ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!

Mon, 24 Jun 2024-3:57 pm,

 ನಟ ದರ್ಶನ್‌ ಹಾಗೂ ಗ್ಯಾಂಗ್‌ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.. ಈ ವೇಳೆ ಹಲವು ಚಿತ್ರರಂಗದ ಗಣ್ಯರು ಅವರ ಬಂಧನಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ..  

ಇದೀಗ ನಟ ದರ್ಶನ್‌ ಭೇಟಿ ಮಾಡಲು ವಿನೋದ್‌ ಪ್ರಭಾಕರ್‌ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.. ಅಲ್ಲದೇ ಮಾದ್ಯಮದೊಂದಿಗೂ ಮಾತನಾಡಿದ್ದಾರೆ..  

ನಟ ದರ್ಶನ್‌ ಬಂಧನದ ಕುರಿತು ಮಾತನಾಡಿದ ವಿನೋದ್‌ ಪ್ರಭಾಕರ್‌ "ಮೃತ ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ನೀಡಲಿ..ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ.. ಎಂದಿದ್ದಾರೆ..  

ಅಲ್ಲದೇ "ನಾನು ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಆಗಿತ್ತು..ಅವರ ಬರ್ತಡೇಗೆ ಭೇಟಿ ಮಾಡಿದ್ದೆ.. ಮಾಧ್ಯಮಗಳಲ್ಲಿ ಬರುವುದನ್ನ ನೋಡಿ ವಿಚಾರ ತಿಳಿದುಕೊಂಡೆ.. ಪೊಲೀಸ್ ಸ್ಟೇಷನ್ ಹತ್ರ ಹೋಗಿ ಭೇಟಿಯಾಗಲು ಪ್ರಯತ್ನಪಟ್ಟೆ.. ಅಲ್ಲಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ..ಇಂದು ಪರಪ್ಪನ ಅಗ್ರಹಾರ ಜಲಿಗೆ ಬಂದು ಭೇಟಿ ಮಾಡಿದ್ದೇನೆ" ಎಂದು ಹೇಳಿದ್ದಾರೆ..   

ಒಳಗಡೆ ದರ್ಶನ್‌ ಮೌನವಾಗಿದ್ದರು,, "ಏನ್ ಟೈಗರ್ ಅಂತ ಹೇಳಿದ್ರು ಅಷ್ಟೇ ನನ್ನ ಬಳಿ ಮಾತಾನಾಡಿದ್ದು" ಅವರಿಗೆ ಶೆಕ್ ಹ್ಯಾಂಡ್ ಮಾಡಿ ಬಂದೆ.. ಪ್ರಕರಣ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವುದಷ್ಟೇ ನನಗೆ ಗೊತ್ತು..ಈ ಪ್ರಕರಣ ಬಹಳ ಗಂಭೀರವಾಗಿದೆ.. ಪೊಲೀಸ್ ತನಿಖೆಯಲ್ಲಿ ಕೇಸ್ ಇದೇ.. ಏನು ಮಾತನಾಡಬೇಕು ಎನ್ನುವ ಕ್ಲಾರಿಟಿ ನನಗಿಲ್ಲ.. ಅದಕ್ಕೆ ಅವರನ್ನು ಭೇಟಿ ಮಾಡುವವರಗೆ ಮಾತನಾಡಬಾರದು ಅಂದು ಕೊಂಡಿದ್ದೆ..ಕಾನೂನಿಗಿಂತ ಯಾರು ದೊಡ್ಡವರಲ್ಲಿ ಎಲ್ಲರಿಗೂ ನ್ಯಾಯ ಸಿಗಲಿ.. ಎಂದು ಹೇಳಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link