2025 ರವರೆಗೆ ಈ ರಾಶಿಯವರ ಮೇಲೆ ಲಕ್ಷ್ಮೀ ಕುಬೇರನ ಕೃಪೆ ! ಕೈಯಲ್ಲಿ ನಲಿದಾಡುವಳು ಐಶ್ವರ್ಯ ಲಕ್ಷ್ಮೀ ! ಇಟ್ಟ ಹೆಜ್ಜೆ ನೆಟ್ಟ ಗುರಿಗೆ ಸೋಲೇ ಇಲ್ಲ
ರಾಹು-ಕೇತು ಪ್ರಭಾವ :ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೀಪಾವಳಿಯ ಮೊದಲು, ರಾಹು-ಕೇತು ತಮ್ಮ ಅರಾಶಿಯನ್ನು ಬದಲಿಸಲಿವೆ. ಅಕ್ಟೋಬರ್ 30 ರ ಸಂಜೆ ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸಿದರೆ, ಕೇತು ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ.
ಮೇಷ ರಾಶಿ :ಮೇಷ ರಾಶಿಯವರು ಈ ಸಮಯದಲ್ಲಿ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಇದು ಉತ್ತಮ ಸಮಯ. ಈ ಸಮಯವು ಉದ್ಯಮಿಗಳಿಗೂ ಅನುಕೂಲಕರವಾಗಿದೆ.
ಕಟಕ ರಾಶಿ :ಕರ್ಕ ರಾಶಿಯ ಜನರು ಈ ಅವಧಿಯಲ್ಲಿ ಎಲ್ಲಾ ರೀತಿಯ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇಲ್ಲಿವರೆಗೆ ಅನುಭವಿಸುತ್ತಿದ್ದ ಸಮಸ್ಯೆಗಳು ಕೊನೆಯಾಗುವುದು. ಖ್ಯಾತಿ ಹೆಚ್ಚಲಿದೆ. ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕಂಡುಬರಲಿದೆ. ಹೊಸ ಉದ್ಯೋಗ ಸಿಗಬಹುದು.
ಸಿಂಹ ರಾಶಿ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರಿಗೆ ರಾಹು-ಕೇತುಗಳ ಸಂಕ್ರಮವು ಶುಭಕರವಾಗಿರುತ್ತದೆ. ಈ ಸಮಯದಲ್ಲಿ ವೈವಾಹಿಕ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅದೃಷ್ಟ ನಿಮ್ಮ ಕಡೆಗೆ ಇರುತ್ತದೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗಲಿದೆ. ವೃತ್ತಿಪರ ಜೀವನದಲ್ಲಿ ಲಾಭವಾಗುವುದು. ಕೆಲಸದ ಸ್ಥಳದಲ್ಲಿ ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ.
ತುಲಾ ರಾಶಿ :ಈ ಸಮಯವು ವಿವಾಹಿತರಿಗೆ ಅನುಕೂಲಕರವಾಗಿರುತ್ತದೆ. ಅದೇ ಸಮಯದಲ್ಲಿ, ಅವಿವಾಹಿತರಿಗೆ ಮದುವೆಯ ಪ್ರಸ್ತಾಪವು ಬರಬಹುದು. ಆದಾಯದ ಮೂಲಗಳಲ್ಲಿ ಹೆಚ್ಚಳ ಕಂಡುಬರುತ್ತದೆ. ವೃತ್ತಿ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಬಗೆಹರಿಯಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.
ಮೀನ ರಾಶಿ :ರಾಹು-ಕೇತುಗಳ ಸಂಚಾರವು ಮೀನ ರಾಶಿಯ ಜನರ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಿದೆ. ವೃತ್ತಿ ಬದುಕಿನಲ್ಲಿ ಹೊಸ ಎತ್ತರವನ್ನು ಮುಟ್ಟುತ್ತೀರಿ. ದೀಪಾವಳಿಯ ಮೊದಲು ರಾಹು-ಕೇತುಗಳ ಸಂಚಾರವು ಜೀವನದಲ್ಲಿ ಬರುವ ಸಮಸ್ಯೆಗಳನ್ನು ದೂರ ಮಾಡುತ್ತದೆ. 18 ಮೇ 2025 ರವರೆಗಿನ ಸಮಯವು ನಿಮಗೆ ಉತ್ತಮವಾಗಿದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.