ವರ್ಷಾಂತ್ಯಕ್ಕೆ ಮಂಗಳ-ಶುಕ್ರರ ಮೈತ್ರಿ, ಧನಕುಬೇರನ ಕೃಪೆಯಿಂದ ಈ ರಾಶಿಗಳ ಜನರು ಅಪಾರ ಧನ ಸಂಪಾದನೆ ಮಾಡುವರು!

Sat, 09 Dec 2023-5:57 pm,

Venus-Mars Yuti In Scorpio 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷಾಂತ್ಯಕ್ಕೆ ಮಂಗಳ ಹಾಗೂ ಶುಕ್ರರ ಮೈತ್ರಿ ವೃಶ್ಚಿಕ ರಾಶಿಯಲ್ಲಿ ನೆರವೇರುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದ್ದು, ಇವರು ಅಪಾರ ಧನ ಸಂಪಾದನೆ ಮಾಡುವಲ್ಲಿ ಯಶಸ್ಸನ್ನು ಹೊಂದುವರು. (Spiritual News In Kannada)

ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದ್ದು, ಇದನ್ನು ಶಿಕ್ಷಣ, ಪ್ರೇಮ ಸಂಬಂಧ, ಸಂತಾನ ಇತ್ಯಾದಿಗಳ ಭಾವ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ವಿಶೇಷ ಲಾಭಗಳು ಸಿಗಲಿದ್ದು, ನಿಮ್ಮ ಲವ್ ಲೈಫ್ ಉತ್ತಮವಾಗಲಿದೆ.  ಒಂಟಿಯಾಗಿರುವ ಜಾತಕದವರ ಜೀವನದಲ್ಲಿ ಸಂಗಾತಿಯ ಆಗಮನವಾಗುವ ಸಾಧ್ಯತೆ ಇದೆ. ಕಲೆ, ಫ್ಯಾಷನ್, ವೈದ್ಯಕೀಯ ರಂಗಗಳಲ್ಲಿ ನಿರತರಾದ ಜಾತಕದವರಿಗೆ. ವಿಶೇಷ ಲಾಭ ಸಿಗಲಿದೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ, ಹೂಡಿಕೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. 

ಸಿಂಹ ರಾಶಿ: ಮಂಗಳ ಶುಕ್ರರ ಶುಭ ಪ್ರಭಾವದಿಂದ ಸಿಂಹ ಜಾತಕದವರಿಗೂ ಕೂಡ ಶುಭ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಏಕೆಂದರೆ ಈ ಮೈತ್ರಿ ನಿಮ್ಮ ಗೋಚರ ಜಾತಕದ ಚತುರ್ಥ ಭಾವ ಅಂದರೆ, ಮನೆ, ಸಂಪತ್ತು, ಗೃಹ ಜೀವನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಿರುವಾಗ ಲಾಭವೋ ಲಾಭ ನಿಮ್ಮದಾಗಲಿದೆ. ಸಂಪತ್ತಿನಲ್ಲಿ ಹೂಡಿಕೆ ಮಾಡಲು ಅಥವಾ ವಾಹನ ಖರೀದಿಸಲು ಬಯಸುತ್ತಿದ್ದರೆ, ಆ ಕೆಲಸಗಳನ್ನು ಮಾಡಲು ಈ ಸಮಯ ಉಪಯುಕ್ತವಾಗಿದೆ. ಸಹೋದ್ಯೋಗಿಗಳ ಜೊತೆಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ. ಬಾಸ್ ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ದೊಡ್ಡ ಜವಾಬ್ದಾರಿ ನಿಮಗೆ ವಹಿಸುವ ಸಾಧ್ಯತೆ ಇದೆ. ಮನೆಯಲ್ಲಿ ಸುಖ ಸೌಕರ್ಯಗಳು ವೃದ್ಧಿಯಾಗಲಿವೆ. ಈ ಅವಧಿಯಲ್ಲಿ ನೀವು ಐಷಾರಾಮಿ ಜೀವನ ನಡೆಸುವಿರಿ. ಹೊಸ ವ್ಯಾಪಾರ ಆರಂಭಿಸಲು ಯೋಚಿಸುತ್ತಿದ್ದರೆ, ಈ ಅವಧಿ ಉತ್ತಮವಾಗಿದೆ. 

ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಹೀಗಿರುವಾಗ ನಿಮಗೆ ಅದರ ವಿಶೇಷ ಲಾಭ ಸಿಗಲಿದೆ. ಕುಟುಂಬ ಸದಸ್ಯರ ಜೊತೆಗೆ ಅಥವಾ ಬಂಧುಮಿತ್ರರ ಜೊತೆಗೆ ನೀವು ಯಾತ್ರೆಗೆ ಹೋಗುವ ಸಾಧ್ಯತೆ ಇದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಆದರೆ, ನಿಮ್ಮ ಇಷ್ಟಾರ್ಥಗಳನ್ನು ನೆರೆವೇರಿಸಲು ನೀವು ಅಧಿಕ ಖರ್ಚು ಮಾಡುವ ಸಾಧ್ಯತೆ ಇದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದರಿಂದ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವವರಿಗೆ ಯಶಸ್ಸು ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಮುಂದುವರೆಯಿರಿ. ಅದರಿಂದ ನಿಮಗೆ ಲಾಭ ಸಿಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link