ಈ ಕಾರಣಕ್ಕಾಗಿ ಹೆಣ್ಣು ಮಕ್ಕಳು ತೆಂಗಿನಕಾಯಿ ಒಡೆಯಬಾರದಂತೆ

Thu, 08 Sep 2022-4:08 pm,

ಪೂಜೆ ಪುನಸ್ಕಾರ, ಹಬ್ಬ , ಆರೋಗ್ಯ ಮತ್ತು ಸೌಂದರ್ಯ, ಅಡುಗೆ ಹೀಗೆ ವಿವಿಧ ಉಪಯೋಗಗಳಿಗಾಗಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ದೇವಸ್ಥಾನಗಳಲ್ಲಿ ತೆಂಗಿನಕಾಯಿಯನ್ನು ಅರ್ಪಿಸುವ ಪ್ರತೀತಿ ಇದೆ. ಪೂಜಾ ಸಾಮಗ್ರಿಗಳಲ್ಲಿ ತೆಂಗಿನಕಾಯಿಗೂ ವಿಶೇಷ ಮಹತ್ವವಿದೆ. ಭಗವಂತನಿಗೆ ತೆಂಗಿನಕಾಯಿಯನ್ನು ಅರ್ಪಿಸುವುದರಿಂದ ನೋವು ನಿವಾರಣೆಯಾಗುತ್ತದೆ ಎನ್ನುವುದು ನಂಬಿಕೆ.

ವಿಷ್ಣು ಮತ್ತು ತಾಯಿ ಲಕ್ಷ್ಮಿ ತೆಂಗಿನ ಮರ ಮತ್ತು ಕಾಮಧೇನುವನ್ನು ಭೂಮಿಗೆ ತಂದರು ಎಂದು ನಂಬಲಾಗಿದೆ. ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ತೆಂಗಿನಕಾಯಿ ಶಿವನಿಗೆ ತುಂಬಾ ಪ್ರಿಯ. ತೆಂಗಿನಕಾಯಿಯ ಮೇಲೆ ಮಾಡಿದ ಮೂರು ಕಣ್ಣುಗಳನ್ನು ಶಿವನ ತ್ರಿನೇತ್ರದೊಂದಿಗೆ ಹೋಲಿಸಲಾಗುತ್ತದೆ.  

ಮಹಿಳೆಯರು ಏಕೆ ತೆಂಗಿನಕಾಯಿ ಒಡೆಯುವುದಿಲ್ಲ? ತೆಂಗಿನಕಾಯಿ ಬೀಜದ ಹಣ್ಣು. ಮಹಿಳೆಯರು ಬೀಜ ರೂಪದಲ್ಲಿ ಸಂತತಿಗೆ ಜನ್ಮ ನೀಡುತ್ತಾರೆ. ತೆಂಗಿನಕಾಯಿಯು ಗರ್ಭಧರಿಸುವ ಬಯಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಮಹಿಳೆಯರಿಗೆ ತೆಂಗಿನಕಾಯಿ ಒಡೆಯುವುದು ನಿಷಿದ್ಧ. ಮಹಿಳೆಯರು ತೆಂಗಿನಕಾಯಿ ಒಡೆದರೆ ಅವರ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ನಂಬಿಕೆ ಇದೆ.

ತೆಂಗಿನ ಬೀಜವನ್ನು ಸಂತತಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿಯನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಶಿವನ ಆಶೀರ್ವಾದ ದೊರೆಯುತ್ತದೆ ಮತ್ತು ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಯೋಗ ಕೂಡಿ ಬರುತ್ತದೆಯಂತೆ. 

ತೆಂಗಿನಕಾಯಿಯನ್ನು ತ್ರಿದೇವನ ಸಂಕೇತವೆಂದು ಪರಿಗಣಿಸಲಾಗಿದೆ. ಪೂಜೆಯಲ್ಲಿ ತೆಂಗಿನಕಾಯಿ ಇಡುವುದರಿಂದ ಲಕ್ಷ್ಮಿಯ ಕೃಪೆ ಸಿಗುತ್ತದೆ. ವಾಸ್ತು ಶಾಸ್ತ್ರದಲ್ಲಿ ತೆಂಗಿನಕಾಯಿಗೂ ಮಹತ್ವವಿದೆ. ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link