ಯುವ ಪತ್ನಿ ಶ್ರೀದೇವಿಗೆ ಅನೈತಿಕ ಸಂಬಂಧ? ಆತನಿಂದಲೇ ಮಗು ಪಡೆಯುವ ಇಚ್ಛೆ!! ಈ ʻರಾಧಯ್ಯʼ ಯಾರು ಗೊತ್ತೇ?

Tue, 11 Jun 2024-7:38 am,

ಪತ್ನಿಯಿಂದ ವಿಚ್ಛೇದನ ಕೋರಿ ಯುವ ಕೋರ್ಟ್​ ಮೆಟ್ಟಿಲೇರಿದ್ದಾರೆ. ಪತ್ನಿಯಿಂದ ಕಿರುಕುಳ ಸೇರಿದಂತೆ ಅನೇಕ ಆರೋಪಗಳನ್ನು ಮಾಡಲಾಗಿದೆ. ಯವ ವಿಚ್ಛೇದನ ಸುದ್ದಿ ಸದ್ದು ಮಾಡುತ್ತಿದ್ದಂತೆ ಯುವ ಪರ ವಕೀಲರು ಸುದ್ದಿಗೋಷ್ಠಿ ನಡೆಸಿದ್ದಾರೆ. 

ಶ್ರೀದೇವಿ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದಾರೆ. ಶ್ರೀದೇವಿಗೆ ಅನೈತಿಕ ಸಂಬಂಧವಿದೆ ಎಂಬ ಬಹುದೊಡ್ಡ ಆರೋಪ ಮಾಡಲಾಗಿದೆ. ಇದಲ್ಲದೇ ಯುವ ಪತ್ನಿ ಶ್ರೀದೇವಿ ರಾಜ್‌ಕುಮಾರ್‌ ಅಕಾಡೆಮಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.  

ಮಾನಸಿಕ ಹಾಗೂ ದೈಹಿಕ ಹಲ್ಲೆಯ ಆರೋಪವನ್ನು ಶ್ರೀದೇವಿ ಅವರ ಮೇಲಿದೆ. ಶ್ರೀದೇವಿ ಬೇರೆ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದು, ಮೊದಲು ಈ ಬಗ್ಗೆ ಲೀಗಲ್ ನೋಟಿಸ್ ನೀಡಲಾಗಿತ್ತು ಎಂದು ಯುವ ಪರ ವಕೀಲರು ಹೇಳಿದ್ದಾರೆ.

ಶ್ರೀದೇವಿ ಐಎಎಸ್‌ ಮಾಡುವ ಪ್ರಯತ್ನ ಮಾಡಿದ್ದರು. ಒಂದೆರಡು ದಿನ ಮಾತ್ರ ಕ್ಲಾಸ್‌ಗೆ ಹೋದ ಹಾಗೆ ಮಾಡಿ, ನಂತರ ಯುವರಾಜ್‌ ಜೊತೆ ಜಗಳ ಶುರು ಮಾಡಿದ್ದರು. ರಾತ್ರಿ ವೇಳೆ ಬಾಯ್‌ಫ್ರೆಂಡ್‌ ಮನೆಗೆ ಹೋಗುತ್ತಿದ್ದರು.   

ರಾತ್ರಿ ಹೋದವರು ಮನೆಗೆ ಬೆಳಗ್ಗೆ ಅಳುತ್ತಾ ಮನೆಗೆ ಬರುತ್ತಿದ್ದರಂತೆ.  ಮದುವೆಗೂ ಮುನ್ನ ಆಕೆಗೆ ಬೇರೆ ಸಂಬಂಧವಿತ್ತು ಎಂದು ಹೇಳಲಾಗುತ್ತದೆ. ಈ ಕುರಿತಂತೆ ಶ್ರೀದೇವಿಗೆ ಈಗಾಗಲೇ ಲೀಗಲ್‌ ನೋಟಿಸ್‌ ಕೂಡ ನೀಡಲಾಗಿದೆ. ಇದಕ್ಕೆ ಉತ್ತರ ನೀಡಿಲ್ಲ ಎಂದು ಯುವ ಪರ ವಕೀಲರು ಹೇಳಿದ್ದಾರೆ.

ʻರಾಧಯ್ಯʼ ಎನ್ನುವ ವ್ಯಕ್ತಿಯ ಜೊತೆ ಶ್ರೀದೇವಿಗೆ ಸಂಬಂಧವಿದೆ. ಯುವ ಜೊತೆ ಮದುವೆ ಆದ ಮೇಲೆಯೂ ಸಂಬಂಧ ಮುಂದುವರೆಸಿದ್ದರು ಎಂದು ಯುವ ಪರ ವಕೀಲರು ಆರೋಪಿಸಿದ್ದಾರೆ.

ಕುಟುಂಬ ಸರಿ ಮಾಡುವ ಪ್ರಯತ್ನ ಯುವರಾಜ್ ಕುಮಾರ್‌ ಹಲವು ಬಾರಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಶ್ರೀದೇವಿ  ಬಾಯ್ ಫ್ರೆಂಡ್ ರಾದಯ್ಯನಿಂದಲೇ ಮಗು ಪಡೆಯಲು ಬಯಸಿದ್ದರು ಎಂದು ಯುವ ಪರ ವಕೀಲರು ಆರೋಪಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link