Surya Shani Yuti: ಕುಂಭ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ ಸೂರ್ಯ-ಶನಿ, ನಿಮ್ಮ ಮೇಲೆ ಏನು ಪರಿಣಾಮ

Tue, 20 Feb 2024-6:47 am,

ಸೂರ್ಯ-ಶನಿ ಸಂಯೋಗ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ಮತ್ತು ಶನಿ ಪ್ರಸ್ತುತ ಒಂದೇ ರಾಶಿಯಲ್ಲಿ ಸಂಚರಿಸುತ್ತಿವೆ. ಕುಂಭ ರಾಶಿಯಲ್ಲಿ ಸೂರ್ಯ ಶನಿಯ ಯುತಿಯ್ಯ್ ಎಲ್ಲಾ ರಾಶಿಯ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಪಿತಾ-ಪುತ್ರರ ಸಂಯೋಗ ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ಎಂದು ತಿಳಿಯಿರಿ. 

ಸೂರ್ಯ-ಶನಿ ಯುತಿಯ ಪರಿಣಾಮವಾಗಿ ಮೇಷ ರಾಶಿಯವರಿಗೆ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಶುಭ ಸಮಯ. ಆರ್ಥಿಕ ಪ್ರಗತಿ ಸಾಧ್ಯತೆ ಇದೆ. 

ಪಿತಾ-ಪುತ್ರರ ಸಂಯೋಗದಿಂದಾಗಿ ವೃಷಭ ರಾಶಿಯವರು ನಿಮ್ಮ ಬಾಕಿ ಉಳಿದಿರುವ ಹಳೆಯ ಕೆಲಸಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬಹುದು. ವೃತ್ತಿ ಬದುಕಿನಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. 

ಈ ಸಮಯದಲ್ಲಿ ಮಿಥುನ ರಾಶಿಯವರ ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗಲಿವೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಬದುಕಿನಲ್ಲೂ ಶುಭ ಫಲಗಳನ್ನು ಅನುಭವಿಸುವಿರಿ. 

ಕರ್ಕಾಟಕ ರಾಶಿಯ ಜನರು ಈ ವೇಳೆ ಯಾವುದೇ ನಿರ್ಧಾರ ಕೈಗೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯವಾಯಿದೆ. ಇಲ್ಲದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. 

ಪಿತಾ-ಪುತ್ರರ ಸಂಯೋಗವು ಸಿಂಹ ರಾಶಿಯ ವ್ಯಾಪಾರಸ್ಥರಿಗೆ ಅದರಲ್ಲೂ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ತೊಂದರೆಗಳನ್ನು ಹೆಚ್ಚಿಸಲಿದೆ. ಆದಾಗ್ಯೂ, ಹೊಸ ಉದ್ಯೋಗ ಆರಂಭಿಸಲು ಇದು ಸುಸಮಯ. ಬಂಪರ್ ಆರ್ಥಿಕ ಲಾಭ ಸಾಧ್ಯತೆಯೂ ಇದೆ. 

ಸೂರ್ಯ -ಶನಿ ಸಂಯೋಜನೆಯು ಕನ್ಯಾ ರಾಶಿಯವರಿಗೆ ಮಿಶ್ರ ಫಲಗಳನ್ನು ತರಲಿದೆ. ಈ ವೇಳೆ ಮನೆ ದುರಸ್ತಿಗಾಗಿ ಹೆಚ್ಚಿನ ಹಣ ವ್ಯಯವಾಗಲಿದೆ. ಜೀವನದ ಕೆಲವು ಅಂಶಗಳಲ್ಲಿ ಸವಾಲಿನ ಸಮಯ. 

ತುಲಾ ರಾಶಿಯ ವ್ಯಾಪಾರಸ್ಥರಿಗೆ ಇದು ಒಳ್ಳೆಯ ಸಮಯ. ಆದಾಗ್ಯೂ, ಉದ್ಯೋಗಸ್ಥರಿಗೆ ಸಮಯ ಅಷ್ಟು ಚೆನ್ನಾಗಿಲ್ಲದ ಕಾರಣ ತಾಳ್ಮೆಯಿಂದ ಇರುವುದು ಒಳ್ಳೆಯದು. ನಿಮ್ಮ ಹೆತ್ತವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. 

ವೃಶ್ಚಿಕ ರಾಶಿಯವರಿಗೆ ಪಿತಾ-ಪುತ್ರರ ಯುತಿಯ ಸಂದರ್ಭದಲ್ಲಿ  ಕೆಲಸದ ಸ್ವರೂಪದಲ್ಲಿನ ಬದಲಾವಣೆಯಿಂದ ಲಾಭ ಸಾಧ್ಯತೆ ಕಂಡು ಬರುತ್ತಿದೆ. ಆದಾಗ್ಯೂ, ಅಧಿಕ ಖರ್ಚು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. 

ಧನು ರಾಶಿಯವರಿಗೆ ಈ ಸಮಯದಲ್ಲಿ ನಿಮ್ಮ ಹಳೆಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿವೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸಂಕಷ್ಟಗಳಿಂದ ಪಾರಾಗುವಿರಿ. 

ಪಿತಾ-ಪುತ್ರರ ಸಂಯೋಗವು ಮಕರ ರಾಶಿಯವರಿ ಅಷ್ಟು ಉತ್ತಮವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಸಂಬಂಧಗಳಲ್ಲಿ ಬಿರುಕುಂಟಾಗುವ ಸಾಧ್ಯತೆ ಇದೆ. ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತಪ್ಪಿಸಿ. 

ಸ್ವ ರಾಶಿಯಲ್ಲಿ ಪಿತಾ-ಪುತ್ರರ ಸಂಯೋಗವು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ದೀರ್ಘ ಸಮಯದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 

ಈ ಸಮಯದಲ್ಲಿ ಮೀನ ರಾಶಿಯವರಿಗೆ ಶತ್ರುಗಳಿಂದ ತೊಂದರೆ ಹೆಚ್ಚಾಗಲಿದೆ. ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ. ವಿವಾದಗಳಿಂದ ಸಾಧ್ಯವಾದಷ್ಟು ದೂರವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link