ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ದಸರಾ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ.ಈ ವರ್ಷ ವಿಜಯದಶಮಿಯಂದು ಶಶ ಮತ್ತು ಮಾಳವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಈ ದಿನ ಶ್ರಾವಣ ನಕ್ಷತ್ರವೂ ಇರುತ್ತದೆ. ಹಾಗಾಗಿ ಮೂರು 3 ರಾಶಿಯವರಿಗೆ ಈ ಯೋಗವು ಅತ್ಯಂತ ಮಂಗಳಕರವಾಗಿ ಪರಿಣಮಿಸಲಿದೆ.  


COMMERCIAL BREAK
SCROLL TO CONTINUE READING

ವೃಷಭ ರಾಶಿ :
ವೃಷಭ ರಾಶಿಯ ಜನರು ಆರ್ಥಿಕ ಲಾಭ ಪಡೆಯಬಹುದು. ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ತಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುತ್ತಾರೆ. ಪ್ರೇಮ ಜೀವನದಲ್ಲಿ ಬರುವ ಸಮಸ್ಯೆಗಳು ಬಗೆಹರಿಯುತ್ತವೆ. ವ್ಯಾಪಾರ ಮಾಡುವವರು ದೊಡ್ಡ ಮಟ್ಟದ ಲಾಭವನ್ನು ಗಳಿಸಬಹುದು. ಉದ್ಯೋಗಿಗಳಿಗೆ ಸಮಯ ಅನುಕೂಲಕರವಾಗಿರಲಿದೆ.


ಇದನ್ನೂ ಓದಿ : ಶನಿ ಶುಕ್ರರ ಕೃಪೆಯಿಂದಲೇ ಉಕ್ಕಿ ಬರುವುದು ಧನ ಸಂಪತ್ತು! ಈ ರಾಶಿಯವರ ಜೀವನದಲ್ಲಿ ಅಷ್ಟೈಶ್ವರ್ಯ ಪ್ರವೇಶ


ತುಲಾ ರಾಶಿ :
ಇಲ್ಲಿಯವರೆಗೆ ಮದುವೆ ನಿಶ್ಚಯ ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿದ್ದವರಿಗೆ   ಕಂಕಣ ಭಾಗ್ಯ ಕೂಡಿ ಬರುವುದು. ಕೆಲಸದ ಸ್ಥಳದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದು. ಯಶಸ್ಸಿನ ಹಾದಿ ತೆರೆದುಕೊಳ್ಳುವುದು. ಕುಟುಂಬ ಸಂಬಂಧಗಳು ಬಲವಾಗಿರುತ್ತವೆ. 


ಮಕರ ರಾಶಿ :
ಮಕರ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಉತ್ತಮ ಸಮಯ. ಹೊಸ ಅವಕಾಶಗಳು ದೊರೆಯಲಿವೆ. ಸಾಲ ಕೊಟ್ಟು ಹಿರಗೆ ಉಳಿದಿರುವ ಹಣ ಮತ್ತೆ ಕೈ ಸೇರುವುದು. ಆರೋಗ್ಯವೂ ಮೊದಲಿಗಿಂತ ಉತ್ತಮವಾಗಿರುತ್ತದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ರೋಗ ನಿವಾರಣೆಯಾಗುವುದು. ಅವಿವಾಹಿತರಿಗೆ ಮಾಡುವೆ ಯೋಗ  ಕೂಡಿ ಬರುವುದು. 


ಇದನ್ನೂ ಓದಿ: ಗುರು ಶುಕ್ರ ಮೈತ್ರಿಯಿಂದ ಸಂಸಪ್ತಕ ರಾಜಯೋಗ, ಈ ರಾಶಿಯವರಿಗೆ ಹಣಕ್ಕಿಲ್ಲ ಕೊರತೆ, ಮುಟ್ಟಿದ್ದೆಲ್ಲಾ ಬಂಗಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.