Actor Vishnuvardhan: ಸಿನಿಮಾರಂಗ ಬಿಟ್ಟು ಕಾರ್‌ ಡ್ರೈವರ್‌ ಆಗಲು ನಿರ್ಧರಿಸಿದ್ದರಂತೆ ಡಾ. ವಿಷ್ಣುವರ್ಧನ್‌! ಕಾರಣವೇನು ಗೊತ್ತಾ?

Wed, 17 Apr 2024-11:23 am,

ಹೌದು ನಟ ವಿಷ್ಣುವರ್ಧನ್‌ ಅವರ ಪ್ರೀತಿಯ ಅಳಿಯ ಅನಿರುದ್ಧ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿ ಅಭಿಮಾನಿಗಳ ಸಾಹಸಸಿಂಹ ಅನುಭವಿಸಿದ ನಾನಾ ರೀತಿಯ ಕಷ್ಟಗಳ ಕುರಿತು ಮಾಹಿತಿ ನೀಡಿದ್ದರು..   

ನಟ ವಿಷ್ಣುವರ್ಧನ್‌ ಅವರು ಸಿನಿಮಾಗಳ ಅವಕಾಶಗಳ ಅಭಾವವಿದ್ದ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಡ್ರೈವರ್‌ ಆಗಿ ಕೆಲಸ ಮಾಡಲು ಮುದ್ದಾಗಿರಂತೆ ಎಂದು ವಿಷ್ಣುವರ್ಧನ್‌ ಅಳಿಯ ಅನಿರುದ್ಧ ಅವರು ಹೇಳಿಕೊಂಡಿದ್ದರು..   

ಯಾವುದೇ ಬ್ಯಾಕ್‌ಗ್ರೌಂಡ್‌ ಇಲ್ಲದೇ ತಮ್ಮ ಸ್ವಂತ ಪ್ರತಿಭೆಯ ಮೂಲಕ ಬಹುದೊಡ್ಡ ಮಟ್ಟದ ಸ್ಟಾರ್‌ಪಟ್ಟವನ್ನು ಪಡೆದುಕೊಂಡ ವಿಷ್ಣು ದಾದಾ ಆರಂಭಿಕ ದಿನಗಳಲ್ಲಿ ಸಾಕಷ್ಟು ಪಾತ್ರಗಳಿಗೆ ಮನಸ್ಸಿಲ್ಲದಿದ್ದರೂ ಬಣ್ಣಹಚ್ಚಿದಿದ್ದಾರೆ..   

ಸಾಲು ಸಾಲು ಸಿನಿಮಾಗಳ ಮೂಲಕ ಗುರುತಿಸಿಕೊಂಡ ನಟ ವಿಷ್ಣುವರ್ಧನ್‌ ಗೆಲುವುಕಂಡ ನಂತರ ಭಾರತಿ ಅವರನ್ನು ಪ್ರೀತಿಸಿ ಮದುವೆಯಾದರು.. ಆ ಸಂದರ್ಭದಲ್ಲಿ ಭಾರತಿಯವರು ಸಹ ಸಿನಿರಂಗದಲ್ಲಿ ಮಿಂಚುತ್ತಿದ್ದರು..   

ನಂತರ ಇಬ್ಬರೂ ಮದುವೆಯಾಗಬೇಕು ಎಂದು ನಿರ್ಧರಿಸಿ ಮನೆಯವರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮದುವೆಯಾದ ಕೆಲ ತಿಂಗಳುಗಳ ನಂತರ ಅವರ ಸಿನಿಮಾ ಸೋಲುಕಂಡವು.. ಹೀಗಾಗಿ ಸಾಕಷ್ಟು ಅವಕಾಶಗಳು ಅವರ ಕೈ ತಪ್ಪಿ ಹೋಗಿದ್ದವು..   

ಆ ಸಮಯದಲ್ಲಿ ನಟ ವಿಷ್ಣುವರ್ಧನ್‌ ಚೆನ್ನೈ ನಲ್ಲಿ ನೆಲೆಸಿದ್ದರು.. ಅಲ್ಲಿನ ಸಾಕಷ್ಟು ಖರ್ಚು ವೆಚ್ಚ ಹೆಚ್ಚಾಗಿದ್ದರಿಂದ.. ವಿಷ್ಣುವರ್ಧನ್‌ ಬಳಿ ಹಣ ಇಲ್ಲದೇ ಪರದಾಡುತ್ತಿದ್ದರಂತೆ.. ಆ ಸಂದರ್ಭದಲ್ಲಿ ನಟ ಸಿನಿಮಾರಂಗ ತೊರೆದು ಡ್ರೈವರ್‌ ಆಗಿ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದರು ಎಂದು ವಿಷ್ಣು ಅಳಿಯ ಅನಿರುದ್ಧ ಅವರು ಹೇಳಿಕೊಂಡಿದ್ದಾರೆ..    

ZEENEWS TRENDING STORIES

By continuing to use the site, you agree to the use of cookies. You can find out more by Tapping this link