ಈ ತರಕಾರಿ ಇನ್ಸುಲಿನ್ ಹೆಚ್ಚು ಮಾಡಿ ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿಯೇ ಇಡುತ್ತದೆ !ಶುಗರ್ ಇದ್ದವರಿಗೆ ದಿವ್ಯೌಷಧ ಇದು

Thu, 11 Apr 2024-11:00 am,

ನೀವು ಕೂಡಾ ಮಧುಮೇಹಕ್ಕೆ ವಿವಿಧ ರೀತಿಯ ಪರಿಹಾರಗಳನ್ನು ಅಳವಡಿಸಿಕೊಂಡಿದ್ದು, ಸರಿಯಾದ ಫಲಿತಾಂಶ ಸಿಗುತ್ತಿಲ್ಲ ಎಂದಾದರೆ ಈ ಒಂದು ಸಣ್ಣ ತರಕಾರಿಯನ್ನು ಈ ರೀತಿ ಬಳಸಿ ನೋಡಿ.

ಬೆಳ್ಳುಳ್ಳಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮಾತ್ರವಲ್ಲ, ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ನಾರ್ಮಲ್ ಮಾಡುತ್ತದೆ.ಮಧುಮೇಹ ರೋಗಿಗಳಿಗೆ ಬೆಳ್ಳುಳ್ಳಿ ಅತ್ಯಂತ ಪ್ರಯೋಜನಕಾರಿಯಾಗಿದೆ.   

ಬೆಳ್ಳುಳ್ಳಿಯ ಗ್ಲೈಸೆಮಿಕ್ ಸೂಚ್ಯಂಕ ಬಹುತೇಕ ಶೂನ್ಯವಾಗಿರುತ್ತದೆ.ಈ ಕಾರಣದಿಂದಲೇ ಬೆಳ್ಳುಳ್ಳಿ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ.  

100 ಗ್ರಾಂ ಬೆಳ್ಳುಳ್ಳಿಯಲ್ಲಿ ಸುಮಾರು 33 ಕ್ಯಾಲೋರಿಗಳು,ವಿಟಮಿನ್-ಬಿ6 , ವಿಟಮಿನ್-ಸಿ,ಸೋಡಿಯಂ,ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂಥಹ  ಪೋಷಕಾಂಶಗಳು ಕಂಡು ಬರುತ್ತವೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು  ಸಹಾಯ ಮಾಡುತ್ತದೆ.   

ಪ್ರತಿದಿನ 2-4 ಲವಂಗ ಬೆಳ್ಳುಳ್ಳಿಯನ್ನು ಸೇವಿಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಾಲ ಸುಲಭ.ಇದಲ್ಲದೆ, ಪಲ್ಯ ತರಕಾರಿಗಳನ್ನು ತಯಾರಿಸುವಾಗಲೂ ಅದಕ್ಕೆ ಬೆಳ್ಳುಳ್ಳಿಯನ್ನು ಸೇರಿಸಿದರೆ ಒಳ್ಳೆಯದು. 

ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಕೆಯಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. ಮೂತ್ರದ ಸೋಂಕನ್ನು ತಡೆಗಟ್ಟುವಲ್ಲಿಯೂ ಬೆಳ್ಳುಳ್ಳಿ ಪ್ರಯೋಜನಕಾರಿ. ( ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link