ಕೃಷ್ಣ ಜನ್ಮಾಷ್ಟಮಿಯಂದು ಮಡಿಕೆಯನ್ನು ಹೊಡೆಯುವುದು ಏಕೆ ಗೊತ್ತಾ? ಇದರ ಹಿಂದಿದೆ ಬಹುಕಾಲದ ರಹಸ್ಯ!

Mon, 26 Aug 2024-7:20 am,

ಪುರಾಣಗಳಲ್ಲಿ ಶ್ರೀ ಮಹಾವಿಷ್ಣುವಿನ ಎಂಟನೇ ಅವತಾರವೆಂದರೆ ಶ್ರೀಕೃಷ್ಣನ ಜನ್ಮದಿನ.   

ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣಾಷ್ಟಮಿ, ಜನ್ಮಾಷ್ಟಮಿ, ಗೋಕುಲಾಷ್ಟಮಿ ಹೀಗೆ ವಿವಿದ ಹೆಸರುಗಳಲ್ಲಿ ಕರೆಯುತ್ತಾರೆ.  

ಕೃಷ್ಣಾಷ್ಟಮಿಯಂದು ಭಕ್ತರು ದಿನವಿಡೀ ಉಪವಾಸ ಮಾಡುತ್ತಾರೆ ಮತ್ತು ಸಂಜೆ ಶ್ರೀಕೃಷ್ಣನನ್ನು ಪೂಜಿಸುತ್ತಾರೆ.   

ಶ್ರಾವಣ ಮಾಸದಲ್ಲಿ ಶ್ರೀಕೃಷ್ಣನಿಗೆ ಗಳಿಗೆ ಹಾಲು, ಪಾಯಸ, ಬೆಲ್ಲ, ಮೊಸರು, ಮೆಣಸಿನಕಾಯಿ ಬೆರೆಸಿದ ಬೆಣ್ಣೆಯನ್ನು ಅರ್ಪಿಸಲಾಗುತ್ತದೆ.   

ಶ್ರೀಕೃಷ್ಣನ ವಿಗ್ರಹವನ್ನು ತೊಟ್ಟಿಲಿನಲ್ಲಿಟ್ಟು ವಿವಿಧ ಹಾಡುಗಳು ಮತ್ತು ಕೀರ್ತನೆಗಳನ್ನು ಹಾಡಿ ತೂಗಿಸಲಾಗುತ್ತದೆ.  

ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಶ್ರಾವಣ ಬಾಲ ಅಷ್ಟಮಿಯ ದಿನದಂದು ಜನಿಸಿದನು. ಈ ಕೃಷ್ಣಾಷ್ಟಮಿಯ ದಿನ ಮುಂಜಾನೆ ಕೃಷ್ಣನಿಗೆ ಇಷ್ಟವಾದ ತಿಂಡಿ ತಿನಿಸು ಅರ್ಪಿಸಿ ಪೂಜಿಸಲಾಗುತ್ತದೆ.  

ಆ ಬಾಲಕೃಷ್ಣನನ್ನು ಮನೆಗೆ ಆಹ್ವಾನಿಸಿ, ಕೃಷ್ಣನ ಪಾದಗಳನ್ನು ಹೊರಗಿನಿಂದ ಮನೆಯೊಳಗೆ ತುಳಿಯಬೇಕು. ಇತರ ಪೂಜೆಗಳಿಗಿಂತ ಭಿನ್ನವಾಗಿ, ಮಧ್ಯಾಹ್ನ 12 ಗಂಟೆಗೆ ಕೃಷ್ಣಾಷ್ಟಮಿ ಪೂಜೆಯನ್ನು ಪ್ರಾರಂಭಿಸುವುದು ವಾಡಿಕೆ.   

ಶ್ರಾವಣ ಮಾಸದಲ್ಲಿ ಬರುವ ಕೃಷ್ಣಾಷ್ಟಮಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಕೃಷ್ನ ಜನ್ಮಾಷ್ಟಮಿಯಂದು ಸಾಮಾನ್ಯವಾಗಿ ಎಲ್ಲರೂ ಮಡಿಕೆಯನ್ನು ದಾರಕ್ಕೆ ಕಟ್ಟಿ ಎತ್ತರಕ್ಕೆ ತೂಗು ಹಾಕಿ ಹೊಡೆಯಲು ಪ್ರಾರಂಭಿಸುತ್ತಾರೆ. ಈ ಸಮಪ್ರಾದಾಯದ ಹಿಂದಿನ ರಹಸ್ಯವೊಂದಿದೆ.  

ಶ್ರೀಕೃಷ್ಣನು ಚಿಕ್ಕವನಿದ್ದಾಗ ಎಲ್ಲರ ಮನೆಗಳಿಗೆ ನುಗ್ಗಿ ಬೆಣ್ಣೆ ಕದ್ದು ತಿನ್ನುತ್ತದ್ದ ಎಂಬ ಹಿನ್ನೆಲೆ ಇದೆ. ಇದರಿಂದ ಶ್ರೀಕೃಷ್ಣ ಕಾಟ ತಾಲಲಾರದೆ ಜನ ಮೊಸರು ಹಾಗೂ ಬೆಣ್ಣೆಯನ್ನು ಕೃಷ್ಣನ ಕೃಯಿಂದ ತಪ್ಪಿಸಿ ಇಡಲು ಮಡಿಕೆಯಲ್ಲಿ ಹಾಕಿ ಮೇಲಕ್ಕೆ ಕಟ್ಟುತ್ತಿದ್ದರಂತೆ.  

ಆದರೆ ಕೃಷ್ಣನು ಬಹಳ ಚೇಷ್ಟೆಗಾರನಾಗಿದ್ದ ಕಾರಣ ಸ್ನೇಹಿತರ ಮೇಲೆ ಹತ್ತಿ ಮಡಿಕೆಯನ್ನು ಒಡೆದು ಹಾಲು ಮತ್ತು ಮೊಸರನ್ನು ಕದ್ದು ತಿನ್ನುತ್ತಿದ್ದನಂತೆ.  

ಈ ರೀತಿ ಕೃಷ್ಣನ ಕುಚೇಷ್ಟೆ ನೆನೆಪಿಸಲು ಇಂದಿನ ಮಕ್ಕಳಿಗೆ  ಕೃಷ್ಣನ ಚೇಷ್ಟೆ ತಿಳಿಸಲು ಕೃಷ್ಣನ ಜನ್ಮದಿನದಂದು ಮಡಿಕೆಯನ್ನು ಕಟ್ಟಿ ಹೊಡೆಯಲು ಬಿಟ್ಟು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link