Kaustubha Mani: ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ನನ್ನರಸಿ ರಾಧೆ ನಟಿ! ವರ ಯಾರು ಗೊತ್ತೇ..?

Thu, 07 Mar 2024-12:45 pm,

ಕಿರುತೆರೆ ನಟಿ ಕೌಸ್ತುಭ ಮಣಿ ಕೆಲವು ದಿನಗಳಿಂದ ನಟನೆಯಿಂದ ದೂರ ಉಳಿದವರು ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ 

ನಟಿ ಕೌಸ್ತುಭ ಮಣಿ ಉಂಗುರ ತೊಟ್ಟುಕೊಂಡು ಎಂಗೇಜ್ ಆಗಿರುವ ಫೋಟೋವನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ತಿಳಿಸಿದ್ದಾರೆ.

ಕೌಸ್ತುಭ ಮಣಿ ಸಿದ್ಧಾಂತ್ ಸತೀಶ್ ಎಂಬುವರ ಜೊತೆಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದು, ಈಕೆಯ ಫ್ಯಾನ್ಸ್‌ ಈ  ಮುದ್ದಾಗಿರುವ ಜೋಡಿಯನ್ನು ನೋಡಿ ಶುಭ ಹಾರೈಸಿದ್ದಾರೆ.

ನಟಿ ಕೌಸ್ತುಭ ತೆರೆ ಮೇಲೆ ಯಾವ ರೀತಿ ಫುಲ್ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಿದ್ದರೋ, ಅದೇ ರೀತಿ ತಮ್ಮ ಎಂಗೇಜ್ ಮೆಂಟ್ ನಲ್ಲೂ ಸಾಂಪ್ರದಾಯಕವಾಗಿ ಗಮನ ಸೆಳೆಯುವುದರ ಜೊತೆಗೆ ಈಕೆಯ ಹೇರ್ ಸ್ಟೈಲ್, ಮೇಕಪ್ ಕೂಡ ಎಲ್ಲವೂ ಸೂಪರ್ ಆಗಿಯೇ ಇತ್ತು.

ಸೀರಿಯಲ್‌ ಬೆಡಗಿ ಕೌಸ್ತುಭ ಮಣಿ ಗೌರಿಶಂಕರ ಧಾರಾವಾಹಿ ತಂಡದಿಂದ ವ್ಯೆಯಕ್ತಿಕ ಕಾರಣಗಳಿಂದ ಹೊರಗೆಂದವರು, ಇದೀಗ ಉಂಗುರ ತೊಟ್ಟುಕೊಂಡು ಪ್ರತ್ಯಕ್ಷವಾಗಿದ್ದಾರೆ.

ಕೌಸ್ತುಭ ಅಭಿಮಾನಿಗಳು ಮದುವೆಯ ಕಾರಣಕ್ಕಾಗಿಯೇ ಈ ನಟಿ ಸೀರಿಯಲ್‌ನಿಂದ ಹೊರ ಬಂದಿರಬಹುದು ಎಂದು ಊಹೆ ಮಾಡುತ್ತಿದ್ದಾರೆ.

ನಟಿ ಕೌಸ್ತುಭ ಮಣಿ ಕಲರ್ಸ್ ಕನ್ನಡದ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ಗೆದ್ದಿವರು, ಕೆಲವು ದಿನಗಳ ಹಿಂದೆಯಷೇ ಸ್ಟಾರ್‌ ಸುವರ್ಣ ಧಾರವಾಹಿಯ ಗೌರಿಶಂಕರ ಸೀರಿಯಲ್‌ನಲ್ಲಿ ನಾಯಕಿಯಾಗಿ ಬಣ್ಣಹಚ್ಚಿದ್ದರು.

ಕನ್ನಡದ ನಟಿ ಕೌಸ್ತುಭ ಮಣಿ ತೆಲುಗಿನ ಕೋಡಲು ಮೀಕು ಜೋಹರ್ಲು ಎಂಬ ಧಾರಾವಾಹಿಯಲ್ಲಿ ನಟಿಸಿ, ರಾಮಾಚಾರಿ 2.0 ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿ ಮತ್ತು ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link