ಪರಮ ಮಿತ್ರರಾಗಿದ್ದ ವಿಷ್ಣುವರ್ಧನ್ -ದ್ವಾರಕೀಶ್ ನಡುವಿನ ಸ್ನೇಹ ಮುರಿದು ಬಿದ್ದದ್ದು ಇದೊಂದೇ ಕಾರಣಕ್ಕೆ!

Tue, 16 Apr 2024-1:24 pm,

ಕರ್ನಾಟಕದ ಕುಳ್ಳ ಎಂದೇ ಹೆಸರಾಗಿದ್ದ ನಟ, ನಿರ್ಮಾಪಕ ದ್ವಾರಕೀಶ್ ತನ್ನ  ೮೧ ನೆ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ನೀಡಿದ ಕೊಡುಗೆ ಅಪಾರ. 

ದ್ವಾರಕೀಶ್ ಎಂದಾಕ್ಷಣ ನೆನಪಿಗೆ ಬರುವುದು ವಿಷ್ಣವರ್ಧನ್, ದ್ವಾರಕೀಶ್ ಮತ್ತು ವಿಷ್ಣವರ್ಧನ್ ಸ್ನೇಹ ಚಂದನವನದಲ್ಲಿ ಭಾರೀ ಸದ್ದು ಮಾಡಿತ್ತು. ಇವರಿಬ್ಬರು ಜೊತೆಯಾಗಿ ನಟಿಸಿದ ಚಿತ್ರಗಳೆಲ್ಲಾ ಹಿಟ್ ಸಿನಿಮಾಗಳೇ.

ಆದರೆ ಪರಮ ಮಿತ್ರರಾಗಿದ್ದ ಇವರಿಬ್ಬರ ಸ್ನೇಹದಲ್ಲಿಯೂ ಒಂದು ಕಾಲದಲ್ಲಿ ಬಿರುಕು ಕಾಣಿಸಿಕೊಂಡಿತ್ತಂತೆ. ಇದಾದ ನಂತರ ಸತತ ಸೋಲಿನ ಕಾರಣದಿಂದ  ದ್ವಾರಕೀಶ್ ಆರ್ಥಿಕವಾಗಿಯೂ ಕುಗ್ಗಿ ಹೋಗುತ್ತಾರೆ. ತಮ್ಮ ಮನೆ ಕಳೆದುಕೊಳ್ಳುವ ಹಂತ ತಲುಪುತ್ತಾರೆ. 

ಅಂಥಹ ಸಂದರ್ಭದಲ್ಲಿಯೂ ಯಾರ ಎದುರೂ ಕೈ ಚಾಚೂವುದೂ ಇಲ್ಲ. ಯಾರ ಸಹಾಯವನ್ನೂ ಪಡೆಯುವುದೂ ಇಲ್ಲ.ಆದರೆ ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಲು ಒಪ್ಪಿ ಆಪ್ತಮಿತ್ರ ಮಾಡುತ್ತಾರೆ. 

ಈ ಸಿನಿಮಾ ಭರ್ಜರಿ ಹಿಟ್ ಕಾಣುತ್ತದೆ. ಆದರೆ ವಿಷ್ಣುವರ್ಧನ್ ಗೆ ಒಂದು ಬ್ರೇಕ್ ಬೇಕಿತ್ತು. ಹಾಗಾಗಿ ಈ ಚಿತ್ರ ಮಾಡಿದೆ ಎನ್ನುವ ಹೇಳಿಕೆ ನೀಡುತ್ತಾರಂತೆ ದ್ವಾರಕೀಶ್. ಇದು ಅವರ ಮಧ್ಯೆ ಬಿರುಕು ಮತ್ತಷ್ಟು ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link