ಮಲಗುವಾಗ ದಿಂಬಿನ ಕೆಳಗೆ ಈ ಹೂವಿನ ದಳ ಇಟ್ಟರೆ ಅದೃಷ್ಟವೇ ಖುಲಾಯಿಸಿದಂತೆ! ಕೈ ತುಂಬಾ ದುಡ್ಡು... ಕೋಟ್ಯಾಂತರ ಆಸ್ತಿಗೆ ವಾರಸ್ದಾರರಾಗ್ತೀರಿ

Sun, 25 Aug 2024-4:54 pm,

ಪ್ರತಿಯೊಬ್ಬ ವ್ಯಕ್ತಿಗೂ ಮನೆಯಲ್ಲಿ ಹಣದ ಕೊರತೆಯಾಗಬಾರದು ಎಂಬ ಆಸೆ ಇದ್ದೇ ಇರುತ್ತದೆ. ಹೀಗಿರುವಾಗ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಲಿ ಎಂದೇ ಅನೇಕ ರೀತಿಯಲ್ಲಿ ಶ್ರಮಿಸುತ್ತಾನೆ. ಆದರೆ ಅದೃಷ್ಟದ ಕೊರತೆಯಿಂದಾಗಿ, ವ್ಯಕ್ತಿಯು ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಇನ್ನು ಇಂತಹ ಸಮಸ್ಯೆಗೆ ಕೆಲವು ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಸಮಯೋಚಿತವಾಗಿ ಮಾಡಿದರೆ, ವ್ಯಕ್ತಿಯ ಅದೃಷ್ಟವೇ ಖುಲಾಯಿಸುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಹಾಸಿಗೆಯ ಪಕ್ಕದಲ್ಲಿ ಕೆಲ ವಸ್ತುಗಳನ್ನು ಇಟ್ಟುಕೊಂಡು ಮಲಗಿದರೆ ಅದೃಷ್ಟವು ಹೊಳೆಯುತ್ತದೆ. ಇನ್ನು ದಿಂಬಿನ ಕೆಳಗೂ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದು ವ್ಯಕ್ತಿಯ ಅದೃಷ್ಟವನ್ನು ಹೆಚ್ಚಿಸುತ್ತದೆ.

 

ಮಾನಸಿಕವಾಗಿ ತೊಂದರೆಗೀಡಾಗಿದ್ದರೆ ಮತ್ತು ಮಾನಸಿಕ ಶಾಂತಿಯನ್ನು ಬಯಸಿದರೆ, ಮಲಗುವ ಮೊದಲು ಪರಿಮಳಯುಕ್ತ ಹೂವಿನ ದಳವನ್ನು ದಿಂಬಿನ ಬಳಿ ಅಥವಾ ಕೆಳಗೆ ಇರಿಸಿ. ಇದು ವ್ಯಕ್ತಿಯು ಉತ್ತಮವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ವೈವಾಹಿಕ ಜೀವನದಲ್ಲಿ ಸಂತೋಷ ನೀಡುತ್ತದೆ.

 

ನಿದ್ದೆಯಲ್ಲಿ ಕೆಟ್ಟ ಕನಸು ಬೀಳುತ್ತಿದ್ದರೆ, ಮಲಗುವಾಗ ಬೆಳ್ಳುಳ್ಳಿ ಎಸಳನ್ನು ದಿಂಬಿನ ಕೆಳಗೆ ಇರಿಸಿ. ಇದು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಅಲ್ಲದೆ, ವ್ಯಕ್ತಿಯು ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

 

ಇದಲ್ಲದೆ, ದಿಂಬಿನ ಕೆಳಗೆ ಸೋಂಪು ಬೀಜಗಳನ್ನು ಇಟ್ಟುಕೊಂಡು ಮಲಗುವುದು ರಾಹು ದೋಷದಿಂದ ಪರಿಹಾರವನ್ನು ನೀಡುತ್ತದೆ. ಇದಲ್ಲದೆ, ಕೆಟ್ಟ ಕನಸುಗಳು ಕೂಡ ದೂರವಾಗಿ, ವ್ಯಕ್ತಿಯು ಮಾನಸಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾನೆ.

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭಾನುವಾರ ಮಲಗುವಾಗ ಒಂದು ಲೋಟ ಹಾಲನ್ನು ತೆಗೆದುಕೊಂಡು ಹಾಸಿಗೆಯ ಪಕ್ಕದಲ್ಲಿ ಇರಿಸಿ. ಮರುದಿನ, ಬೆಳಿಗ್ಗೆ ಎದ್ದು ಸ್ನಾನ ಮಾಡಿ, ಆ ಹಾಲನ್ನು ಅಕೇಶಿಯಾ ಮರಕ್ಕೆ ಸುರಿಯಿರಿ. ಈ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಿಂಬಿನ ಕೆಳಗೆ ಏಲಕ್ಕಿಯನ್ನು ಇಟ್ಟು ಮಲಗಬೇಕು. ಇದರಿಂದ ವ್ಯಕ್ತಿಗೆ ಒಳ್ಳೆಯ ನಿದ್ದೆ ಬರುತ್ತದೆ ಎಂದು ಹೇಳಲಾಗುತ್ತದೆ.

 

 ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link