ಈ ನಟಿಗೂ ಅಶ್ಲೀಲ ಮೆಸೇಜ್‌, ವಿಡಿಯೋ ಕಳಿಸಿದ್ದನಂತೆ ರೇಣುಕಾಸ್ವಾಮಿ.!

Mon, 24 Jun 2024-2:48 pm,

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸದ್ಯ ದೇಶಾದ್ಯಂತ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಕೊಲೆಯಾದನೆಂದು ಹೇಳಲಾಗುತ್ತಿದೆ. ನಟ ದರ್ಶನ್ ಹಾಗೂ ಆಪ್ತರು ಇದೇ ಪ್ರಕರಣದಲ್ಲಿ ಇದೀಗ ಜೈಲು ಸೇರಿದ್ದಾರೆ.  

ಈ ಕುರಿತು ನಟಿ ಚಿತ್ರಾಲ್‌ ರಂಗಸ್ವಾಮಿ ಲೈವ್ ವಿಡಿಯೋ ಮಾಡಿದ್ದು, ತಮಗಾದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ನಟಿ ಚಿತ್ರಾಲ್ ರಂಗಸ್ವಾಮಿ, ರೇಣುಕಾಸ್ವಾಮಿ ಫೇಕ್ ಅಕೌಂಟ್‌ಗಳ ಮೂಲಕ ಸಾಕಷ್ಟು ಜನರಿಗೆ ಇದೇ ರೀತಿ ಕೆಟ್ಟ ಮೆಸೇಜ್ ಕಳುಹಿಸುತ್ತಿದ್ದ ಎಂದು ಬಹಿರಂಗ ಪಡಿಸಿದ್ದಾರೆ. 

ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಚಿತ್ರಾಲ್‌ ರಂಗಸ್ವಾಮಿ ಹೇಳಿದ್ದಾರೆ. ಹೀಗಾಗಿ ತಾವು ಆ ಅಕೌಂಟ್‌ಗಳನ್ನ ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ.

ಎಲ್ಲರಿಗೂ ನಮಸ್ಕಾರ, ಸದ್ಯ ಏನು ನಡೆಯುತ್ತಿದೆ ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕೊಲೆ ವಿಚಾರ ಡಿಸ್ಟರ್ಬ್‌ ಮಾಡಿದ. ಇಲ್ಲಿ ಯಾರಿಗೂ ಸಪೋರ್ಟ್‌ ಮಾಡಲು ನಾನು ಲೈವ್ ಬಂದಿಲ್ಲ ಎಂದಿದ್ದಾರೆ.

ರೇಣುಕಾ ಸ್ವಾಮಿ ಅವರು ನನಗೂ ಅಶ್ಲೀಲ ಮೆಸೆಜ್ ಕಳುಹಿಸಿದ್ದರು. ಮಾರ್ಚ್‌ನಲ್ಲಿ ಪೊಲೀಸ್‌ ಠಾಣೆಯಲ್ಲಿ ಕಂಪ್ಲೇಟ್‌ ಕೂಡ ಆಗಿದೆ ಎಂದಿದ್ದಾರೆ.

ನನಗೆ ಗೌತಮ್‌ ಅನ್ನುವ ಹೆಸರಲ್ಲಿದ್ದ ಫೇಕ್‌ ಅಕೌಂಟ್‌ನಿಂದ ಪ್ರೈವೇಟ್‌ ಪಾರ್ಟ್‌ ಮತ್ತು ಬೆತ್ತಲೆ ಫೋಟೊ ಅಥವಾ ಹಸ್ತ ಮೈಥುನ ವಿಡಿಯೋ ಬಂದ ಅಕೌಂಟ್‌ಗಳನ್ನು ನಾನು ಬ್ಲಾಕ್‌ ಮಾಡ್ತೀನಿ. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ನಲ್ಲೂ ಈ ಅಕೌಂಟ್ ಇದೆ ಎಂದಿದ್ದಾರೆ.  

ನಟಿ ಚಿತ್ರಾಲ್‌ ರಂಗಸ್ವಾಮಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದವರು. ಸಿನಿಮಾಗಳಲ್ಲೂ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. 2017ರಿಂದ ಬಾಡಿ ಬಿಲ್ಡಿಂಗ್‌ನಲ್ಲಿ ಚಿತ್ರಾಲ್‌ ತೊಡಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link