ʼ3 ತಿಂಗಳು ಬಾಳಿಕೆ ಬರುತ್ತಾ ಎಂದು ಕೇಳಿದವರಿಗೆ ನನ್ನ ಉತ್ತರ ಇದೇʼ ಗುಡ್ ನ್ಯೂಸ್ ನೀಡಿದ ರವೀಂದರ್-ಮಹಾಲಕ್ಷ್ಮೀ!

Mon, 02 Sep 2024-10:42 am,

ಕಾಲಿವುಡ್ ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಘಟನೆ ಎಂದರೆ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆ. ಇಬ್ಬರೂ ಸೆಪ್ಟೆಂಬರ್ 1, 2022 ರಂದು ವಿವಾಹವಾದರು. ಇವರಿಬ್ಬರ ಮದುವೆ ತಿರುಪತಿಯಲ್ಲಿ ನಡೆದಿದೆ.   

ಇವರಿಬ್ಬರ ಪ್ರೇಮವಿವಾಹವೇ ಆಗ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿತ್ತು. ಮದುವೆಯ ನಂತರ ರವೀಂದರ್ ಕೂಡ ಹಲವಾರು ಟೀಕೆಗಳನ್ನು ಎದುರಿಸಿದರು. ಅದೇ ರೀತಿ ಮಹಾಲಕ್ಷ್ಮಿ ಕೂಡ ಹಣಕ್ಕಾಗಿ ರವೀಂದರ್ ನನ್ನು ಮದುವೆಯಾಗಿದ್ದಾಳೆ ಎನ್ನುವ ಮಾತು ಕೇಳಿ ಬಂದಿದ್ದವು.   

ಆ ಎಲ್ಲ ಟೀಕೆಗಳನ್ನು ಧಿಕ್ಕರಿಸಿ ಇದೀಗ ಈ ಜೋಡಿ ಯಶಸ್ವಿಯಾಗಿ 2 ವರ್ಷ ಪೂರೈಸಿದೆ. ನಿನ್ನೆ ಅವರ 2ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಆಗ ತೆಗೆದ ಫೋಟೋಗಳನ್ನು ರವೀಂದರ್ ಪೋಸ್ಟ್ ಮಾಡಿದ್ದು, ಕ್ಯಾಪ್ಷನ್‌ ಕೂಡ ಹಾಕಿದ್ದಾರೆ.   

ರವೀಂದರ್ ತಮ್ಮ ಪತ್ನಿ ಮಹಾಲಕ್ಷ್ಮಿಯೊಂದಿಗೆ ಕೇಕ್ ಕತ್ತರಿಸುವ ಪೋಟೋ ಪೋಸ್ಟ್ ಮಾಡಿದ್ದಾರೆ.. ಅವರ ಮದುವೆ 3 ತಿಂಗಳವರೆಗೆ ಮಾತ್ರ ಇರುತ್ತೇ ಎಂದು ಕೇಳುವವರಿಗೆ ಇದು ನನ್ನ ಪ್ರೀತಿಯ ಉತ್ತರ ಎಂದು ಹೇಳಿದ್ದಾರೆ.   

"ಆ ಕಷ್ಟದ ಸಮಯದಲ್ಲಿಯೂ ನೀನು ನನ್ನನ್ನು ಬಿಗಿಯಾಗಿ ಹಿಡಿದುಕೊಂಡು ನನ್ನ ಚಿಂತೆಯನ್ನೆಲ್ಲ ಮರೆಯುವಂತೆ ಮಾಡಿದಿ. ಎಲ್ಲರಿಗೂ ಒಂದು ಸಲಹೆ... ಜೀವನದಲ್ಲಿ ಬೇರೆಯಾಗಿ ಬದುಕಿದವರು ಒಂದೆಡೆ, ಪ್ರೀತಿಸುವವರಿಗಾಗಿ ಬದುಕಬೇಕು ಎಂಬ ತತ್ವದೊಂದಿಗೆ ಬದುಕುವವರು ಒಂದು ಕಡೆ" ಎಂದು ರವೀಂದರ್ ತಮ್ಮ ಪೋಸ್ಟ್ ಕೆಳಗೆ ಬರೆದುಕೊಂಡಿದ್ದಾರೆ.. ಅವರ ಈ ಪೋಸ್ಟ್‌ಗೆ ಲೈಕ್‌ಗಳು ಹರಿದುಬರುತ್ತಿದ್ದಂತೆ, ಹಾರೈಕೆಗಳು ಕೂಡ ಬರುತ್ತಿವೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link