Loan Problems : ಕೆಲವೊಮ್ಮೆ ಮನೆಯ ಖರ್ಚು ಅಥವಾ ಯಾವುದೇ ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ಸಾಲವನ್ನು ಮಾಡಬೇಕಾಗುವ ಪ್ರಸಂಗ ಒದಗಿಬರುತ್ತದೆ. ಒಮ್ಮೆ ನೀವು ಸಾಲದ ಬಲೆಗೆ ಸಿಲುಕಿದರೆ, ಸಾಲ ಹೆಚ್ಚಾಗುತ್ತದೆಯೇ ಹೊರತು ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದರೆ ಈ ಸಾಲದ ಸಮಸ್ಯೆಯನ್ನು ನೀಗಿಸಲು ದಾರಿ ತೋರಿಸುವ ಉಪಾಯ ಕ್ರಮಗಳು ಜ್ಯೋತಿಷ್ಯ ಶಾಸ್ತ್ರದಲ್ಲಿವೆ.. ಬನ್ನಿ ಅವು ಯಾವುವು ಅಂತ ತಿಳಿಯೋಣ..


COMMERCIAL BREAK
SCROLL TO CONTINUE READING

ಹಿಂದೂ ಧರ್ಮದಲ್ಲಿ ವಿವಿಧ ಮರಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಸಾಲವನ್ನು ತೊಡೆದುಹಾಕಲು ಪರಿಹಾರ ನೀಡುವ ಕೆಲವು ಮರಗಳಿವೆ. ತುಳಸಿ, ಬನ್ನಿ, ಬಿಲ್ವ ಪತ್ರಿ ಮರದ ಹೊರತಾಗಿ, ಅರ್ಜುನ ತೊಗಟೆ ಸಾಲಕ್ಕೆ ಪರಿಹಾರ ನೀಡಲು ಸಹಾಯಕಾರಿಯಾಗಿದೆ. ಹೇಗೆ ಅಂತೀರಾ.. ಅರ್ಜುನ ಮರದ ತೊಗಟೆ (ಮತ್ತಿ ಗಿಡ, ಬಿಳಿಮತ್ತಿ ಗಿಡ) ಪರಿಹಾರ ಕ್ರಮದಿಂದ ಇದು ಸಾಧ್ಯ..


ಇದನ್ನೂ ಓದಿ:ಶೀಘ್ರದಲ್ಲಿ ಕರ್ಮಫಲದಾತನ ರಾಶಿಗೆ ವೈಭವದಾತ ಶುಕ್ರನ ಪ್ರವೇಶ, ಈ ಜನರಿಗೆ ಅಷ್ಟೈಶ್ವರ್ಯ ಪ್ರಾಪ್ತಿ ಯೋಗ!


ಅರ್ಜುನ ಮರದ ತೊಗಟೆ : ಅರ್ಜುನ ಮರದ ತೊಗಟೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆಯಲ್ಲಿ ಪೂಜಾ ಮನೆಯ ಆಸನದ ಮೇಲೆ ತಾಯಿ ಲಕ್ಷ್ಮಿಗೆ ಅರ್ಪಿಸಿ. ಪೂಜೆಯ ನಂತರ ತೊಗಟೆಯನ್ನು ಕೆಂಪು ಬಟ್ಟೆಯ ಸಮೇತ ನದಿಯ ನೀರಿನಲ್ಲಿ ತೇಲಿಬಿಡಬೇಕು. ಈ ರೀತಿ ಮಾಡಿದರೆ ಎಲ್ಲಾ ರೀತಿಯ ಸಾಲಗಳಿಂದ ಮುಕ್ತರಾಗುತ್ತೀರಿ. 


ಅರ್ಜುನ ಮರದ ತೊಗಟೆಯ ಮೇಲೆ ಕೆಂಪು ಚಂದನವನ್ನು ಸಿಂಪಡಿಸಿ. ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆಯ ಬೀರು ಅಥವಾ ಲಾಕರ್‌ನಲ್ಲಿ ಇರಿಸಿ. ಸಾಲದ ಸುಳಿಯಿಂದ ಮುಕ್ತರಾಗುವಿರಿ. ಇದರೊಂದಿಗೆ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. 


ಇದನ್ನೂ ಓದಿ:30 ವರ್ಷಗಳ ನಂತರ ಸೂರ್ಯ-ಶನಿ ಸಂಯೋಗ: ಈ 4 ರಾಶಿಯವರು ಇನ್ನೊಂದು ವರ್ಷ ರಾಜರಂತೆ ಬಾಳುವುದರಲ್ಲಿ ಅನುಮಾನವೇ ಇಲ್ಲ!


ಸಂಜೆ ಅರ್ಜುನ ಮರದ ತೊಗಟೆ ಮತ್ತು ಕರ್ಪೂರದ ತುಂಡನ್ನು ಒಟ್ಟಿಗೆ ಸುಡಬೇಕು. ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುತ್ತದೆ ಮತ್ತು ಸಾಲದ ಛಾಯೆಯನ್ನು ತೊಡೆದುಹಾಕುತ್ತದೆ. ವ್ಯಾಪಾರದಲ್ಲಿ ಪದೇ ಪದೇ ನಷ್ಟವಾಗುತ್ತಿದ್ದರೆ ಅರ್ಜುನ ಮರದ ತೊಗಟೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕುತ್ತಿಗೆಗೆ ಕಟ್ಟಿಕೊಳ್ಳಿ. ಇದರಿಂದ ವ್ಯಾಪಾರದಲ್ಲಿ ಲಾಭವಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.