ದರ್ಶನ್‌ ಸುದೀಪ್‌ ಸ್ನೇಹದಲ್ಲಿ ಬಿರುಕು ಮೂಡಲು ಕಾರಣವಾಗಿದ್ದು ಅದೊಂದು ಹೇಳಿಕೆ! ಜೀವದ ಗೆಳೆಯರಲ್ಲಿ ಮನಸ್ಥಾಪ ತಂದ ʼಆʼ ಮಾತೇನು?!

Thu, 22 Aug 2024-3:49 pm,

ಅಂಬರೀಶ್‌ ಮತ್ತು ವಿಷ್ಣುವರ್ಧನ್‌ ನಂತರ ದರ್ಶನ್‌ ಹಾಗೂ ಕಿಚ್ಚ ಸುದೀಪ್‌  ಕನ್ನಡ ಚಿತ್ರರಂಗದ ದಿಗ್ಗಜರು... ಕುಚಿಕುಗಳು ಎನಿಸಿಕೊಂಡಿದ್ದರು.. ಆದರೆ ಹಲವು ವರ್ಷಗಳ ಹಿಂದೆಯೇ ಇವರಿಬ್ಬರ ಸ್ನೇಹ ಮುರಿದುಬಿದ್ದಿತ್ತು..     

ಸ್ಯಾಂಡಲ್‌ವುಡ್‌ಗೆ ಒಂದೇ ಸಲ ಎಂಟ್ರಿಕೊಟ್ಟ ದರ್ಶನ್‌ ಹಾಗೂ ಸುದೀಪ್‌ ಇಬ್ಬರು ಎಲ್ಲಿಗೆ ಹೋದ್ರು ಒಟ್ಟಿಗೆ ಹೋಗ್ತಾ ಇದ್ರು ಆದರೆ ಒಂದು ದಿನ ದರ್ಶನ್‌ ಏಕಾಏಕಿ ನನಗೂ ಸುದೀಪ್‌ ಮಧ್ಯೆ ಯಾವುದೇ ಸ್ನೇಹವಿಲ್ಲ.. ನಾವಿಬ್ಬರೂ ಬರೀ ಚಿತ್ರರಂಗದಲ್ಲಿರುವ ನಟರು ಮಾತ್ರ ಎಂದು ಪೋಸ್ಟ್‌ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದರು..     

ಆದರೆ ಈ ಮುನಿಸಿಗೆ ಕಾರಣವೆಂದರೇ ನಟ ಸುದೀಪ್‌ ಸಂದರ್ಶನವೊಂದರಲ್ಲಿ ಕೊಟ್ಟಂತಹ ಹೇಳಿಕೆಯಾಗಿತ್ತು.. ಹೌದು ದರ್ಶನ್‌ ಅಭಿನಯದ ಮೊದಲ ಸಿನಿಮಾ ಮೆಜೆಸ್ಟಿಕ್‌..   

ಈ ಮೆಜೆಸ್ಟಿಕ್‌ ಚಿತ್ರಕ್ಕೆ ಸಂಬಂಧಪಟ್ಟಂತೆ ಸುದೀಪ್‌ "ಆ ಚಿತ್ರದ ಆಫರ್ ನನಗೆ ಬಂದಿತ್ತು ಆದರೆ ನಾನು ಬ್ಯುಸಿ ಇದ್ದೆ.. ಹೀಗಾಗಿ ದರ್ಶನ್‌ ಅವರಿಂದ ಮಾಡಿಸಿ ಎಂದು ಹೇಳಿದ್ದೆ ಎಂದಿದ್ದರು.. ಆಗ ಸುದೀಪ್‌ ಕೊಟ್ಟ ಈ ಹೇಳಿಕೆ ದರ್ಶನ್‌ ಬೇಸರಕ್ಕೆ ಕಾರಣವಾಗಿತ್ತು..     

ನಟ ದರ್ಶನ್‌ ಸುದೀಪ್‌ ಹೇಳಿಕೆಯನ್ನು ಖಂಡಿಸಿ,.. ಈ ಹೇಳಿಕೆಗೆ ಅವರು ಸ್ಪಷ್ಟನೆ ನೀಡಲಿ... ನನಗೆ ಅವರಿಂದ ಹೇಗೆ ಅವಕಾಶ ತಿಳಿಸಲಿ ಎಂದು ಆಗ್ರಹಿಸಿದ್ರು.. ಮತ್ತೊಂದು ಟ್ವೀಟ್‌ ಮಾಡಿ ನನಗೆ ಸುದೀಪ್‌ ಅವರಿಂದ ಸಿನಿಮಾ ಅವಕಾಶ ಸಿಕ್ಕಿಲ್ಲ.. ಎಂದು ಹೇಳಿದ್ದರು..     

 ಅಲ್ಲಿಂದ ಶುರುವಾದ ಇವರ ಮನಸ್ಥಾಪ ಇಂದಿಗೂ ಹಾಗೇ ಇದೆ.. ಇಬ್ಬರೂ ಒಂದಾಗುತ್ತಾರೆ ಎಂದು ಕನ್ನಡಾಭಿಮಾನಿಗಳು ಕಾಯುತ್ತಿದ್ದರು,, ಆದರೆ ಇದೀಗ ದರ್ಶನ್‌ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ..     

ಸದ್ಯ ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.. ದಿನದಿಂದ ದಿನಕ್ಕೆ ಈ ಕೇಸ್‌ ಹೊಸ ತಿರುವನ್ನು ಪಡೆದುಕೊಳ್ಳುತ್ತಿದ್ದು, ನಟ ದರ್ಶನ್‌ ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ ಎಂದು ವರದಿಗಳು ಹೇಳುತ್ತಿವೆ..   

ಆದರೆ ದರ್ಶನ್‌ ಅಭಿಮಾನಿಗಳು ಅವರು ಹೊರ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.. ಅಲ್ಲದೇ ದರ್ಶನ್‌ ಅವರನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಖ್ಯಾತ ನಾಮರೆಲ್ಲ ಭೇಟಿ ನೀಡಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link