ಶ್ರೀಕೃಷ್ಣನ ಹೃದಯದಲ್ಲಿದೆ ಈ 4 ರಾಶಿಗಳಿಗೆ ತೀರಾ ವಿಶೇಷ ಸ್ಥಾನ: ಬೇಡಿದನ್ನೆಲ್ಲಾ ಮನಸಾರೆ ನೀಡುವ ದೇವಕಿಸುತ

Thu, 07 Sep 2023-10:45 am,

ಪುರಾಣಗಳ ಪ್ರಕಾರ, ಶ್ರೀ ಕೃಷ್ಣನು ಭಗವಾನ್ ವಿಷ್ಣುವಿನ ಎಂಟನೇ ಅವತಾರ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೆಯ ದಿನ ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಶ್ರೀಕೃಷ್ಣನಿಗೆ ರಾಶಿಚಕ್ರದ 4 ರಾಶಿಗಳೆಂದರೆ ಪಂಚಪ್ರಾಣ, ಈ ರಾಶಿಯವರು ಬೇಡಿದ್ದನ್ನೆಲ್ಲಾ ಕ್ಷಣದಲ್ಲಿ ಕರುಣಿಸುತ್ತಾರೆ ಎಂಬುದು ನಂಬಿಕೆ.

ಲಡ್ಡು ಗೋಪಾಲನ ವಿಶೇಷ ಕೃಪೆಯನ್ನು ಹೊಂದಿರುವ ಆ 4 ರಾಶಿಗಳು ಯಾವುವು ಎಂದು ನೋಡೋಣ.

ವೃಷಭ ರಾಶಿ: ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ವೃಷಭ ರಾಶಿಯು ಶ್ರೀಕೃಷ್ಣನಿಗೆ ಪ್ರಿಯವಾಗಿದೆ. ಈ ರಾಶಿಯವರಿಗೆ ಶ್ರೀಕೃಷ್ಣನು ವಿಶೇಷವಾದ ಅನುಗ್ರಹವನ್ನು ನೀಡುತ್ತಾನೆ. ಕೇವಲ ಜನ್ಮಾಷ್ಟಮಿ ಮಾತ್ರವಲ್ಲ ವರ್ಷಪೂರ್ತಿ ಬೆನ್ನಹಿಂದೆ ನಿಂತು ಮುನ್ನಡೆಸುತ್ತಾನೆ ಎಂದು ಹೇಳಲಾಗುತ್ತದೆ. ಇನ್ನು ಶ್ರೀಕೃಷ್ಣನ ಅನುಗ್ರಹದಿಂದ ಈ ಜನರು ತಮ್ಮ ಕೆಲಸದಲ್ಲಿ ಯಶಸ್ಸು ಮತ್ತು ಅದೃಷ್ಟವನ್ನು ಪಡೆಯುತ್ತಾರೆ.

ಕಟಕ ರಾಶಿ: ಶ್ರೀಕೃಷ್ಣನು ಕರ್ಕ ರಾಶಿಯವರಿಗೆ ಎಂದೆಂದೂ ದಯೆ ತೋರುತ್ತಾನೆ. ಈ ಜನರು ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಈ ರಾಶಿಯ ಜನರು ನಿಯಮಿತವಾಗಿ ಶ್ರೀಕೃಷ್ಣ ಮತ್ತು ರಾಧೆಯನ್ನು ಪೂಜಿಸಬೇಕು.

ತುಲಾ ರಾಶಿ: ಜ್ಯೋತಿಷ್ಯದ ಪ್ರಕಾರ ತುಲಾ ರಾಶಿಯವರಿಗೆ ಶ್ರೀಕೃಷ್ಣನ ವಿಶೇಷ ಕೃಪೆ ಇರುತ್ತದೆ. ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ. ಇವರಿಗೆ ಗೌರವ ಪ್ರಾಪ್ತಿಯಾಗುತ್ತದೆ. ತುಲಾ ರಾಶಿಯ ಜನರು ಶ್ರೀಕೃಷ್ಣನ ಮಹಿಮೆಯನ್ನು ಸದಾ ಜಪಿಸುತ್ತಲೇ ಇರಬೇಕು.

(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ಮೀಡಿಯಾ ಖಚಿತಪಡಿಸಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link