Utthana Ekadashi 2022: ತುಳಸಿ ವಿವಾಹದ ಸಮಯದಲ್ಲಿ ಈ ವಸ್ತುವನ್ನು ಅರ್ಪಿಸುವುದರಿಂದ ಸಂಪತ್ತು ಪ್ರಾಪ್ತಿ

Fri, 04 Nov 2022-11:23 am,

ಹಾಲು: ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ ಬಿಳಿ ಬಣ್ಣದ ವಸ್ತುಗಳೆಂದರೆ ಪ್ರಿಯ. ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ, ತುಳಸಿ ಹಬ್ಬ ಎಂದರೆ  ಉತ್ಥಾನ ಏಕಾದಶಿಯಂದು ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ, ತುಳಸಿ ಗಿಡಕ್ಕೆ ಹಸಿ ಹಾಲನ್ನು ಅರ್ಪಿಸಿ. ಇದರಿಂದ ಲಕ್ಷ್ಮೀದೇವಿಯು ಭಗವಾನ್ ವಿಷ್ಣುವಿನಲ್ಲಿ ಪ್ರಸನ್ನಳಾಗುತ್ತಾಳೆ. ಹಾಲನ್ನು ಅರ್ಪಿಸುವಾಗ 'ಓಂ ನಮೋ ಭಗವತೇ ವಾಸುದೇವಾಯ ನಮಃ' ಎಂದು ಜಪಿಸಿ. 

ದೀಪ: ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ. ತುಳಸಿಯನ್ನು ಬೆಳಿಗ್ಗೆ ಮತ್ತು ಸಂಜೆ ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂದು ನಂಬಲಾಗಿದೆ. ತುಳಸಿ ವಿವಾಹದ ದಿನ ಸಂಜೆ ತುಳಸಿ ಗಿಡಕ್ಕೆ ತುಪ್ಪದ ದೀಪವನ್ನು ಹಚ್ಚಿ. ಹಾಗೆಯೇ, ದೀಪಜ್ಯೋತಿ: ಪರಬ್ರಹ್ಮ: ದೀಪಜ್ಯೋತಿ: ಜನಾರ್ದನ:. ದೀಪೋಹರ್ತಿಮೇ ಪಾಪಂ ಸಂಧ್ಯಾದೀಪಂ ನಮೋಸ್ತುತೇ । ಶತ್ರುವರ್ಧಿ ವಿನಾಷಣಂ ಚ ದೀಪಜ್ಯೋತಿ: ನಮೋಸ್ತುತಿ. ಈ ಮಂತ್ರವನ್ನು ಪಠಿಸಿ. ಈ ಕಾರಣದಿಂದಾಗಿ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. 

ಕೆಂಪು ದಾರ: ತುಳಸಿ ವಿವಾಹವನ್ನು ದೇವ್ ಉತ್ಥಾನ ಏಕಾದಶಿ ಎಂದು ಆಚರಿಸಲಾಗುತ್ತದೆ. ತುಳಸಿ ವಿವಾಹದ ಸಮಯದಲ್ಲಿ ತುಳಸಿಗೆ ಕೆಂಪು ಬಣ್ಣದ ದಾರವನ್ನು ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, ವಿಷ್ಣುವಿನ ಅನುಗ್ರಹವು ಜೀವನದಲ್ಲಿ ಉಳಿಯುತ್ತದೆ ಮತ್ತು ತಾಯಿ ಲಕ್ಷ್ಮಿ ಮನೆಯಲ್ಲಿ ಸಂತೋಷವಾಗಿರುತ್ತಾಳೆ ಎಂಬ ನಂಬಿಕೆ ಇದೆ.

ಹಳದಿ ದಾರ: ತುಳಸಿ ವಿವಾಹದ ಸಮಯದಲ್ಲಿ ನಿಮ್ಮ ದೇಹಕ್ಕೆ ಸಮನಾದ ಹಳದಿ ದಾರವನ್ನು ತೆಗೆದುಕೊಂಡು ಅದರ ಮೇಲೆ 108 ಗಂಟುಗಳನ್ನು ಕಟ್ಟಿಕೊಳ್ಳಿ. ತುಳಸಿ ಗಿಡದ ಕೆಳಗೆ ಈ ಹಳದಿ ದಾರವನ್ನು ಕಟ್ಟಿ. ಈ ರೀತಿ ಮಾಡುವುದರಿಂದ ನಿಮ್ಮ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ ಎಂದು ಹೇಳಲಾಗುತ್ತದೆ.

ಕೆಂಪು ವಸ್ತ್ರ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ 5 ರಂದು ತುಳಸಿ ವಿವಾಹ ನಡೆಯಲಿದೆ. ಈ ದಿನದಂದು ತುಳಸಿಯು ವಿಷ್ಣುವಿನ ಆರಾಧ್ಯ ರೂಪವಾದ ಶಾಲಿಗ್ರಾಮವನ್ನು ಮದುವೆಯಾಗುತ್ತಾಳೆ. ಈ ದಿನದಂದು ಮದುವೆಯ ಸಮಯದಲ್ಲಿ ತುಳಸಿಗೆ ಕೆಂಪು ಬಣ್ಣದ ವಸ್ತ್ರವನ್ನು  ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯು ಹಣಕಾಸಿನ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಗಳು ಧಾರ್ಮಿಕ ನಂಬಿಕೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿವೆ. Zee ಮೀಡಿಯಾ ಇವುಗಳನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link