ವರ್ಷಾಂತ್ಯದಲ್ಲಿ ಶುಕ್ರನ ಅನುರಾಧ ನಕ್ಷತ್ರ ಪ್ರವೇಶ, ಧನಕುಬೇರ ಕೃಪೆಯಿಂದ ಈ ಜನರ ಮನೆಗೆ ಲಕ್ಷ್ಮಿಯ ಆಗಮನ!

Wed, 06 Dec 2023-5:54 pm,

ವೈದಿಕ ಪಂಚಾಂಗದ ಪ್ರಕಾರ ಒಟ್ಟು 27 ನಕ್ಷತ್ರಗಳಲ್ಲಿ ಅನುರಾಧಾ 17ನೇ ನಕ್ಷತ್ರವಾಗಿದೆ. ಈ ನಕ್ಷತ್ರಕ್ಕೆ ಶನಿ ಅಧಿಪತಿ. ಜೊತೆಗೆ ಈ ನಕ್ಷತ್ರದ ರಾಶಿ ಕೂಡ ವೃಶ್ಚಿಕ ಮತ್ತು ವೃಶ್ಚಿಕ ರಾಶಿಗೆ ಮಂಗಳ ಅಧಿಪತಿ. ಈ ನಕ್ಷತ್ರ ಬುದ್ಧಿಮತ್ತೆ, ಯಶಸ್ಸು, ವ್ಯಾಪಾರ, ಹೂಡಿಕೆ, ಆಧ್ಯಾತ್ಮಕ್ಕೆ ಸಂಬಂಧಿಸಿದೆ. ಶುಕ್ರನ ಈ ನಕ್ಷತ್ರಕ್ಕೆ ಆಗಮನದಿಂದ ಸಂಬಂಧ, ಆಕರ್ಷಣೆ, ಸ್ನೇಹ, ಭೋಗ-ವಿಳಾಸಗಳು ಹೆಚ್ಚಾಗುತ್ತವೆ.   

ವೃಷಭ ರಾಶಿ: ಶುಕ್ರ ಅನುರಾಧಾ ನಕ್ಷತ್ರವನ್ನು ಪ್ರವೇಶಿಸಿ 7ನೇ ಮನೆಯಲ್ಲಿ ವಿರಾಜಮಾನನಾಗಿರಲಿದ್ದಾನೆ. ಸಾಮಾನ್ಯವಾಗಿ ಈ ಭಾವವಳ್ಳಿ ವಿವಾಹ, ಬಾಳಸಂಗಾತಿ, ಪಾರ್ಟ್ನರ್ಶಿಪ್ ಬಿಸ್ನೆಸ್ ಸ್ಥಾನವಾಗಿದೆ. ಹೀಗಿರುವಾಗ ವೃಷಭ ಜಾತಕದವರಿಗೆ ಈ ಆಧಿಯಲಿ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಅಪಾರ ಧನಲಾಭದ ಸಂಕೇತಗಳು ಗೋಚರಿಸುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಪಾಟ್ನರ್ಶಿಪ್ ಬಿಸ್ನೆಸ್ ನಲ್ಲಿ ಹೆಚ್ಚು ಲಾಭದ ಸಾದ್ಯತೆಗಳಿವೆ. ಈ ಅವಧಿಯಲ್ಲಿ ಬಿಸ್ನೆಸ್ ನಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಸಿದ್ಧ ಸಾಬೀತಾಗಲಿದೆ. ವೈವಾಹಿಕ ಜೀವನದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ. ಸಂಬಂಧದಲ್ಲಿ ಸಮತೋಲನ ನಿರ್ಮಿಸುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಲವ್ ಲೈಫ್ ಕೂಡ ಒತ್ತಮವಾಗಿರಲಿದೆ. ಸೌಂದರ್ಯದಲ್ಲಿ ಹೊಸ ಹೊಳಪು ತರಲು ನೀವು ಪ್ರಯತ್ನಿಸುವಿರಿ. 

ಕರ್ಕ ರಾಶಿ: ಶುಕ್ರ ಅನುರಾಧಾ ನಕ್ಷತ್ರಕ್ಕೆ ಪ್ರವೇಶಿಸಿ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ವಿರಾಜಮಾನನಾಗಲಿದ್ದಾನೆ. ಇದರಿಂದ ಈ ರಾಶಿಗಳ ಜನರ ಲವ್ ಲೈವ್ ಉತ್ತಮವಾಗಿರಲಿದೆ. ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ. ಸಿಂಗಲ್ ಆಗಿ ಇರುವವರು ವಿವಾಹ ಬಂಧನಕ್ಕೆ ಒಳಪಡುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ಸಂತಾನ ಸುಖ ಪ್ರಾಪ್ತಿಯಾಗಲಿದೆ. ವಾಹನ ಮನೆ ಖರೀದಿಸಲು ಬಯಸುತ್ತಿರುವವರ ಆಸೆ ಈಡೇರಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡುವುದು ಭವಿಷ್ಯದಲ್ಲಿ ನಿಮಗೆ ಅಪಾರ ಲಾಭವನ್ನು ತಂದುಕೊಡಲಿದೆ. ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. 

ಸಿಂಹ ರಾಶಿ: ಅನುರಾಧಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಸುಖ ಸೌಕರ್ಯಗಳಲ್ಲಿ ವೃದ್ದಿಯನ್ನು ನೀವು ಕಾಣಬಹುದು. ಗೃಹಸ್ಥ ಜೀವನ ಅತ್ಯುತ್ತಮವಾಗಿರಲಿದೆ. ದೀರ್ಘ ಕಾಲದಿಂದ ಸಹೋದರ-ಸಹೋದರಿಯರನ್ನು ಭೇಟಿಯಾಗುವ ನಿಮ್ಮ ಆಸೆ ಈಡೇರಲಿದೆ. ಕಾರ್ಯಸ್ಥಳದಲ್ಲಿಯೂ ಕೂಡ ಬಾಸ್ ನಿಮ್ಮ ಕೆಲಸದಿಂದ ಪ್ರಸನ್ನರಾಗಲಿದ್ದಾರೆ, ಹೊಸ ಮನೆ,ವಾಹನ ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿಸುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಪಾರ ಲಾಭವಾಗಿ ಧನಧಾನ್ಯ ವೃದ್ದಿಯಾಗಲಿದೆ 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link