Chanakya Niti About Marriage: ಆಚಾರ್ಯ ಚಾಣಕ್ಯರು ತಮ್ಮ ಕೂಟ ನೀತಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಮಾನವನ ಜೀವನಕ್ಕೆ ಸಂಬಂಧಿಸಿದಂತೆ ಹಲವು ಸಂಗತಿಗಳನ್ನು ಉಲ್ಲೇಖಿಸಿದ್ದಾರೆ.ಅವರ ನೀತಿಗಳ ಅನುಸರಿಸಿದರೆ, ಜನರು ತಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯಬಹುದು. ಚಾಣಕ್ಯನ ನೀತಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡ ಚಂದ್ರಗುಪ್ತ ಮೌರ್ಯ ಮಗಧ ಸಾಮ್ರಾಟ ಎನೆಸಿಕೊಂಡ. ಚಾಣಕ್ಯರು ತಮ್ಮ ನೀತಿಯಲ್ಲಿ ಸ್ತ್ರೀಪುರುಷರ ಸಂಬಂಧ, ಪತಿ-ಪತಿನರ ಆಚರಣೆಯ ಕುರಿತು ಕೂಡ ಮಾಹಿತಿ ನೀಡಿದ್ದಾರೆ. ಇದರಲ್ಲಿ ಪತ್ನಿಯ ಪ್ರತಿ ಓರ್ವ ಪುರುಷನ ಆಚರಣೆ ಹೇಗಿರಬೇಕು ಎಂಬುದನ್ನು ಕೂಡ ಹೇಳಿದ್ದಾರೆ. ತನ್ನ ಪತ್ನಿಯ ದೃಷ್ಟಿಯಲ್ಲಿ ಆತ ಓರ್ವ ಉತ್ತಮ ಪತಿ ಹೇಗೆ ಸಾಬೀತುಪಡಿಸಬಹುದು ಎಂಬುದನ್ನು ಕೂಡ ಚಾಣಕ್ಯರು ಹೇಳಿದ್ದಾರೆ. ಒಂದು ವೇಳೆ ಪತಿಯಲ್ಲಿ ಅವಗುಣಗಳಿದ್ದರೆ, ಪತ್ನಿ ತನ್ನ ಪತಿಯನ್ನು ಮನಸೋ ದ್ವೇಷಿಸಲು ಪ್ರಾರಂಭಿಸುತ್ತಾಳೆ ಎಂದು ಅವರು ಹೇಳಿದ್ದಾರೆ.

COMMERCIAL BREAK
SCROLL TO CONTINUE READING

ಉತ್ತಮ ಚರಿತ್ರೆ ಹೊಂದಿರದ ವ್ಯಕ್ತಿ
ಚಾಣಕ್ಯ ನೀತಿಯ ಪ್ರಕಾರ ಮನುಷ್ಯನ ಗುಣ ಕೆಟ್ಟದಾಗಿದ್ದರೆ ಅಥವಾ ಅವನು ತನ್ನ ಹೆಂಡತಿಯನ್ನು ಹೊರತುಪಡಿಸಿ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರೆ, ಅಂತಹ ಗಂಡಂದಿರನ್ನು ಯಾವುದೇ ಮಹಿಳೆ ಇಷ್ಟಪಡುವುದಿಲ್ಲ. ಅವನ ಸ್ವಂತ ಹೆಂಡತಿ ಅವನಿಗೆ ಶತ್ರುವಾಗುತ್ತಾಳೆ.


ಸುಳ್ಳು ಹೇಳುವವ
ಪ್ರತಿಯೊಬ್ಬ ಹೆಂಡತಿಯೂ ತನ್ನ ಪತಿ ತನ್ನ ವೈವಾಹಿಕ ಜೀವನದಲ್ಲಿ ಪ್ರಾಮಾಣಿಕನಾಗಿರಬೇಕೆಂದು ಬಯಸುತ್ತಾಳೆ. ಆಕೆಗೆ ಎಲ್ಲವನ್ನೂ ಸತ್ಯವಾಗಿ ಹೇಳಿ. ಸುಳ್ಳಿನ ಬೆಂಬಲವನ್ನು ಎಂದಿಗೂ ತೆಗೆದುಕೊಳ್ಳಬೇಡಿ. ಮತ್ತೊಂದೆಡೆ, ಗಂಡನು ತನ್ನ ಹೆಂಡತಿಗೆ ಪದೇ ಪದೇ ಸುಳ್ಳು ಹೇಳಿದರೆ, ಅಂತಹ ಗಂಡನನ್ನು ಪತ್ನಿ ದ್ವೇಷಿಸಲು ಪ್ರಾರಂಭಿಸುತ್ತಾರೆ. ಅವಳು ಅವನನ್ನು ತನ್ನ ದೊಡ್ಡ ಶತ್ರು ಎಂದು ಪರಿಗಣಿಸಲು ಪ್ರಾರಂಭಿಸುತ್ತಾಳೆ.


ಇದನ್ನೂ ಓದಿ-ಕನ್ಯಾ ರಾಶಿಯಲ್ಲಿ ಪವರ್ಫುಲ್ ಶತ್ರುಹಂತಾ ಯೋಗ ನಿರ್ಮಾಣ , ಧನಕುಬೇರನ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!


ರಹಸ್ಯ ಬಚ್ಚಿಡುವ ಪತಿ
ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ತಮ್ಮ ಗಂಡನಿಗೆ ಎಲ್ಲವನ್ನೂ ಹೇಳಲು ಇಷ್ಟಪಡುತ್ತಾರೆ. ಒಂದು ವೇಳೆ ಪತಿ ಆಕೆಯ ಎಲ್ಲ ರಹಸ್ಯಗಳನ್ನು ಸ್ನೇಹಿತರ ಮುಂದೆ ಆಗಲಿ ಅಥವಾ ಇತರರ ಮುಂದೆಯಾಗಲಿ ಬಹಿರಂಗಪಡಿಸಿದರೆ, ಪತ್ನಿ ಅದನ್ನು ಕೇಳಲು ಇಷ್ಟಪಡುವುದಿಲ್ಲ ಮತ್ತು ಆತನನ್ನು ಮನಸೋ ದ್ವೇಷಿಸಲು ಪ್ರಾರಂಭಿಸುತ್ತಾಳೆ


ಇದನ್ನೂ ಓದಿ-ಜಾತಕದಲ್ಲಿ ಶನಿ ಶುಭನಾಗಿದ್ದಾನೋ ಅಥವಾ ಅಶುಭನಾಗಿದ್ದಾನೋ ತಿಳಿದುಕೊಳ್ಳುವುದು ಹೇಗೆ?

ಕೆಟ್ಟ ಚಟ
ಆಚಾರ್ಯ ಚಾಣಕ್ಯರ ಪ್ರಕಾರ, ಭಗವದ್ ಕುಃ ಭಾಗ್ಯ ಚತವಿಲ್ಮೆ ಎನ್ನಲಾಗಿದೆ. ಉದಾಹರಣೆಗೆ, ಪತಿ ಡ್ರಗ್ಸ್ ವ್ಯಸನಿಯಾಗಿದ್ದರೆ, ಮದ್ಯಪಾನ ಮಾಡುತ್ತಿದ್ದರೆ ಅಥವಾ ಜೂಜಿನ ಅಭ್ಯಾಸವನ್ನು ಹೊಂದಿದ್ದರೆ ಅಂತಹ ಗಂಡಂದಿರು ಅವರ ಪತ್ನಿಗೆ ಎಂದಿಗೂ ಇಷ್ಟವಾಗುವುದಿಲ್ಲ. ಅವರಿಗೆ ಇಂತಹ ಮದುವೆಯು ಒಂದು ಹೊರೆಯಂತೆ ತೋರುತ್ತದೆ.


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.