ಚಿನ್ನು ನನ್ನ ಮಗ.. 2 ವರ್ಷದ ಹಿಂದೆ ಅವನನ್ನ ಕಳ್ಕೊಂಡೆ: ಕಣ್ಣೀರಿಟ್ಟ ಆಂಕರ್‌ ಅನುಶ್ರೀ

Mon, 27 May 2024-2:34 pm,

ಅನುಶ್ರೀ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿ "ಚಿನ್ನು ನನ್ನ ಮಗ.. 2 ವರ್ಷದ ಹಿಂದೆ ಅವನನ್ನ ಕಳ್ಕೊಂಡೆ" ಎಂದು ಹೇಳುತ್ತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.  

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಮಿಡಿ ಕಿಲಾಡಿಗಳು ಶೋನಲ್ಲಿ ಅನುಶ್ರೀ ಕಣ್ಣೀರಿಟ್ಟಿದ್ದಾರೆ. ಚಿನ್ನು ಜೊತೆಗಿರುವ ಫೋಟೋ ಪರದೆಯ ಮೇಲೆ ಅನುಶ್ರೀ ಕಣ್ಣೀರಿಟ್ಟಿದ್ದಾರೆ.

ಫೋಟೋ ತೋರಿಸುತ್ತಿದ್ದಂತೆ, ನನ್ನ ಚಿನ್ನು ಅದು. ಅವನು ಈಗ ನಮ್ಮ ಜೊತೆ ಇಲ್ಲ. ನಾನು ಅವನನ್ನ ಎರಡು ವರ್ಷದ ಹಿಂದೆ ಇದೇ ಕೈಯಲ್ಲಿ ಕಳ್ಕೊಂಡೆ. ಅವನು ನನ್ನ ಮಗ ಎಂದು ಕಣ್ಣೀರಿಟ್ಟಿದ್ದಾರೆ.

ನಾನು ಅದೃಷ್ಟವಂತೆ. ಚಿನ್ನು ಮತ್ತೇ ಹುಟ್ಟಿ ನಮ್ಮ ಜೀವನದಲ್ಲಿ ಬಂದಿದ್ದಾನೆ. ಏನು ಬಯಸದೇ ಪರಿಶುದ್ಧ ಪ್ರೀತಿ ಕೊಡುವ ಏಕೈಕ ಜೀವ. ಅದು ನಾಯಿ ಮಾತ್ರ ಎಂದು ಅನುಶ್ರೀ ಹೇಳುತ್ತಾರೆ. 

ಅನುಶ್ರೀ ಚಿನ್ನು ಎಂಬ ಹೆಸರಿನ ನಾಯಿಮರಿಯನ್ನು ಸಾಕಿದ್ದರು. ಚಿನ್ನು ಜೊತೆಗಿನ ಒಡನಾಟ ಮತ್ತು ಕಳೆದುಕೊಂಡ ನೋವನ್ನು ನೆನೆದು ಅನುಶ್ರೀ ವೇದಿಕೆ ಮೇಲೆಯೇ ಕಣ್ಣೀರು ಸುರಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link