ಸುದೀಪ್‌ಗೆ ಮೊದಲೇ ಸಿಕ್ಕಿತ್ತಾ ಅಮ್ಮನ ಸಾವಿನ ಸೂಚನೆ! ಇದಕ್ಕಾಗಿಯೇ ಈ ಹರಕೆ ಹೊತ್ತಿದ್ರಾ ಕಿಚ್ಚ?

Sun, 20 Oct 2024-1:15 pm,

ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್‌ ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳ ಹಿಂದೆಯೇ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಹೇಳಲಾಹಿದೆ.

ಸುದೀಪ್‌ ಅವರಿಗೆ ತಾಯಿಯ ಅಗಲಿಕೆಯ ಮುನ್ಸೂಚನೆ ಸಿಕ್ಕಿತ್ತು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೆ ಬಿಗ್‌ಬಾಸ್‌ ವೇದಿಕೆ ಮೇಲೆ ಸುದೀಪ್ ತಾಯಿಯನ್ನು ನೆನಪಿಸಿಕೊಂಡಿದ್ದರು. ಈ ಸಲ ನವರಾತ್ರಿ ವೃತವನ್ನು ಸುದೀಪ್‌ ಆಚರಿಸಿದ್ದರು. 

ಬಿಸ್‌ ಬಾಸ್‌ ಕನ್ನಡ ಸೀಸನ್‌ 11 ರ ಮೊದಲ ವೀಕೆಂಡ್ ಎಪಿಸೋಡ್‌ಗೆ ಬಂದಿದ್ದ ಸುದೀಪ್ ಬರಿಗಾಲಲ್ಲಿ ವೇದಿಕೆಗೆ ಹತ್ತಿದ್ದರು. ಇದು ಸಾಕಷ್ಟು ಗಮನಸೆಳೆದಿತ್ತು.   

ನವರಾತ್ರಿ ಇದ್ದ ಕಾರಣ ತಾವು ಹೀಗೆ ಬಂದಿದ್ದಾಗಿ ಸುದೀಪ್ ಹೇಳಿದ್ದರು. ಕ್ಯಾಮೆರಾ ನೋಡುತ್ತ ʻಅಮ್ಮ ನೋಡಿ, ಬರಿಗಾಲಲ್ಲಿ ಬಂದಿರುವೆ.. ಹಬ್ಬಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡಿದ್ದೇನೆ..ʼ ಎಂದು ಸುದೀಪ್‌ ಹೇಳಿದ್ದರು.

ನಟ ಕಿಚ್ಚ ಸುದೀಪ್ ಹೀಗೆ ಹೇಳಿದ್ದೇಕೆ.. ಸುದೀಪ್ ಅವರಿಗೆ ಆಗಲೇ ಸೂಚನೆ ಸಿಕ್ಕಿತ್ತಾ? ಅಥವಾ ಅವರ ತಾಯಿಗೆ ಆ ಹೊತ್ತಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರಾ? ಹೀಗೆಲ್ಲಾ ಅನೇಕ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. 

ಸುದೀಪ್ ಅವರ ಅಮ್ಮ ಸರೋಜಾ ಅವರ ಆರೋಗ್ಯ ಆ ಹೊತ್ತಲ್ಲೇ ಹದಗೆಟ್ಟಿರಬಹುದು. ಅಮ್ಮ ಹುಶಾರಾಗಲೀ ಎಂದು ಹರಕೆ ಹೊತ್ತು ಸುದೀಪ್‌ ನವರಾತ್ರಿ ವೃತ ಪಾಲಿಸಿರಬಹುದು ಎಂದು ಅನೇಕರು ಹೇಳುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link