ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!

Fri, 07 Jun 2024-6:01 pm,

ಕನ್ನಡದ ಖ್ಯಾತ ತಾರಾ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.  

ನಿವೇದಿತಾ ಜೊತೆ ಸಹಬಾಳ್ವೆ ನಿಲ್ಲಿಸಲು ಚಂದನ್ ಶೆಟ್ಟಿ ನಿರ್ಧರಿಸಿದ್ದು, ಜೂನ್ 6ರಂದು ಅಂದರೆ ಕಳೆದ ದಿನವಷ್ಟೇ ಶಾಂತಿನಗರ ಬಳಿ ಇರುವ ಫ್ಯಾಮಿಲಿ ಕೋರ್ಟ್’ನಲ್ಲಿ ಕೇಸ್ ನಂ. MC 3388/ 2024ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೆಲ ಮೂಲಗಳ ಪ್ರಕಾರ, ನಿವೇದಿತಾ ವಿದೇಶಕ್ಕೆ ಹೋಗೋ ಆಸೆ ಇಟ್ಟುಕೊಂಡಿದ್ದು, ಈ ಕಾರಣದಿಂದ ದೂರ ಇರಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲ ಮಾಹಿತಿ ಪ್ರಕಾರ, ಮಗು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಇದೀಗ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

2018ರ ಬಿಗ್ ಬಾಸ್ ಸೀಸನ್-5ರ ಸ್ಪರ್ಧಿಗಳಾಗಿದ್ದ ಚಂದನ್- ನಿವೇದಿತಾ ಡೇಟಿಂಗ್ ಮಾಡುತ್ತಿದ್ದರು. ಅದಾದ ಬಳಿಕ 2019ರಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ‘will you marry me’ ಅಂತ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಚಂದನ್ ಪ್ರೇಮ ನಿವೇದನೆಗೆ ನಿವೇದಿತಾ ಕೂಡ ‘Yes’ ಎಂದು ಒಪ್ಪಿಗೆ ಸೂಚಿಸಿದ್ದರು. ಈ ವಿಚಾರ ವಿವಾದಕ್ಕೆ ಕೂಡ ಕಾರಣವಾಗಿತ್ತು. ಆದರೆ ಇದೀಗ ಇವರಿಬ್ಬರ ಡಿವೋರ್ಸ್ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಖಾಸಗಿ ವಾಹಿನಿ ರಿಯಾಲಿಟಿ ಶೋ ರಾಜ-ರಾಣಿ ಸೇರಿದಂತೆ ಹಲವು ಶೋಗಳಲ್ಲಿ ಭಾಗಿಯಾಗಿದ್ದ ಈ ಜೋಡಿ, ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುತ್ತಾ ಎಲ್ಲರ ಗಮನ ಸೆಳೆದಿತ್ತು. ಇನ್ನು ಗಾಯಕ, ಸಂಗೀತ ಸಂಯೋಜಕನಾಗಿದ್ದ ಚಂದನ್ ಶೆಟ್ಟಿ, ಇತ್ತೀಚೆಗೆ ನಾಯಕ ನಟನಾಗಿ ಬಡ್ತಿ ಪಡೆದಿದ್ದರು.

ಸೂತ್ರಧಾರ ಚಿತ್ರದ ಮೂಲಕ ನಾಯಕ ನಟನಾಗಿ ಚಂದನ್ ಶೆಟ್ಟಿ ಹೊರಹೊಮ್ಮುತ್ತಿದ್ದು, ‘ಎಲ್ರ ಕಾಲೆಳೆಯುತ್ತೆ ಕಾಲ’ ಎಂಬ ಸಿನಿಮಾ ರಿಲೀಸ್’ಗೆ ರೆಡಿಯಾಗಿದೆ. ಇನ್ನೊಂದೆಡೆ ರಾಜ-ರಾಣಿ, ಗಿಚ್ಚ ಗಿಲಿಗಿಲಿ ಶೋಗಳಿಂದ ನಿವೇದಿತಾ ಮನೆ ಮಾತಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link