ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್‌ ದತ್‌ ಸೆನ್ಸೇಷನಲ್‌ ಹೇಳಿಕೆ ವೈರಲ್‌

Tue, 23 Jul 2024-4:14 pm,

ಬಾಲಿವುಡ್ ನಟ ಸಂಜಯ್ ದತ್ ಸಿನಿಜಗತ್ತಿನಲ್ಲಿ ಅನೇಕ ವಿವಾದಗಳಿಗೆ ಸಿಲುಕಿದ್ದರು ಎಂಬುದು ತಿಳಿದ ವಿಚಾರವೇ... ಇದೀಗ ಇವರಿಗೆ ಸಂಬಂಧಿಸಿದ ಹಳೆಯ ವಿಷಯವೊಂದು ಮುನ್ನೆಲೆಗೆ ಬಂದಿದೆ.   

ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್ʼನಲ್ಲಿ ಸಂಜಯ್ ದತ್ ಅದೊಂದು ದುರಂತದ ಬಗ್ಗೆ ಮಾತನಾಡಿದ್ದಾರೆ.  

ಸಂಜಯ್ ದತ್ ಅವರ ಹೆಂಡತಿಗೆ ಒಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿತ್ತು. ಆ ಬಗ್ಗೆ ತಿಳಿದ ಸಂಜಯ್‌, ತನ್ನ ಹೆಂಡತಿಯನ್ನು ಕೊಲ್ಲುವಷ್ಟರ ಮಟ್ಟಿಗೆ ಕೋಪಗೊಂಡಿದ್ದರು... ಅಷ್ಟಕ್ಕೂ ಇವೆಲ್ಲವನ್ನೂ ಸಂಜಯ್‌ ದತ್‌ʼಗೆ ಹೇಳಿದ್ದು ಒಬ್ಬ ಜ್ಯೋತಿಷಿಯಂತೆ.  

ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಮಾತನಾಡಿದ ಸಂಜಯ್ ದತ್, ವಿಷಯದ ಬಗ್ಗೆ ವಿವರವಾಗಿ ಹೇಳಿದ್ದಾರೆ. ಇನ್ನು ಈ ಎಪಿಸೋಡ್‌ʼನಲ್ಲಿ ನಟಿ ಸುಶ್ಮಿತಾ ಸೇನ್ ಕೂಡ ಇದ್ದರು.   

ಕಾರ್ಯಕ್ರಮದಲ್ಲಿ ಆಧ್ಯಾತ್ಮದ ಕುರಿತು ಚರ್ಚೆ ನಡೆದಿದ್ದು, ಈ ಮಧ್ಯೆ ಸಂಜಯ್ ದತ್ ಅವರು ಮದ್ರಾಸಿನ ಶಿವನಾರಿ ಎಂಬ ಸಣ್ಣ ಹಳ್ಳಿಯಲ್ಲಿ ಜ್ಯೋತಿಷಿಯೊಬ್ಬರನ್ನು ಭೇಟಿಯಾದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.   

"ಆ ಕಾಲದಲ್ಲಿ ಆ ಹಳ್ಳಿಯಲ್ಲಿ ಯಾರ ಪರಿಚಯವೂ ಇರಲಿಲ್ಲ. ಅಲ್ಲಿ ನಿಮ್ಮ ಹೆಬ್ಬೆರಳಿನ ಗುರುತನ್ನು ನೋಡಿ ಭವಿಷ್ಯ ಹೇಳುತ್ತಾರೆ. ನನ್ನ ಬಗ್ಗೆಯೂ ಜನ್ಮಜನ್ಮಗಳ ರಹಸ್ಯವನ್ನು ಬಿಚ್ಚಿಟ್ಟಿದ್ದರು.  ನಿಮ್ಮ ತಂದೆಯ ಹೆಸರು ಬಾಲರಾಜ್ ದತ್ ಎಂದು ಹೇಳಿದರು. ನಾನು ಅಲ್ಲ... ಸುನೀಲ್ ದತ್ ಎಂದೆ. ಇದಾದ ನಂತರ  ನಿಮ್ಮ ತಾಯಿಯ ಹೆಸರು ಫಾತಿಮಾ ಹುಸೇನ್ ಎಂದು ಹೇಳಿದರು. ಈ ಸತ್ಯ ಯಾರಿಗೂ ತಿಳಿಯದಿರಲಿಲ್ಲ. ಆದರೆ ಆ ಜ್ಯೋತಿಷಿ ಹೇಳುವಾಗ ನನಗೆ ಆಶ್ಚರ್ಯವಾಯಿತು" ಎಂದಿದ್ದಾರೆ.

ಇದಷ್ಟೇ ಅಲ್ಲ, "ನನ್ನ ಪೂರ್ವಜನ್ಮದ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದರು. ನಾನು ಅಶೋಕನ ವಂಶದ ಶಿವಭಕ್ತ ರಾಜನಾಗಿದ್ದೆ ಎಂದು ಹೇಳಿದ್ದರು. ನನ್ನ ಹೆಂಡತಿಗೆ ನನ್ನ ಮಂತ್ರಿಯೊಂದಿಗೆ ಅನೈತಿಕ ಸಂಬಂಧ ಇತ್ತು. ನಾನು ಸಾಯಬೇಕೆಂದು ಆಕೆ ನನ್ನನ್ನು ಯುದ್ಧಕ್ಕೆ ಕಳುಹಿಸುತ್ತಾಳೆ. ಆದರೆ ನಾನು ಅಲ್ಲಿ ಅನೇಕ ಜನರನ್ನು ಕೊಂದು ಹಿಂತಿರುಗುತ್ತೇನೆ. ಹಿಂದಿರುಗಿದ ನಂತರ, ನನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದು, ಅವರಿಬ್ಬರನ್ನು ಕೊಂದು ಕಾಡಿಗೆ ಹೋದೆ, ಅಲ್ಲಿ ನಾನು ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡೆ. ನಾನು ನನ್ನ ಹಿಂದಿನ ಜನ್ಮದಲ್ಲಿ ಹಲವಾರು ಜನರ ಪ್ರಾಣವನ್ನು ತೆಗೆದುಕೊಂಡಿದ್ದರಿಂದ ನನ್ನ ಜೀವನದಲ್ಲಿ ಕಷ್ಟಗಳಿವೆ ಎಂದು ಆ ಜ್ಯೋತಿಷ್ಯರು ಹೇಳಿದ್ದಾರೆ" ಅಂತಾ ಸಂಜಯ್‌ ಬಹಿರಂಗಪಡಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link