ಪಂದ್ಯಕ್ಕೂ ಮುಂಚೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಭ್ಯಾಸ ಮಾಡಲ್ಲ..?ಇಷ್ಟೊಂದು ಬೇಜವಬ್ದಾರಿ ಯಾಕ

Sat, 27 Jul 2024-2:47 pm,

ನಾರ್ಮಲ್ ಆಗಿ ಕ್ರಿಕೆಟರ್ಸ್ ಪಂದ್ಯಕ್ಕೂ ಮುಂಚೆ ಅಭಸ್ಯ ಮಾಡೋದು ಗೊತ್ತಿರುವ ವಿಚಾರ ಆದ್ರೆ ಟೀಂ ಇಂಡಿಯಾದ ನೂತನ ನಾಯಕ ಸುರ್ಯಕುಮಾರ್ ಯಾದವ್ ಅವರಿಗೆ ಪಂದ್ಯಕ್ಕೂ ಮುಂಚೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ಅಭ್ಯಾಸ ಇಲ್ಲವಂತೆ.

ಸರ್ಯಕುಮಾರ್ ಯಾದವ್ ಶ್ರೀಲಂಕಾದ ಸರಣಿಯೊಂದಿಗೆ ಟೀಂ ಇಂಡಿಯಾದ ಟಿ20 ಪಂದ್ಯದ ನಾಯಕತ್ವ ಜವಾಬ್ಧಾರಿಯನ್ನು ವಹಿಸಿಕೊಳ್ಳಲಿದ್ದಾರೆ.ನಾಯಕತ್ವ ವಹಿಸಿಕೊಂಡ ನಂತರ ಸೂರ್ಯಕುಮಾರ ಯಾದವ್ ಅವರಿಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ. ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ಆಟಗಾರರ ಮೇಲೆ ಸೂರ್ಯ ಕಣ್ಣಿಟ್ಟಿದ್ದಾರೆ.  

ಶ್ರೀಲಂಕಾ ವಿರುದ್ಧ ಪ್ರವಾಸಕ್ಕೆ ಈಗಾಗಲೇ ಭರತ ತಂಡ ಶ್ರೀಲಂಕಾಕ್ಕೆ ಹೋಗಿ ಇಳಿದಿದೆ, ಆಟಗಾರರು ಪಂದ್ಯಕ್ಕೆ ಅಭ್ಯಾಸ ಶುರು ಮಾಡಿದ್ದಾರೆ, ಆದರೆ ನೂತನ ಕ್ಯಾಪ್ಟನ್ ಸೂರ್ಯ ಮಾತ್ರ ಎರಡು ದಿನಗಳಿಂದ ಬ್ಯಾಟಿಂಗ್ ಅಭ್ಯಾಸ ಮಾಡಿಲ್ಲ.  

ಅಚ್ಚರಿಯ ಸಂಗತಿ ಏನು ಅಂದರೆ ಸುರ್ಯಕುಮಾರ ಯಾದವ್ ಈ ಪಂದ್ಯಕ್ಕೆ ಅಷ್ಟೇ ಅಲ್ಲ ಯಾವುದೇ ಪಂದ್ಯಕ್ಕೂ ಮುಂಚೆ ಬ್ಯಾಟಿಂಗ್ ಅಭ್ಯಾಸ ಮಾಡುವುದಿಲ್ಲವಂತೆ.  

ಸೂರ್ಯಾಕುಮಾರ್ ಯಾದವ್ ಯಾವುದೇ ಪಂದ್ಯಕ್ಕೂ ಮುಂಚೆ ಅಭ್ಯಾಸ ಮಾಡಲ್ಲ ಯಾಕೆಂದರೆ ಅವರು ಪಂದ್ಯಕ್ಕೂ ಮುಂಚೆ ಒತ್ತಡಕ್ಕೆ ಒಳಗಾಗಲು ಬಯಸದೇ, ಶಾಂತವಾಗಿರಲು ಇಸ್ಟ ಪಡುತ್ತರಂತೆ.  

ಪಂದ್ಯಕ್ಕೂ ಮುಂಚೆ ಅಭ್ಯಾಸ ಮಾಡದೆ ಇರುವುದರಿಂದ ತಾಜಾತನ ಕಾಯ್ದುಕೊಳ್ಳಬಹುದು, ಇದರಿಂದ ಮನಸು ಶಾಂತಿಯಿಂದ ಕೂಡಿರುತ್ತದೆ. ಇದರಿಂದ ಫೀಲ್ಡ್ ನಲ್ಲಿ ಬ್ಯಾಟಿಂಗ್ ಮಾಡುವಾಗ ಕಾನ್ಫ್ಯೂಷನ್ ಇಲ್ಲದೇ , ಹೊಸ ಸ್ಟೇಟಿಕ್ಸ್ ಬಳಸಿ ಬ್ಯಾಟಿಂಗ್ ಮಾಡಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link