Venus Transit 2024: ಶೀಘ್ರದಲ್ಲಿ ಕರ್ಮಫಲದಾತನ ರಾಶಿಗೆ ವೈಭವದಾತ ಶುಕ್ರನ ಪ್ರವೇಶ, ಈ ಜನರಿಗೆ ಅಷ್ಟೈಶ್ವರ್ಯ ಪ್ರಾಪ್ತಿ ಯೋಗ!

Fri, 16 Feb 2024-5:09 pm,

Venus Transit To Aquarius 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ದೈತ್ಯ ಗುರು ಎಂದೇ ಖ್ಯಾತ ಶುಕ್ರನ ಕುಂಭ ರಾಶಿ ಗೋಚರ ನೆರವೇರಲಿದೆ. ಇದರಿಂದ ಹಲವು ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ಬನ್ನಿ ಈ ಶುಕ್ರ ಗೋಚರ ಯಾವ ರಾಶಿಗಳ ಜನರಿಗೆ ಭಾರಿ ಅದೃಷ್ಟವನ್ನು ತರಲಿದೆ ತಿಳಿದುಕೊಳ್ಳೋಣ,  (Spiritual News In Kannada)  

ಮೇಷ ರಾಶಿ: ಈ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಸಂಚರಿಸಲಿದ್ದಾನೆ. ಈ ಭಾವವನ್ನು ವಿತ್ತೀಯ ಲಾಭ, ಇಚ್ಛೆ, ಸಹೋದರ, ಸಹೋದರಿ ಹಾಗೂ ಚಿಕಪ್ಪನ ಭಾವ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ವೃತ್ತಿಯಲ್ಲಿ ಉನ್ನತಿಯ ಜೊತೆಗೆ ಪದೋನ್ನತಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಯಶಸ್ಸಿನ ಜೊತೆಗೆ ಧನಲಾಭ ಸಿಗಲಿದೆ. ಯಾವುದಾದರೊಂದು ದೊಡ್ಡ ಪ್ರಾಜೆಕ್ಟ್ ಅಥವಾ ಡೀಲ್ ಫೈನಲ್ ಆಗುವ ಸಾಧ್ಯತೆ ಇದೆ. ಇದರಿಂದ ಲಾಭ ನಿಮ್ಮದಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶುಕ್ರನ ಕೃಪೆಯಿಂದ ಆರೋಗ್ಯ ಉತ್ತಮವಾಗಿರಲಿದೆ.   

ಕರ್ಕ ರಾಶಿ: ನಿಮ್ಮ ಜಾತಕದ ಅಷ್ಟಮ ಭಾವದಲ್ಲಿ ಈ ಅವಧಿಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಹೀಗಾಗಿ ಇದರಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ವೃತ್ತಿಪರ ಜೀವನ ಉತ್ತಮವಾಗಿರಲಿದೆ. ಇದರಿಂದ ನೀವು ಪ್ರಯಾಣ ಹಾಗೂ ಮಾತಿನ ಬಲದಿಂದ ಉತ್ತಮ ನೆಟ್ವರ್ಕ್ ರೂಪಿಸುವಲ್ಲಿ ಯಶಸ್ವಿಯಾಗುವಿರಿ. ಡಿಫರೆಂಟ್ ಆಗಿ ಏನಾದರೂ ಮಾಡುವ ಮೂಲಕ ನಿಮಗೆ ಅಪಾರ ಲಾಭ ಸಿಗುವ ನಿರೀಕ್ಷೆ ಇದೆ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಆಕಸ್ಮಿಕ ಧನಲಾಭ ಕಾದಿದೆ. ಆದರೆ, ಹಣಕಾಸಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಆತುರತೆಯಿಂದ ನಿರ್ಣಯ ಕೈಗೊಳ್ಳಬೇಡಿ. ವೈವಾಹಿಕ ಜೀವನ ಸಾಕಷ್ಟು ಉತ್ತಮವಾಗಿರಲಿದೆ.   

ಕನ್ಯಾ ರಾಶಿ: ನಿಮ್ಮ ಜಾತಕದ ಶಷ್ಟಮ ಭಾವದಲ್ಲಿ ಶುಕ್ರ ಸಂಚರಿಸಲಿದ್ದಾನೆ. ಈ ಭಾವವನ್ನು ಉನ್ನತ ಶಿಕ್ಷಣ, ಧರ್ಮ, ಕುಟುಂಬ, ಧನ ಹಾಗೂ ಮಾತಿನ ಭಾವ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ಆದ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಿರಲಿದೆ. ವೃತ್ತಿಜೀವನದ ಕುರಿತು ಹೇಳುವುದಾದರೆ, ನಿಮ್ಮ ಮೇಲೆ ಕೆಲಸದ ಒತ್ತಡ ಸಾಕಷ್ಟು ಕಡಿಮೆ ಇರಲಿದೆ. ಜೀವನದಲ್ಲಿ ಹೊಸ ಶಕ್ತಿಯ ಸಂಚಾರ ಇರಲಿದೆ. ವಿದೇಶಕ್ಕೆ ಹೋಗುವ ಅವಕಾಶ ಕೂಡ ಸಿಗಬಹುದು. ಇದಲ್ಲದೆ ವಿತ್ತೀಯ ಲಾಭಗಳು ಕೂಡ ಕಾದಿವೆ. ಆರೋಗ್ಯದ ಕುರಿತು ಹೇಳುವುದಾದರೆ, ಆರೋಗ್ಯ  ಉತ್ತಮವಾಗಿರಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link