ಆರ್ಥಿಕ ಸಂಕಷ್ಟದಿಂದ ಮುಕ್ತಿ, ಗಣಪತಿಯ ಆಶೀರ್ವಾದಕ್ಕಾಗಿ ಬುಧವಾರದ ಉಪಾಯ

Wed, 13 Dec 2023-12:03 pm,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರವನ್ನು ಗಣೇಶನಿಗೆ ಮೀಸಲಿಡಲಾಗಿದೆ. ಬುಧವಾರದ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ಸಂಕಷ್ಟಗಳಿಂದ ಪರಿಹಾರ ಪಡೆದು, ಸುಖ-ಶಾಂತಿಯ ಬದುಕನ್ನು ಆನಂದಿಸಬಹುದು ಎನ್ನಲಾಗುತ್ತದೆ. ಮಾತ್ರವಲ್ಲ, ಕೆಲವು ಗ್ರಹ ದೋಷಗಳನ್ನು ಸಹ ಪರಿಹರಿಸಬಹುದು ಎನ್ನಲಾಗುತ್ತದೆ. ಅಂತಹ ಕೆಲವು ಪರಿಹಾರಗಳೆಂದರೆ... 

ಬುಧ ಗ್ರಹ ಶಾಂತಿ:  ನಿಮ್ಮ ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ, ಇದರಿಂದ ಪರಿಹಾರಕ್ಕಾಗಿ ಬುಧವಾರದ ದಿನ ಹಸಿರುಕಾಳನ್ನು ದಾನ ಮಾಡಿ.

ಆರ್ಥಿಕ ಸಂಕಷ್ಟ:  ನೀವು ಹಣಕಾಸಿನ ಸಮಸ್ಯೆಗಳಿಂದ ಬಳಲುಟ್ಟಿದ್ದರೆ ಬುಧವಾರದ ದಿನ ಗಣೇಶನನ್ನು ಪೂಜಿಸಿ ಗಣೇಶ ಸ್ತೋತ್ರವನ್ನು ಪಠಿಸಿ. ಇದರಿಂದ ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಬಹುದು. 

ಗಣಪತಿ ಆಶೀರ್ವಾದ:  ನೀವು ಗಣಪತಿ ಆಶೀರ್ವಾದವನ್ನು ಬಯಸಿದರೆ ಅದಕ್ಕಾಗಿ ಬುಧವಾರದ ದಿನ ಗಣಪತಿಗೆ ಪ್ರಿಯವಾದ ದರ್ಬೆಯನ್ನು ಅರ್ಪಿಸಿ. ದರ್ಬೆಯ 21 ಗಂಟುಗಳನ್ನು ಮಾಡಿ ಗಣೇಶನಿಗೆ ಅರ್ಪಿಸುವುದರಿಂದ ಗಣೇಶನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. 

ಜೀವನದಲ್ಲಿ ಪ್ರಗತಿ:  ನೀವು ನಿಮ್ಮ ಜೀವನದಲ್ಲಿ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ ಪ್ರಗತಿ ಹೊಂದಲು ಬಯಸಿದರೆ ಅದಕ್ಕಾಗಿ ಬುಧವಾರದ ದಿನ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. 

ರಾಹು ದೋಷ:  ನಿಮ್ಮ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿದ್ದರೆ ಬುಧವಾರ ರಾತ್ರಿ ನಿಮ್ಮ ತಲೆಯ ಬಳಿ ತೆಂಗಿನ ಕಾಯಿ ಇಟ್ಟು ಮಲಗಿ. ಮರುದಿನ ಬೆಳಿಗ್ಗೆ ಗಣಪತಿಗೆ ಪೂಜೆ ಸಲ್ಲಿಸಿ ದಕ್ಷಿಣೆ ಸಮೇತ ಈ ತೆಂಗಿನ ಕಾಯಿಯನ್ನು ಗಣಪತಿಗೆ ಅರ್ಪಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link