಾರ, ರೇಖಾ ಮತ್ತು ಅಮಿತಾಬ್ ಬಚ್ಚನ್ ರಹಸ್ಯವಾಗಿ ಮದುವೆಯಾಗಿದ್ದರು ಎನ್ನಲಾಗಿದೆ. ನೀತು ಕಪೂರ್ ಮತ್ತು ರಿಷಿ ಕಪೂರ್ ಮದುವೆಗೆ ರೇಖಾ ಮಾಂಗಲ್ಯ ಮತ್ತು ಸಿಂಧೂರ ಧರಿಸಿ ಬಂದಿದ್ದು, ಆಗಿನ ಕಾಲದ ಬ್ರೇಕಿಂಗ್ ನ್ಯೂಸ್ ಆಗಿತ್ತು. 

ಸಂದರ್ಶನವೊಂದರಲ್ಲಿ, ಸಿಲ್ಸಿಲಾ ನಿರ್ದೇಶಕ ಯಶ್ ಚೋಪ್ರಾ ರೇಖಾ ಮತ್ತು ಅಮಿತಾಬ್ ಬಚ್ಚನ್ ಪರಸ್ಪರ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದ ಚಿತ್ರೀಕರಣದ ವೇಳೆ ರೀಲ್‌ ಲೈಫ್‌ಗೆ ಬರುತ್ತಿರುವ ಅವರಿಬ್ಬರ ನಿಜಜೀವನವನ್ನು ನೋಡಿ ಭಯಪಟ್ಟಿದ್ದೆ ಎಂದಿದ್ದರು.   

ಸಿಲ್ಸಿಲಾ ಚಿತ್ರದ ನಂತರ ಇಬ್ಬರ ಸಬಂಧವೂ ಮುರಿದು ಬಿತ್ತು. ಎಲ್ಲರ ಎದುರು ತಮ್ಮಿಬ್ಬರ ನಡುವಿನ ಸಂಬಂಧವನ್ನು ಒಪ್ಪಿಕೊಳ್ಳುವಂತೆ ರೇಖಾ ಒತ್ತಡ ಹೇರಿದ್ದೇ ಇವರಿಬ್ಬರ ಸಬಂಧ  ಮುರಿದು ಬೀಳಲು ಕಾರಣ ಎನ್ನಲಾಗಿದೆ.  ಇದಾದ ಮೇಲೆ ಅಮಿತಾಬ್ ಬಚ್ಚನ್ ರೇಖಾ ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ನಿರ್ಮಾಪಕರಿಗೆ ತಿಳಿಸಿದ್ದರು ಎನ್ನುವುದನ್ನು ರೇಖಾ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದರು.  

ಇತ್ತೀಚೆಗೆ, ರಿಯಾಲಿಟಿ ಶೋ ಇಂಡಿಯನ್ ಐಡಲ್‌ನಲ್ಲಿ ರೇಖಾ ಕಾಣಿಸಿಕೊಂಡಿದ್ದರು. ಈ ಸಂಚಿಕೆಯಲ್ಲಿ, ಜಯ್ ಭಾನುಶಾಲಿ ತೀರ್ಪುಗಾರರಾದ ನೇಹಾ ಕಕ್ಕರ್ ಅವರನ್ನು ಮದುವೆಯಾದ ಪುರುಷನತ್ತ ಆಕರ್ಷಿತರಾಗುವುದನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದಾಗ, ರೇಖಾ ,  ಈ ಪ್ರಶ್ನೆ ನನಗೆ ಕೇಳಿ ಎಂದು ಹೇಳಿದ್ದಾರೆ. ಮತ್ತೆ ತಕ್ಷಣವೇ 'ಮೈನೆ ಕುಚ್ ನಹೀ ಕಹಾ (ನಾನು ಏನನ್ನೂ ಹೇಳಲಿಲ್ಲ) ಎಂದು  ಮಾತನ್ನು ಮರೆ ಮಾಚಲು ಯತ್ನಿಸಿದ್ದಾರೆ.  ರೇಖಾ ಅವರ ಈ ಮಾತು ಅಮಿತಾಬ್ ಬಚ್ಚನ್ ಮೇಲೆ ರೇಖಾ ಮನಸ್ಸಿನಲ್ಲಿ ಇನ್ನೂ ಭಾವನೆಗಳಿವೆಯೇ ಎನ್ನುವುದನ್ನು ಯೋಚಿಸುವಂತೆ ಮಾಡಿದೆ. 

 

          View this post on Instagram                      

A post shared by Sony Entertainment Television (@sonytvofficial)

ZEENEWS TRENDING STORIES

By continuing to use the site, you agree to the use of cookies. You can find out more by Tapping this link