ಅಡುಗೆ ಮನೆಯಲ್ಲಿರುವ ಈ ಸಣ್ಣ ವಸ್ತು ನಿಮ್ಮನ್ನು ಶನಿ ದೋಷದಿಂದ ಮುಕ್ತಗೊಳಿಸಲು ಸಹಾಯ ಮಾಡುತ್ತದೆ! ಹೀಗೆ ಮಾಡಿ...

Mon, 07 Oct 2024-7:28 am,

Shani Dosha Nivaran: ಆರ್ಥಿಕ ಸಮಸ್ಯೆಗಳು, ಅಡೆತಡೆಗಳು, ದೃಷ್ಟಿ, ಶನಿ ದೋಷಗಳಂತಾ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆಯೇ? ಈ ಸಮಸ್ಯೆಗಳನ್ನು ತೊಡೆದುಹಾಕಲು ನೀವು ಹಣವನ್ನು ಖರ್ಚು ಮಾಡಬೇಕಿಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ಈ ಚಿಕ್ಕ ವಸ್ತುವನ್ನು ಬಳಸಿ ಶನಿಗ್ರಹದ ತೊಂದರೆಗಳನ್ನು ದೂರಮಾಡಿ, ಆರ್ತಿಕ ಪರಿಸ್ಥಿತಿಯಾನ್ನು ಸುಧಾರಿಸಬಹುದು.   

ಯಾವುದೇ ಕಾರ್ಯದಲ್ಲಿ ಪದೇ ಪದೇ ಅಡಚಣೆಗಳು ಉಂಟಾಗುತ್ತಿವೆಯೇ? ಎಲ್ಲಾ ಕೆಲಸಗಳೂ ಕೂಡ ವಿಫಲವಾಗುತ್ತೆವೆಯೇ? ಇದಕ್ಕೆ ಕಾರಣ ನಿಮಗೆ ಶನಿ ವಕ್ಕರಿಸಿದ್ದಾನೆ ಎಂದು ಅರ್ಥ. ಹೀಗೆ ನವಗ್ರಹಗಳಲ್ಲಿ ಶನಿಯನ್ನು ಅತ್ಯಂತ ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಏಕೆಂದರೆ ಶನಿ ದಶಾ ವ್ಯಕ್ತಿಯ ಜಾತಕದಲ್ಲಿದ್ದರೆ, ಅವನ ವ್ಯಕ್ತಿತ್ವವು ಸಂಪೂರ್ಣವಾಗಿ ಬದಲಾಗುತ್ತದೆ.  

ಒಬ್ಬ ಮನುಷ್ಯನ ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದರೆ, ರಾಜ ಸುಖವನ್ನು ಅನುಭವಿಸುತ್ತಾರೆ. ಅದುವೇ ಶನಿ ಅಶುಭ ಸ್ಥಾನದಲ್ಲಿದ್ದರೆ ಕಷ್ಟಗಳು ಆ ವ್ಯಕ್ತಿಯನ್ನು ಬೆಂಬಿಡದೆ ಕಾಡುತ್ತದೆ.  

ಶನಿ ದೋಷವನ್ನು ಪರಿಹರಿಸಿಕೊಳ್ಳಲು ಜನರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಶನಿವಾರದಂದು ದೇವಸ್ಥಾನಕ್ಕೆ ಹೋಗುವುದು, ಎಣ್ಣೆ ಅಭಿಷೇಕ ಮಾಡುವುದು ಹೀಗೆ ದೋಷ ನಿವಾರಣೆಗಾಗಿ ಹಲವು ಮಾರ್ಗಗಳನ್ನು ಆಯ್ದುಕೊಳ್ಳುತ್ತಾರೆ. ಆದರೆ ಶನಿ ದೋಷವನ್ನು ಪರಿಹಾರ ಮಾಡಿಕೊಳ್ಳು ಯಾವುದೇ ದೇವಸ್ಥಾನ ಸುತ್ತುವುದು ಬೇಡ..ಯಾವುದೇ ಮಾಂತ್ರ ಪಠಿಸುವುದು ಬೇಡ..ಎಣ್ಣೆ ಅಭಿಷೇಕ, ಯಜ್ಙ, ಯಾಗ ಏನೂ ಕೂಡ ಬೇಡ. ಆದರೆ ಈ ರೀತಿ ಮಾಡುವುದಿಂದ ನಿಮಗಿರುವ ಶನಿ ದೋಷ ಪರಿಹಾರವಾಗುತ್ತದೆ.   

ಐದು ಕರಿಮೆಣಸುಗಳನ್ನು ತೆಗೆದುಕೊಳ್ಳಿ. ರಾತ್ರಿಯಲ್ಲಿ ನಿರ್ಜನ ಸ್ಥಳಕ್ಕೆ ಹೋಗಿ ಮತ್ತು ಅವುಗಳನ್ನು ಏಳು ಬಾರಿ ನಿಮ್ಮ ತಲೆಯ ಸುತ್ತಲೂ ತಿರುಗಿಸಿ. ನಾಲ್ಕು ಮೆಣಸುಗಳನ್ನು ನಾಲ್ಕು ದಿಕ್ಕುಗಳಲ್ಲಿ ಎಸೆಯಿರಿ. ಐದನೆಯ ಮೆಣಸಿನ ಕಾಳನ್ನು ಆಕಾಶಕ್ಕೆ ಎಸೆಯಬೇಕು. ಈ ರೀತಿ ಮಾಡಿದ ನಂತರ ಹಿಂತಿರುಗಿ ನೋಡದೆ ಆ ಸ್ಥಳದಿಂದ ಹಿಂತಿರುಗಿ ಹೋಗಬೇಕು. ಈ ರೀತಿ ಮಾಡುವುದರಿಂದ ಶನಿಯಿಂದ ಆಗುವ ಸುಷ್ಪರಿಣಾಮಗಳು ಕಡುಮೆಯಾಗುತ್ತದೆ.   

ಹನ್ನೊಂದು ರೂಪಾಯಿ ತೆಗೆದುಕೊಂಡು ಕಪ್ಪು ಬಟ್ಟೆಯಲ್ಲಿ ಹಾಕಿ. ಇದಕ್ಕೆ ಸ್ವಲ್ಪ ಕರಿಮೆಣಸು ಸೇರಿಸಿ. ಇದನ್ನು ಯಾರಿಗಾದರೂ ದಾನ ಮಾಡಿ ಅಥವಾ ಶನಿ ದೇವಸ್ಥಾನದಲ್ಲಿ ಇದನ್ನು ನೀಡಬೇಕು ಇದರಿಂದ ಶನಿಯಿಂದಾಗುವ ಬಾಧೆಗಳು ದೂರವಾಗುತ್ತದೆ.   

ನಿಮ್ಮ ವೃತ್ತಿ ಅಥವಾ ಉದ್ಯೋಗದಲ್ಲಿ ನೀವು ಆಗಾಗ್ಗೆ ಅಡಚಣೆಗಳನ್ನು ಎದುರಿಸುತ್ತಿದ್ದರೆ , ನೀವು ಯಾವುದೇ ಕೆಲಸಕ್ಕಾಗಿ ಹೊರಗೆ ಹೋಗುವಾಗ ಮನೆ ಬಾಗಿಲಿಗೆ ಕರಿಮೆಣಸನ್ನು ಹಾಕಿ ಅದನ್ನು ಪಡಿಮಾಡಿ, ಇದರ ನಂತರ ನೀವು ಮನೆಯಿಂದ ಹೊರಗೆ ಹೋದರೆ ನಿಮ್ಮ ಕೆಲಸದಲ್ಲಿ ಆಗುವ ಅಡೆತಡೆಗಳು ದೂರವಾಗುತ್ತದೆ.  

ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಮನೆಯ ಯಾವುದೇ ಮೂಲೆಯಲ್ಲಿ ದೀಪ ಇಟ್ಟು ಅದರಲ್ಲಿ ಏಳೆಂಟು ಮೆಣಸನ್ನು ಹಾಕಿ ಸುಟ್ಟುಹಾಕಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ದುಷ್ಟ ಶಕ್ತಿ ಹಾಗೂ ದುಷ್ಟ ದೃಷ್ಟಿ ದೂರವಾಗುತ್ತದೆ. ಹಣಕಾಸಿನ ತೊಂದರೆಗಳು ನಿವಾರಣೆಯಾಗಿ, ಕೈಯಲ್ಲಿ ಹಣ ನಿಲ್ಲುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link