Wednesday Remedies: ಆರ್ಥಿಕ ಸಂಕಷ್ಟದಿಂದ ಮುಕ್ತಿಗಾಗಿ ಇಂದೇ ಮಾಡಿ ಈ ಪರಿಹಾರ

Wed, 29 Nov 2023-6:34 am,

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ದಿನವನ್ನೂ ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಅಂತೆಯೇ, ಬುಧವಾರವನ್ನು ವಿಘ್ನ ವಿನಾಶಕ ಗಣೇಶನಿಗೆ ಸಮರ್ಪಿಸಲಾಗಿದೆ. 

ಗಣೇಶ: ಜ್ಯೋತಿಷ್ಯದಲ್ಲಿ ಪ್ರತಿ ಕಾರ್ಯದಲ್ಲೂ ವಿಘ್ನ ವಿನಾಶಕನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಈ ಮೂಲಕ ನಾವು ಕೈಗೊಳ್ಳುವ ಕೆಲಸಗಳಲ್ಲಿ ಯಾವುದೇ ರೀತಿಯ ವಿಘ್ನ ಎದುರಾಗದಂತೆ ಗಣಪತಿಯನ್ನು ಧ್ಯಾನಿಸಲಾಗುತ್ತದೆ. 

ಬುಧವಾರದಂದು ಗಣೇಶನ ಪೂಜೆ: ಬುಧವಾರವನ್ನು ಗಣಪತಿಗೆ ಸಮರ್ಪಿಸಲಾಗಿದ್ದು ಈ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ ಎಂಬ ನಂಬಿಕೆ ಇದೆ. 

ಬುಧ ದೋಷ: ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ ಜಾತಕದಲ್ಲಿ ಬುಧ ದೋಷ ಕಡಿಮೆ ಆಗಿ, ಬುಧ ಬಲಗೊಳ್ಳುತ್ತಾನೆ. 

ಆರ್ಥಿಕ ಬಿಕ್ಕಟ್ಟು: ನೀವು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ ಬುಧವಾರದಂದು ಗಣಪತಿಯನ್ನು ಪೂಜಿಸುವಾಗ 21 ದರ್ಬೆಯನ್ನು ಅರ್ಪಿಸಿ. 

ಸಾಲಬಾಧೆ: ಯಾವುದೇ ಒಬ್ಬ ವ್ಯಕ್ತಿ ಸಾಲಬಾಧೆಯಿಂದ ಮುಕ್ತಿ ಪಡೆಯಲು ಬುಧವಾರದ ದಿನ ಅಕ್ಕಿ, ಬೇಳೆ, ಬೆಲ್ಲ, ತುಪ್ಪವನ್ನು ಬೆರೆಸಿ ಹಸುವಿಗೆ ಆಹಾರವಾಗಿ ನೀಡಿ. 

ನೆಮ್ಮದಿಯ ಜೀವನ: ಬುಧವಾರ ಗಣಪತಿಯನ್ನು ಪೂಜಿಸುವಾಗ ಗಣಪತಿಯ ಪ್ರಿಯ ಭಕ್ಷ್ಯಗಳಾದ ಲಡ್ಡು, ಮೋದಕದಂತಹ ಆಹಾರಗಳನ್ನು ನೇವೇದ್ಯವಾಗಿ ಅರ್ಪಿಸಿ. ಇದರಿಂದ ಗಣಪತಿ ಬಹಳ ಬೇಗ ಪ್ರಸನ್ನನಾಗುತ್ತಾನೆ. ಭಕ್ತರಿಗೆ ಸುಖ-ಸಮೃದ್ಧಿಯ ಜೀವನವನ್ನು ಆಶೀರ್ವದಿಸುತ್ತಾನೆ. 

ಬುಧವಾರದ ದಿನ ಕೈಲಾಗದವರಿಗೆ ಅಗತ್ಯ ಆರ್ಥಿಕ ನೆರವು ನೀಡುವುದರಿಂದ ನಿಮ್ಮ ಜೀವನದಲ್ಲಿ ಎದುರಾಗಿರುವ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link