Tulsi Upay: ಪ್ರತಿನಿತ್ಯ ತುಳಸಿಗೆ ಇವುಗಳನ್ನು ಅರ್ಪಿಸಿದರೆ ಹರಸಿ ಬರುತ್ತೆ ಸಂಪತ್ತು

Mon, 22 Jul 2024-7:23 am,

ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ನಿತ್ಯ ಯಾವ ಮನೆಯಲ್ಲಿ ತುಳಸಿ ಪೂಜೆ ಮಾಡುತ್ತಾರೋ ಆ ಮನೆಯಲ್ಲಿ ಸದಾ ಭಗವಾನ್ ವಿಷ್ಣುವಿನ ಜೊತೆಗೆ ಲಕ್ಷ್ಮಿಯೂ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ನಿತ್ಯ ತುಳಸಿ ಸಸ್ಯಕ್ಕೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ ಅಂತಾ ಮನೆಯಲ್ಲಿ ಲಕ್ಷ್ಮಿಯ ಅಪಾರ ಆಶೀರ್ವಾದದೊಂದಿಗೆ ಸುಖ-ಸಂಪತ್ತು ಹುಡುಕಿ ಬರುತ್ತದೆ ಎನ್ನಲಾಗುತ್ತದೆ. ಅವುಗಳೆಂದರೆ... 

ಅರಿಶಿನದ ನೀರು:  ಪ್ರತಿ ದಿನ ತುಳಸಿ ಸಸ್ಯಕ್ಕೆ ತಾಮ್ರದ ಪಾತ್ರೆಯಲ್ಲಿ ಅರಿಶಿನ ಬೆರೆಸಿದ ನೀರನ್ನು ಅರ್ಪಿಸಬೇಕು. 

ಹಸಿ ಹಾಲು:  ಮಾತೆ ತುಳಸಿಯನ್ನು ಪೂಜಿಸುವಾಗ ಹಸಿ ಹಾಲನ್ನು ಅರ್ಪಿಸಿದರೆ ತುಂಬಾ ಶ್ರೇಷ್ಠ. 

ಅರಿಶಿನ-ಕುಂಕುಮ:  ಮುಂಜಾನೆ ತುಳಸಿ ಪೂಜೆ ವೇಳೆ ತುಳಸಿ ಸಸ್ಯಕ್ಕೆ ಅರಿಶಿನ-ಕುಂಕುಮ-ಗಂಧವನ್ನು ಅರ್ಪಿಸಬೇಕು. 

ತುಪ್ಪದ ದೀಪ:  ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ತುಳಸಿ ಪೂಜಿಸುವಾಗ ತುಪ್ಪದ ದೀಪವನ್ನು ಬೆಳಗಿಸಿದರೆ ಅಂತಹ ಮನೆಯಲ್ಲಿ ಎಂದಿಗೂ ಕೂಡ ಸುಖ-ಸಂಪತ್ತಿಗೆ ಕೊರತೆ ಆಗುವುದಿಲ್ಲ ಎಂಬ ನಂಬಿಕೆಯಿದೆ. 

ಶುಕ್ರವಾರದ ವಿಶೇಷ ಉಪಾಯ:  ಸತತ 21 ವಾರದವರೆಗೆ ಪ್ರತಿ ಶುಕ್ರವಾರ ತುಳಸಿ ಸಸ್ಯದ ಮುಂದೆ ಎರಡು ನಿಂಬೆಹಣ್ಣಿನ ದೀಪ ಬೆಳಗಿಸುವುದರಿಂದ ಮದುವೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಕಂಕಣ ಬಾಲ ಕೂಡಿ ಬರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link