2025 ರವರೆಗೆ ಈ ರಾಶಿಯವರ ಮೇಲೆ ಲಕ್ಷ್ಮೀ ಕುಬೇರನ ಕೃಪೆ ! ಕೈಯಲ್ಲಿ ನಲಿದಾಡುವಳು ಐಶ್ವರ್ಯ ಲಕ್ಷ್ಮೀ ! ಇಟ್ಟ ಹೆಜ್ಜೆ ನೆಟ್ಟ ಗುರಿಗೆ ಸೋಲೇ ಇಲ್ಲ

Wed, 11 Oct 2023-12:55 pm,

ರಾಹು-ಕೇತು ಪ್ರಭಾವ :ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೀಪಾವಳಿಯ ಮೊದಲು,  ರಾಹು-ಕೇತು ತಮ್ಮ ಅರಾಶಿಯನ್ನು ಬದಲಿಸಲಿವೆ.  ಅಕ್ಟೋಬರ್ 30 ರ ಸಂಜೆ ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸಿದರೆ, ಕೇತು ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ.  

ಮೇಷ ರಾಶಿ :ಮೇಷ ರಾಶಿಯವರು ಈ ಸಮಯದಲ್ಲಿ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಇದು ಉತ್ತಮ ಸಮಯ. ಈ ಸಮಯವು ಉದ್ಯಮಿಗಳಿಗೂ ಅನುಕೂಲಕರವಾಗಿದೆ.

ಕಟಕ ರಾಶಿ :ಕರ್ಕ ರಾಶಿಯ ಜನರು ಈ ಅವಧಿಯಲ್ಲಿ ಎಲ್ಲಾ ರೀತಿಯ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇಲ್ಲಿವರೆಗೆ ಅನುಭವಿಸುತ್ತಿದ್ದ ಸಮಸ್ಯೆಗಳು ಕೊನೆಯಾಗುವುದು.  ಖ್ಯಾತಿ ಹೆಚ್ಚಲಿದೆ. ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕಂಡುಬರಲಿದೆ. ಹೊಸ ಉದ್ಯೋಗ ಸಿಗಬಹುದು. 

ಸಿಂಹ ರಾಶಿ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರಿಗೆ ರಾಹು-ಕೇತುಗಳ ಸಂಕ್ರಮವು ಶುಭಕರವಾಗಿರುತ್ತದೆ. ಈ ಸಮಯದಲ್ಲಿ ವೈವಾಹಿಕ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅದೃಷ್ಟ ನಿಮ್ಮ ಕಡೆಗೆ ಇರುತ್ತದೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗಲಿದೆ. ವೃತ್ತಿಪರ ಜೀವನದಲ್ಲಿ ಲಾಭವಾಗುವುದು. ಕೆಲಸದ ಸ್ಥಳದಲ್ಲಿ ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ.  

ತುಲಾ ರಾಶಿ :ಈ ಸಮಯವು ವಿವಾಹಿತರಿಗೆ ಅನುಕೂಲಕರವಾಗಿರುತ್ತದೆ. ಅದೇ ಸಮಯದಲ್ಲಿ, ಅವಿವಾಹಿತರಿಗೆ ಮದುವೆಯ ಪ್ರಸ್ತಾಪವು ಬರಬಹುದು. ಆದಾಯದ ಮೂಲಗಳಲ್ಲಿ ಹೆಚ್ಚಳ ಕಂಡುಬರುತ್ತದೆ. ವೃತ್ತಿ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಬಗೆಹರಿಯಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.   

ಮೀನ ರಾಶಿ :ರಾಹು-ಕೇತುಗಳ ಸಂಚಾರವು ಮೀನ ರಾಶಿಯ ಜನರ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಿದೆ. ವೃತ್ತಿ ಬದುಕಿನಲ್ಲಿ ಹೊಸ ಎತ್ತರವನ್ನು ಮುಟ್ಟುತ್ತೀರಿ. ದೀಪಾವಳಿಯ ಮೊದಲು ರಾಹು-ಕೇತುಗಳ ಸಂಚಾರವು ಜೀವನದಲ್ಲಿ ಬರುವ ಸಮಸ್ಯೆಗಳನ್ನು ದೂರ ಮಾಡುತ್ತದೆ. 18 ಮೇ 2025 ರವರೆಗಿನ ಸಮಯವು ನಿಮಗೆ ಉತ್ತಮವಾಗಿದೆ. 

ಸೂಚನೆ : ಈ ಲೇಖನವನ್ನು ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link