ರಾಜಮೌಳಿ ಮೇಲೆ ಮುನಿಸಿಕೊಂಡಿದ್ದ ಸ್ಟಾರ್‌ ನಟಿ..15 ಕೋಟಿ ಸಂಭಾವನೆಗಾಗಿ ಸಿನಿಮಾ ತಿರಸ್ಕರಿಸಿದ ಈಕೆ ಯಾರು ಗೊತ್ತಾ..?

Wed, 21 Aug 2024-9:08 am,

 ರಾಜಮೌಳಿ ಸಿನಿಮಾಗಳೆಂದರೆ ಖಂಡಿತಾ ಡಿಫರೆಂಟ್‌ ಜಾನರ್‌ ಸಿನಿಮಾ ಎಂದರ್ಥ. ಈ ಸ್ಟಾರ್‌ ಡೈರೆಕ್ಟರ್‌ ಸಿನಿಮಾದಲ್ಲಿ ನಟಿಸಲು ಸ್ಟಾರ್‌ ನಟ ನಟಿಯರು ಕ್ಯೂನಲ್ಲಿ ನಿಲ್ಲುತ್ತಾರೆ. ಸಿನಿಮಾದಲ್ಲಿ ನಮಗೊಂದು ಚ್ಯಾನ್ಸ್‌ ಸಿಗಲ್ವಾ ಅಂತ ಹಲವು ವರ್ಷಗಳ ತಪಸ್ಸು ಮಾಡುತ್ತಾರೆ. 

ರಾಜಮೌಳಿಯ ಹೆಸರು ಕೇಳು ಬರುತ್ತಿದ್ದಂತೆಯೇ ಅಭಿಮಾನಿಗಲಲ್ಲಿ ಏನೋ ಒಂದು ಕುತೂಹಲ. ಈ ಡೈರೆಕ್ಟರ್‌ ಒಂದು ಸಿನಿಮಾ ಅನೌಂನ್ಸ್‌ ಮಾಡ್ತಿದ್ದಾರೆ ಎಂದರೆ, ಖಂಡಿತಾ ಜನರು ಈ ಸಿನಿಮಾಗಾಗಿ ಅನೌಂನ್ಸ್‌ ಆದ ದಿನದಿಂದಲೇ ಕಾತುರದಿಂದ ಕಾಯುತ್ತಾ ಕೂರುತ್ತಾರೆ.  

ರಾಜಮೌಳಿ ಸಿನಿಮಾ ಹಾಗೂ ಟೈರೆಕ್ಷನ್‌ ಕಂಡು ಮನಸೋಲದವರೇ ಇಲ್ಲ. ಹಾಲಿವುಡ್‌ನ ನಿರ್ದೇಶಕರಾದ ಸ್ಟೀವನ್‌ ಸ್ಪೀಲ್‌ ಬರ್ಗ್‌ ಹಾಗೂ ಜೇಮ್ಸ್‌ ಕ್ಯಾಮರೂನ್‌ ನಂತವರು ಕೂಡ ರಾಜಮೌಳಿ ಅವರ ಮೇಕಿಂಗ್‌ ನೋಡಿ ಭೇಷ್‌ ಎಂದಿದ್ದಾರೆ.   

ತೆಲುಗು ಸಿನಿಮಾಗಳನ್ನು ಬಾಲಿವುಡ್ ಇಂಡಸ್ಟ್ರಿಯವರು ಕೀಳಾಗಿ ಕಾಣುತ್ತಿದ್ದ ಕಾಲದಲ್ಲಿ ಹಾಲಿವುಡ್ ಪ್ರೇಕ್ಷಕರು ತೆಲುಗು ಸಿನಿಮಾಗಳ ಬಗ್ಗೆ ಮಾತನಾಡುವಂತೆ ಮಾಡಿದ ಕೀರ್ತಿ ರಾಜಮೌಳಿ ಅವರಿಗೆ ಸಲ್ಲುತ್ತದೆ.  

ರಾಜಮೌಳಿ ಸಿನಿಮಾದಲ್ಲಿ 5 ನಿಮಿಷ ಕಾಣಿಸಿಕೊಂಡರೂ ಪರವಾಗಿಲ್ಲ ಎಂದುಕೊಳ್ಳುವ ಸ್ಟಾರ್ ನಟರು ಅನೇಕರಿದ್ದಾರೆ. ಆದರೆ ಇಂತಹ ಡೈರೆಕ್ಟರ್‌ನ ಸಿನಿಮಾದಲ್ಲಿ ನಟಿಸಲು ಒಬ್ಬ ನಟಿ ಒಲ್ಲೆ ಎಂದಿದ್ದರಂತೆ.  

ಸ್ಟಾರ್‌ ನಟಿ ಈ ಸಿನಿಮಾ ತಿರಸ್ಕರಿಸಿದ್ದು ಬೇರೆ ಯಾವ ಕಾರಣಕ್ಕೂ ಅಲ್ಲ, ಸಂಭಾವನೆಯ ವಿಚಾರಕ್ಕೆ.  

ಆಗಿನ ಕಾಲಕ್ಕೆ ತಮ್ಮ ಸೌಂದರ್ಯ ಹಾಗೂ ನಟನೆ ಎರಡರಿಂದಲೂ ಸಿನಿಮಾವನ್ನು ಆಲಿದ್ದ ನಟಿ ಶ್ರೀದೇವಿ. ಆಗಿನ ಕಾಲಕ್ಕೆ ಈಕೆ ಸ್ಟಾರ್‌ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎಂದೇ ಹೇಳ ಬಹುದು.  

ಸುಮಾರು ಎರಡೂವರೆ ದಶಕಗಳಿಂದ ಉತ್ತರ ಮತ್ತು ದಕ್ಷಿಣದಲ್ಲಿ ಇನ್ನಿಲ್ಲದ ಕ್ರೇಜ್ ಗಳಿಸಿರುವ ನಟಿ ಶ್ರೀದೇವಿ ಅವರನ್ನು ರಾಜಮೌಳಿ ಅವರು ಬಾಹುಬಲಿ ಸಿನಿಮಾಗಾಗಿ ಸಂಪರ್ಕಿಸಿದ್ದರಂತೆ.   

ಬಾಹುಬಲಿಯಲ್ಲಿ ಶಿವಗಾಮಿ ಪಾತ್ರಕ್ಕಾಗಿ ಮೊದಲು ಶ್ರೀದೇವಿ ಅವರನ್ನು ಸಂಪರ್ಕಿಸಲಾಗಿತ್ತಂತೆ. ಈ ಪಾತ್ರಕ್ಕಾಗಿ ಆಕೆ 15 ಕೋಟಿ ಸಂಭಾವನೆ ಕೇಳಿದ್ದರಂತೆ. ಇದೇ ಕಾರಣದಿಂದ ಒಪ್ಪಂದ ಸರಿ ಬರದೆ ಈ ಪಾತ್ರಕ್ಕೆ ರಮ್ಯ ಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತಂತೆ.  

ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ರಾಜಮೌಳಿ ಚಿತ್ರದ ಬಜೆಟ್ ಈಗಾಗಲೇ ಜಾಸ್ತಿಯಿದ್ದು ಅಷ್ಟು ಸಂಭಾವನೆ ನೀಡಲಾಗುವುದಿಲ್ಲ ಎಂದಿದ್ದರಂತೆ ರಾಜಮೌಳಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link