BBK 10: ಕಾರ್ತಿಕ್’ಗೆ ಇದೆಯಂತೆ ನಾಗದೋಷ! 2 ವಾರದಿಂದ ಆಟ ಮಂಕಾಗಲು ಅದೇ ಕಾರಣ ಎಂದ ದೊಡ್ಮನೆ ‘ಜ್ಯೋತಿಷಿ’

Wed, 17 Jan 2024-11:33 am,

ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗೆಸ್ಟ್ ಸ್ಪರ್ಧಿಗಳಲ್ಲಿ ಕಾರ್ತಿಕ್ ಕೂಡ ಒಬ್ಬರು. ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕಾರ್ತಿಕ್, ಕಳೆದೆರಡು ವಾರದಿಂದ ಕೊಂಚ ಮಂಕಾಗಿದ್ದರು.

ಇನ್ನು ಕಾರ್ತಿಕ್’ಗೆ ಅಪಾರ ಅಭಿಮಾನಿ ಬಳಗವಿದೆ. ಟ್ವಿಟ್ಟರ್’ನಲ್ಲಿ ಭರ್ಜರಿ ಟ್ರೆಂಡ್ ಸೆಟ್ ಮಾಡಿರುವ ಕಾರ್ತಿಕ್, ಕರ್ನಾಟಕದಲ್ಲಿ ಟಾಪ್ 3 ಮತ್ತು ದೇಶದಲ್ಲಿ ಟಾಪ್ 7ರಲ್ಲಿ ಟ್ರೆಂಡಿಂಗ್’ನಲ್ಲಿದ್ದರು. ಅಷ್ಟೇ ಅಲ್ಲದೆ, DESERVING WINNER KARTHIK ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್’ನಲ್ಲಿದೆ.

ಆದರೆ ಇದೀಗ ಅವರಿಗೆ ನಾಗದೋಷ ಇದೆ ಎಂದು ಜ್ಯೋತಿಷಿ ಒಬ್ಬರು ಹೇಳಿಕೆ ನೀಡಿದ್ದಾರೆ. ಆ ಜ್ಯೋತಿಷಿ ಬೇರಾರು ಅಲ್ಲ ತುಕಾಲಿ ಸಂತೋಷ್. ದೊಡ್ಮನೆಯಲ್ಲಿ ಕೆಲವೊಮ್ಮೆ ಸ್ವಾಮೀಜಿಯಂತೆ ಮಾತನಾಡುತ್ತಾ ತಮಾಷೆ ಮಾಡುತ್ತಿರುತ್ತಾರೆ.

ಇದೀಗ ತುಕಾಲಿ ಸಂತೋಷ್ ಅವರು, ಕಾರ್ತಿಕ್ ಬಗ್ಗೆ ಇಂಥಾ ಹೇಳಿಕೆ ನೀಡಿದ್ದು, ಎಲ್ಲರೂ ಶಾಕ್ ಆಗಿದ್ದಾರೆ. ನಮೃತಾ ಈ ಹಿಂದೆ ನಾಗಿಣಿ ಎಂಬ ಸೀರಿಯಲ್’ನಲ್ಲಿ ನಟಿಸುತ್ತಿದ್ದರು. ಇನ್ನೊಂದೆಡೆ ಕಾರ್ತಿಕ್ ಈಗ ನಮೃತಾ ಜೊತೆ ಕ್ಲೋಸ್ ಆಗಿದ್ದಾರೆ. ಇದೇ ಕಾರಣದಿಂದ ಕಾರ್ತಿಕ್’ಗೆ ನಾಗದೋಷ ಇದೆ ಎಂದು ತುಕಾಲಿ ವ್ಯಂಗ್ಯವಾಡಿದ್ದಾರೆ.

ಕಾರ್ತಿಕ್ ಕಳೆದ 2 ವಾರದಿಂದ ಮಂಕಾಗಿದ್ದರು. ಅವರು ತಮ್ಮ ಆಟ ಮರೆಯಲು ‘ನಾಗದೋಷ’ವೇ ಕಾರಣ ಎಂದು ತಮಾಷೆಯಾಗಿ ತುಕಾಲಿ ಸಂತೋಷ್ ಹೇಳಿದ್ದಾರೆ. ಒಂದು ವೇಳೆ ಈ ಮಾತು ನಮೃತಾ ಮತ್ತು ಕಾರ್ತಿಕ್ ಕಿವಿಗೆ ಬಿದ್ದರೆ ಮುಂದೇನಾಗಬಹುದು ಎಂಬುದೇ ಸದ್ಯದ ಪ್ರಶ್ನೆ ಮತ್ತು ಕುತೂಹಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link