Darshan: ಪಟ್ಟಣಗೆರೆ ಶೆಡ್‌ ಸಿಸಿಟಿವಿಯಲ್ಲಿದೆಯಂತೆ ʼಆʼ ದೃಶ್ಯ..! ರಿಟ್ರಿವ್‌ ಆಗುತ್ತಾ ಡಿಲೀಟ್‌ ಆಗಿರೋ ವಿಡಿಯೋ..!?

Sat, 20 Jul 2024-2:42 pm,

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ ದರ್ಶನ್‌ ಹಾಗೂ ಗ್ಯಾಂಗ್‌ ಜೈಲಿನಲ್ಲಿದ್ದಾರೆ.. ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಒಂದಾದ ಮೇಲೊಂದರಂತೆ ಕೊಲೆ ಸಾಕ್ಷಿಗಳನ್ನು ಪೊಲೀಸ್‌ ಕಲೆಹಾಕುತ್ತಿದ್ದಾರೆ..  

ಇದೀಗ ಸೆಂಟ್ರಲ್‌ ಜೈಲಿನಲ್ಲಿರುವ ದರ್ಶನ್‌ಗೆ ಮತ್ತೊಂದು ಕಂಟಕ ಎದುರಾದಂತಿದೆ.. ಹೌದು ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ಶಾಕಿಂಗ್‌ ಟ್ವೀಸ್ಟ್‌ಗಳನ್ನು ನೀಡುತ್ತಿದ್ದು, ಸದ್ಯ ಪಟ್ಟಣಗೆರೆ ಶೆಡ್‌ನಲ್ಲಿ ಕ್ರೂರತೆಗೆ ಸಾಕ್ಷಿಯಾಗಿರೋ ವಿಡಿಯೋ ರೆಕಾರ್ಡ್‌ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ..   

ಈ ಪಟ್ಟಣಗೆರೆ ಶೆಡ್‌ನಲ್ಲಿನ ವಿಡಿಯೋವನ್ನು ಆರೋಪಿ ಪ್ರದೋಶ್ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.. ದರ್ಶನ್ ಹಲ್ಲೆ‌‌ ಮಾಡುವಾಗ‌ ವಿಡಿಯೋ‌ ಮಾಡಲು ಸೂಚಿಸಿದ್ದರಂತೆ ಎನ್ನುವ ಮಾಹಿತಿ ದೊರಕಿದೆ..   

ವಿಡಿಯೋ ಮಾಡಿರುವುದಲ್ಲದೇ ಬಳಿಕ ಅದನ್ನು ಮತ್ತೆ ಪ್ರದೋಶ್ ಡಿಲಿಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೀಗ  ಪ್ರದೋಶ್ ಐ ಫೋನ್ ಮೊಬೈಲ್ ಸಿಐಡಿ ಟೆಕ್ನಿಕಲ್ ಸೆಲ್‌ಗೆ ರವಾನೆ ಮಾಡಲಾಗಿದೆ ಎನ್ನಲಾಗುತ್ತಿದೆ..   

 ಇಷ್ಟೇ ಅಲ್ಲ ಪಟ್ಟಣಗೆರೆ ಶೆಡ್‌ನ ಸಿಸಿಟಿವಿಯಲ್ಲಿ ಶವ ಎಳೆದೊಯ್ಯೋ ದೃಶ್ಯ ಸೆರೆಯಾಗಿದ್ದು, ಅದನ್ನೂ ಆರೋಪಿಗಳಿಂದ ಡಿಲೀಟ್‌ ಮಾಡಲಾಗಿದೆಯಂತೆ.. ಸದ್ಯ ಪೊಲೀಸರು ಸಿಸಿಟಿವಿ ಡಿವಿಆರ್ ನ ಕೂಡ ರಿಟ್ರಿವ್ ಮಾಡಲು ರವಾನಿಸಿದ್ದಾರೆ ಎಂದು ಹೇಳಲಾಗ್ತಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link