ನಿರಂತರ ಹಣಕಾಸಿನ ತೊಂದರೆ ಎದುರಾಗುತ್ತಲೇ ಇದೆಯಾ? ಸ್ನಾನದ ಮನೆಯಲ್ಲಿ ಈ ವಸ್ತುವನ್ನು ಇಟ್ಟು ನೋಡಿ!ಹಣ ಹರಿದು ಬರುತ್ತಲೇ ಇರುವುದು

Sat, 19 Oct 2024-7:20 pm,

ಮನೆಯ ವಾಸ್ತು ದೋಷವನ್ನು ನಿವಾರಿಸಲು ಕೆಲವು ಪರಿಹಾರಗಳನ್ನು ಅನುಸರಿಸಬಹುದು. ಇದು ಮನೆಯಲ್ಲಿ ಧನ ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.   

ಮಂಗಳವಾರ ಆಂಜನೇಯ ಮತ್ತು ಶನಿವಾರದಂದು ಶನಿದೇವರನ್ನು ನೆನೆದುಕೊಂಡು ಸ್ನಾನಗೃಹದಲ್ಲಿ ಉಪ್ಪನ್ನು ಇರಿಸಿ. ಹೀಗೆ ಮಾಡುವುದರಿಂದ ಆಂಜನೇಯ ಮತ್ತು ಶನಿದೇವರು ಮನೆಯ ಅದೃಶ್ಯ ಕಾವಲುಗಾರರಾಗಿ ಮನೆಯನ್ನು ಕಾಪಾಡುತ್ತಾರೆ.   

ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದರೆ ಗಾಜಿನ ಲೋಟದಲ್ಲಿ ನೀರನ್ನು ತುಂಬಿಸಿ ಅದರಲ್ಲಿ ಕಲ್ಲು ಉಪ್ಪನ್ನು ಬೆರೆಸಿ ಸ್ನಾನದ ಮನೆಯ ನೈಋತ್ಯ ಮೂಲೆಯಲ್ಲಿ ಇರಿಸಿ. ಇದು  ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಕಾರಣವಾಗುತ್ತದೆ. 15 ದಿನಗಳಿಗೊಮ್ಮೆ ಈ ಉಪ್ಪು ನೀರನ್ನು ಬದಲಾಯಿಸುತ್ತಾ ಇರಬೇಕು.    

ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಪ್ರತಿ 15 ದಿನಗಳಿಗೊಮ್ಮೆ ಕಲ್ಲು ಉಪ್ಪು ನೀರಿನಿಂದ ಸ್ನಾನ ಮಾಡಬೇಕು. ಕಲ್ಲು ಉಪ್ಪಿನಿಂದ ಸ್ನಾನ ಮಾಡುವುದು ತುಂಬಾ ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.   

ಬಾತ್ ರೂಂನ ಒಂದು ಮೂಲೆಯಲ್ಲಿ ಬಟ್ಟಲಿನಲ್ಲಿ ಕಲ್ಲು ಉಪ್ಪು ಮತ್ತು ಹರಳೆಣ್ಣೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂತೋಷ ಹೆಚ್ಚುತ್ತದೆ. ಹೊಸ ವಾಹನ ಅಥವಾ ಆಸ್ತಿ ಕುಟುಂಬವನ್ನು ಪ್ರವೇಶಿಸಬಹುದು.  

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link