ಗಣೇಶ ಕೂರಿಸುವಾಗ ಮುಖ ಅಲ್ಲ ಬೆನ್ನು ಈ ದಿಕ್ಕಿಗೆ ಇರಲಿ ! ಇಲ್ಲವಾದಲ್ಲಿ ವರ್ಷ ಪೂರ್ತಿ ವಿಘ್ನಗಳೇ ಎದುರಾಗುವುದು!ಹೆಜ್ಜೆ ಹೆಜ್ಜೆಗೂ ಸಂಕಷ್ಟ ಬರುವುದು !

Fri, 06 Sep 2024-1:04 pm,

ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಚತುರ್ಥಿಯಂದು ಗಣೇಶನನ್ನು ಕೂರಿಸುವುದು ವಾಡಿಕೆ. ನಾಳೆ ಗಣೇಶ ಚತುರ್ಥಿ. ಅಂದರೆ ಗಣೇಶನನ್ನು ಮತ್ತೊಮ್ಮೆ ಮನೆಯೊಳಗೆ ಕರೆಸಿಕೊಳ್ಳುವ ದಿನ. 

ಮನೆ ಅಥವಾ ಕಚೇರಿಯಲ್ಲಿ ಗಣೇಶನನ್ನು ಕೂರಿಸುತ್ತಿದ್ದರೆ ವಾಸ್ತುಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನೆನಪಿನಲ್ಲಿಡಿ.ತಪ್ಪಾದ ದಿಕ್ಕಿನಲ್ಲಿ ಗಣೇಶನನ್ನು ಕೂರಿಸುವುದರಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ವಾಸ್ತು ಪ್ರಕಾರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅತ್ಯಂತ ಮಂಗಳಕರವಾದ ದಿಕ್ಕು ಈಶಾನ್ಯ ಮೂಲೆ. ಒಂದು ವೇಳೆ ಇಲ್ಲಿ ಗಣೇಶ ಕೂರಿಸುವುದು  ಸಾಧ್ಯವಾಗದಿದ್ದರೆ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿಯೂ ಇಡಬಹುದು. 

ತಪ್ಪಿಯೂ ಗಣಪತಿಯನ್ನು ದಕ್ಷಿಣ ದಿಕ್ಕಿನಲ್ಲಿ ಪ್ರತಿಷ್ಠಾಪಿಸಬೇಡಿ.ಈ ದಿಕ್ಕಿನಲ್ಲಿ ಪೂಜಾ ಸ್ಥಳವೂ ಇರಬಾರದು.  

ಮನೆಗೆ ಗಣಪತಿ ಎಡಮುರಿ ಗಣಪನನ್ನೇ ತನ್ನಿ. ಗೌರಿ ಮತ್ತು ಗಣಪತಿಯನ್ನು ಒಟ್ಟಿಗೆ ಪೂಜಿಸುವವರು ಎಡಮುರಿ ಗಣಪತಿ ಮೂರ್ತಿಯನ್ನೇ ತರಬೇಕು

ಮನೆಯಲ್ಲಿ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಅದರ ಬೆನ್ನು ಮನೆಯ ಯಾವುದೇ ಕೋಣೆಯ ಕಡೆಗೆ ಇರದ ರೀತಿಯಲ್ಲಿ ಮಾಡಿಕೊಳ್ಳಬೇಕು. ಗಣಪತಿಯ ಬೆನ್ನು ಮನೆಯ ಹೊರ ಭಾಗಕ್ಕೆ ಇರಬೇಕು. 

ಶೌಚಾಲಯದ ಗೋಡೆಯ ಕಡೆಗೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಬೇಡಿ.ಹೀಗೆ ಮಾಡುವುದರಿಂದ ಕುಟುಂಬಕ್ಕೆ ತೊಂದರೆಯಾಗಬಹುದು.   

ಗಣೇಶನ ವಿಗ್ರಹವನ್ನು ಮೆಟ್ಟಿಲುಗಳ ಕೆಳಗೆ ಪ್ರತಿಷ್ಠಾಪಿಸಬೇಡಿ.ಮೆಟ್ಟಿಲುಗಳ ಕೆಳಗೆ ಪೂಜಾ ಕೊಠಡಿಯನ್ನು ನಿರ್ಮಿಸುವುದಿಲ್ಲ. ಈ ರೀತಿ ಮಾಡುವುದರಿಂದ ಮನೆಯಲ್ಲಿ ದುರಾದೃಷ್ಟ ಮತ್ತು ಬಡತನ ನೆಲೆಯಾಗುತ್ತದೆ.   

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link