ಕೆಲವೇ ಗಂಟೆಗಳಲ್ಲಿ ಈ ಜನರ ಮನೆಯಂಗಳದಲ್ಲಿ ಹಣದ ಸುರಿಮಳೆ, ಧನಸಂಪತ್ತಿನ ಹೊಳೆಯೇ ಹರಿಯಲಿದೆ!

Tue, 25 Jul 2023-9:23 pm,

ಜುಲೈ 26 ರಂದು ನಿರ್ಮಾಣಗೊಳ್ಳುತ್ತಿರುವ ಧನಯೋಗವು ವೃಷಭ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಈ ಅವಧಿಯಲ್ಲಿ, ಉದ್ಯೋಗಿಗಳು ಯಶಸ್ಸನ್ನು ಪಡೆಯುತ್ತಾರೆ. ಇದೇ ವೇಳೆ , ಈ ಸಮಯವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ, ಪ್ರಗತಿಗೆ ವಿಪುಲ (Astro Tips In Kannada) ಅವಕಾಶಗಳಿವೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಭಾಗವು ತುಂಬಾ ಬಲಿಷ್ಠವಾಗಿರಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ ಮತ್ತು ವೈವಾಹಿಕ ಜೀವನದಲ್ಲಿ ಸುಖ ಸಮೃದ್ಧಿ ಇರಲಿದೆ. ಈ ಸಮಯದಲ್ಲಿ ಕುಟುಂಬ ಸದಸ್ಯರೊಂದಿಗೆ ಒಟ್ಟಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.  

ಮಿಥುನ ರಾಶಿಯವರ ಪಾಲಿಗೆ ಧನಯೋಗವು ಆರ್ಥಿಕ ವಹಿವಾಟುಗಳು ಮತ್ತು ಹೂಡಿಕೆಗಳ ವಿಷಯದಲ್ಲಿ ಅತ್ಯದ್ಭುತ ಸಾಬೀತಾಗಲಿದೆ ಈ ರಾಶಿಗಳ ಜನರಿಗೆ ಧನಯೋಗವು ಸಾಕಷ್ಟು ಮಂಗಳಕರವಾಗಿರಲಿದೆ.   ಈ ಅವಧಿಯಲ್ಲಿ ಮಾಡಿದ ಹೂಡಿಕೆಯು ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಪ್ರಯೋಜನಗಳು ದೊರೆತು, ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಈ ಸಮಯದಲ್ಲಿ, ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಉನ್ನತಿ ಇರಲಿದೆ ಮತ್ತು ನೀವು ಸಾಕಷ್ಟು ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ.  

ಧನ ಯೋಗದಿಂದ ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ಈ ಸಮಯದಲ್ಲಿ, ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಬಯಸುವವರಿಗೆ ಅಥವಾ ವ್ಯಾಪಾರಕ್ಕೆ ಸಂಬಂಧ ಹೊಂದಿರುವವರಿಗೆ, ಈ ಸಮಯವು ಒಂದು ಒರದಾನ ಸಾಬೀತಾಗಲಿದೆ. ಈ ಸಮಯದಲ್ಲಿ, ಸಿಂಹ ರಾಶಿಯ ಜನರ ಘನತೆ-ಗೌರವ ಹೆಚ್ಚಾಗಲಿದೆ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಅಷ್ಟೇ ಅಲ್ಲ, ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳ ಬೆಂಬಲವನ್ನು ಪಡೆಯುವಿರಿ. ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಲ್ಲಿ ನೀವು ಯಶಸ್ಸನ್ನು ಪಡೆಯುವಿರಿ.  

ಸರ್ಕಾರಿ ಉದ್ಯೋಗ ಬಯಸುವ ಧನು ರಾಶಿಯವರಿಗೆ ಈ ಯೋಗ ಸಾಕಷ್ಟು ಅನುಕೂಲಕರವಾಗಿರಲಿದೆ.  ಧನಯೋಗವು ಈ ಸಮಯದಲ್ಲಿ ಧನು ರಾಶಿಯವರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲಿದೆ. ವೃತ್ತಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅಷ್ಟೇ ಅಲ್ಲ, ನಿಮ್ಮ ಕೆಲಸವು ವೃತ್ತಿಪರ ಕ್ಷೇತ್ರದಲ್ಲೂ ಮೆಚ್ಚುಗೆಗೆ ಪಾತ್ರವಾಗಲಿದೆ. ಜುಲೈ 26 ರಂದು ಧನಯೋಗವು ರೂಪುಗೊಳ್ಳುವುದರಿಂದ ಈ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನೀವು ಎಲ್ಲೋ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಮಯ ಅನುಕೂಲಕರವಾಗಿದೆ ಮತ್ತು ಭವಿಷ್ಯದಲ್ಲಿ ಅದರಿಂದ ಲಾಭ ಕೂಡ ನಿಮ್ಮದಾಗಲಿದೆ.  

ವೈದಿಕ ಜ್ಯೋತಿಷ್ಯದಲ್ಲಿ, ಧನಯೋಗವನ್ನು ಹೊರತುಪಡಿಸಿ, ಇಂತಹ ಅನೇಕ ಯೋಗಗಳನ್ನು ಉಲ್ಲೇಖಿಸಲಾಗಿದೆ, ಅವು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ, ಗಜಕೇಸರಿ ಯೋಗ, ಪಂಚ ಮಹಾಪುರುಷ ಮತ್ತು ಅಧಿ ಯೋಗವು ಸ್ಥಳೀಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಧನ ಯೋಗದ ಸಮಯದಲ್ಲಿ, ಸ್ಥಳೀಯರು ವಿತ್ತೀಯ ಲಾಭದ ಜೊತೆಗೆ ಸಂಪತ್ತನ್ನು ಕೂಡಿಹಾಕಲು ಸಾಧ್ಯವಾಗುತ್ತದೆ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link