ವಾಸ್ತು - ಈ ಐದು ವಸ್ತುಗಳಿರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ

Thu, 09 Mar 2023-11:51 am,

ವಾಸ್ತು ಪ್ರಕಾರ, ಒಡೆದ ಗಾಜಿನ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಸಂಗ್ರಹಿಸಬಾರದು. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮಾತ್ರವಲ್ಲ, ಇದು ತಾಯಿ ಲಕ್ಷ್ಮಿಯ ಕೋಪಕ್ಕೂ ಕಾರಣವಾಗಬಹುದು.

ಕೆಲವರು ಮುಂದೆ ಯಾವತ್ತಾದರೂ ಕೆಲಸಕ್ಕೆ ಬರುತ್ತದೆ ಎಂದು ತುಂಡಾದ ತಂತಿಗಳನ್ನು ಸಹ ಎಸೆಯದೆ ಹಾಗೆಯೇ ಇಟ್ಟಿರುತ್ತಾರೆ. ಆದರೆ, ವಾಸ್ತುವಿನಲ್ಲಿ ಇಂತಹ ಹಳೆಯ ತಂತಿಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಸಂಕೀರ್ಣಗೊಳಿಸುತ್ತವೆ ಎಂದು ಹೇಳಲಾಗುತ್ತದೆ.

ಕೆಲವರು ಮನೆಯಲ್ಲಿ ಜೇನುಗೂಡು ಇದ್ದರೆ ಅದು ಲಕ್ಷ್ಮಿಯ ಸ್ವರೂಪ ಎಂದು ನಂಬುತ್ತಾರೆ. ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿರುವ ಜೇನುಗೂಡು ಕೂಡ ಅಶುಭ ಸಂಕೇತ ಎಂದು ಹೇಳಲಾಗುತ್ತದೆ. ಇದು ಮನೆಯಲ್ಲಿ ಬಡತನವನ್ನು ಆಹ್ವಾನಿಸುತ್ತದೆ ಎಂಬ ನಂಬಿಕೆಯೂ ಇದೆ.

ಜೇಡರ ಬಲೆ ಮನೆಯಲ್ಲಿದ್ದರೆ ಅದು ಕೂಡ ಅಶುಭ ಮತ್ತು ಅಮಂಗಳಕರ ಎಂದು ಹೇಳಲಾಗುತ್ತದೆ. ಮನೆಯಲ್ಲಿರುವ ಜೇಡರ ಬಲೆಯು ಜೀವನದಲ್ಲಿ ನಾನಾ ರೀತಿಯ ಸಂಕಷ್ಟವನ್ನು ಆಹ್ವಾನಿಸಬಹುದು ಎನ್ನಲಾಗುತ್ತದೆ.

ಮನೆಯಲ್ಲಿ ಪಕ್ಷಿಗಳು ಬರುವುದು ಮಂಗಳಕರ. ಆದರೆ, ಪಕ್ಷಿಗಳ ಗೂಡನ್ನು ಮನೆಯಲ್ಲಿಡುವುದು ಅಮಂಗಳಕರ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಕೆಲವು ಅಲಂಕಾರಕ್ಕಾಗಿ ಹಕ್ಕಿ ಗೂಡನ್ನು ತಂದಿರುತ್ತಾರೆ. ಆದರೆ, ಇದರಲ್ಲಿ ಪಾರಿವಾಳ ಮೊಟ್ಟೆ ಇಡುವುದು ತುಂಬಾ ಅಮಂಗಳಕರ ಎಂಬುದನ್ನು ನೆನಪಿನಲ್ಲಿಡಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link