Vastu Tips: ಮುಸ್ಸಂಜೆ ವೇಳೆ ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ತಾಂಡವವಾಡುತ್ತೆ ಬಡತನ

Wed, 07 Dec 2022-9:54 am,

ಸಾಲ ನೀಡುವುದನ್ನು ತಪ್ಪಿಸಿ: ವಾಸ್ತು ಶಾಸ್ತ್ರದ ಪ್ರಕಾರ,  ಸೂರ್ಯಾಸ್ತದ ನಂತರ ಯಾರಿಗೂ ಕೂಡ ಹಣವನ್ನು ನೀಡಬಾರದು. ಅದು ನೀವು ಬೇರೆಯವರಿಂದ ಪಡೆದಿರುವ ಹಣವೇ ಆದರೂ ಸಹ ಮುಸ್ಸಂಜೆಯಲ್ಲಿ, ಸೂರ್ಯಾಸ್ತದ ಬಳಿಕ ಯಾರಿಗಾದರೂ ಹಣ ನೀಡುವುದನ್ನು ತಪ್ಪಿಸಿ.

ಮುಸ್ಸಂಜೆಯಲ್ಲಿ ಯಾರನ್ನೂ ಬರಿಗೈಯಲ್ಲಿ ಕಳುಹಿಸಬೇಡಿ: ವಾಸ್ತು ಶಾಸ್ತ್ರದ ಪ್ರಕಾರ, ಮುಸ್ಸಂಜೆಯಲ್ಲಿ ಮನೆಗೆ ಬರುವ ಅತಿಥಿಗಳನ್ನು, ನಿರ್ಗತಿಕರು ಅಥವಾ ಬಡವರನ್ನು ಎಂದಿಗೂ ಖಾಲಿ ಕೈಯಲ್ಲಿ ಹಿಂದಿರುಗಿ ಕಳುಹಿಸಬಾರದು. ಸಂಜೆ ವೇಳೆಯಲ್ಲಿ ನಿಮ್ಮ ಮನೆಗೆ ಯಾರೇ ಬಂದರೂ ನಿಮ್ಮ ಕೈಲಾದದ್ದನ್ನು ಕೊಟ್ಟು ಕಳುಹಿಸಿ.

ಜಗಳವನ್ನು ತಪ್ಪಿಸಿ: ಸೂರ್ಯಾಸ್ತದ ವೇಳೆ ಅಥವಾ ಸೂರ್ಯಾಸ್ತದ ನಂತರ ಮನೆಯಲ್ಲಿ ಯಾವುದೇ ರೀತಿಯ ಜಗಳವಾಡುವುದನ್ನು ತಪ್ಪಿಸಿ. ಮುಸ್ಸಂಜೆ ಲಕ್ಷ್ಮಿ ಮನೆಗೆ ಬರುವ ಹೊತ್ತು. ಈ ಸಮಯದಲ್ಲಿ ಜಗಳವಾಡುವುದರಿಂದ ತಾಯಿ ಮಹಾಲಕ್ಷ್ಮಿ ಕುಪಿತಗೊಳ್ಳಬಹುದು.

ತುಳಸಿಗೆ ಸಂಬಂಧಿಸಿದ ಈ ನಿಯಮವನ್ನು ಪಾಲಿಸಿ: ತುಳಸಿ ಲಕ್ಷ್ಮಿ ಸ್ವರೂಪಿಣಿ. ಸಂಜೆ ವೇಳೆ ತಪ್ಪದೇ ತುಳಸಿ ಗಿಡದ ಕೆಳಗೆ ದೀಪ ಹಚ್ಚಿ. ಆದರೆ, ಯಾವುದೇ ಕಾರಣಕ್ಕೂ ತುಳಸಿಯನ್ನು ಸ್ಪರ್ಶಿಸಬೇಡಿ. 

ಮನೆಯ ಮುಖ್ಯ ಬಾಗಿಲನ್ನು ತೆರೆದಿಡಿ: ವಾಸ್ತು ಪ್ರಕಾರ, ಸಂಜೆ ವೇಳೆ ತಾಯಿ ಲಕ್ಷ್ಮಿಯು ಮನೆಯನ್ನು ಪ್ರವೇಶಿಸುತ್ತಾಳೆ. ಈ ಸಂದರ್ಭದಲ್ಲಿ ಮನೆಯ ಬಾಗಿಲು ತೆರೆದಿರಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ, ಸಂಜೆ ವೇಳೆ ಯಾವುದೇ ಕಾರಣಕ್ಕೂ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿಡಬೇಡಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link