Lord Vishnu: ಭಗವಾನ್ ವಿಷ್ಣುವಿನ ಅತ್ಯಂತ ಶಕ್ತಿಶಾಲಿ ನರಸಿಂಹ ಅವತಾರವು ಹೋರಾಟ ಮತ್ತು ಕೆಟ್ಟ ದೃಷ್ಟಿಯಿಂದ ತನ್ನ ಭಕ್ತರನ್ನು ರಕ್ಷಿಸಲು ಪರಿಣಾಮಕಾರಿ. ಭಕ್ತರ ಜೀವನದ ಪ್ರತಿಯೊಂದು ನಕಾರಾತ್ಮಕ ಅಂಶಗಳಿಂದ ರಕ್ಷಿಸಲು ನರಸಿಂಹ ಉಗ್ರರೂಪ ತಾಳುತ್ತಾನೆಂದು ಹೇಳಲಾಗಿದೆ. ನರಸಿಂಹನು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯದ ಸಾಕಾರವೆಂದು ಪರಿಗಣಿಸಲ್ಪಟ್ಟಿದ್ದಾನೆ. ವಿಷ್ಣುವು ಹಿಮವತ್ ಪರ್ವತದ ಮೇಲೆ ಈ ಉಗ್ರ ರೂಪವನ್ನು ಧರಿಸಿದನು. ರಾಕ್ಷಸ ರಾಜ ಹಿರಣ್ಯಕಶಿಪುವನ್ನು ನಾಶಮಾಡಲು ಅವತಾರ ತಾಳಿದನೆಂದು ನಂಬಲಾಗಿದೆ. 


COMMERCIAL BREAK
SCROLL TO CONTINUE READING

ನರಸಿಂಹನು ಅರ್ಧ ಮಾನವ ಮತ್ತು ಅರ್ಧ ಸಿಂಹದ ನೋಟ ಹೊಂದಿದ್ದಾನೆ. ಅಲ್ಲಿ ಮುಂಡ ಮತ್ತು ಕೆಳಗಿನ ದೇಹವು ಮನುಷ್ಯನದ್ದಾಗಿದ್ದು, ಮುಖ ಮತ್ತು ಉಗುರುಗಳು ಉಗ್ರ ಸಿಂಹವಾಗಿದೆ. ದೈಹಿಕ ನೋಟಗಳ ಜೊತೆಯಲ್ಲಿ ನರಸಿಂಹನನ್ನು ವಿವಿಧ ರೂಪಗಳಲ್ಲಿ ವಿವರಿಸಲಾಗಿದೆ. ನರಸಿಂಹನು ತನ್ನ ಕೈಯಲ್ಲಿ ಹಿಡಿದಿರುವ ವಿವಿಧ ಭಂಗಿಗಳು ಮತ್ತು ಆಯುಧಗಳಿಗೆ ಸಂಬಂಧಿಸಿದಂತೆ ಸುಮಾರು 74ಕ್ಕೂ ಹೆಚ್ಚು ರೂಪಗಳನ್ನು ಹೊಂದಿದ್ದಾನೆಂದು ಹೇಳಲಾಗುತ್ತದೆ.


ಇದನ್ನೂ ಓದಿ: ಗುರು ಉದಯದಿಂದ ಕುಬೇರ ಯೋಗ : ಈ ರಾಶಿಗಳಿಗೆ ಹಣದ ಸುರಿಮಳೆ, ವೃತ್ತಿಯಲ್ಲಿ ಪ್ರಗತಿ.. ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಹಿಂಬಾಲಿಸುವುದು ಅದೃಷ್ಟ !


ಪ್ರದೋಷ ದಿನದಂದು ಶಿವನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಆದರೆ ನರಸಿಂಹ ದೇವರನ್ನು ಪೂಜಿಸುವುದು ಸರಿಯೇ ಅನ್ನೋ ಗೊಂದಲ ಅನೇಕರಲ್ಲಿರುತ್ತದೆ. ಪ್ರದೋಷ ದಿನ ಮತ್ತು ಪ್ರದೋಷ ಸಮಯ ಶಿವನಿಗೆ ಮಾತ್ರವಲ್ಲ, ಇದು ನರಸಿಂಹನಿಗೂ ಸೂಕ್ತ ದಿನವೆಂದು ಹೇಳಲಾಗುತ್ತದೆ. ಪೆರುಮಾಳ್ ಅವತಾರವಾದ ನರಸಿಂಹನಿಗೆ ಈ ಪ್ರದೋಷ ಸಮಯ ಅತ್ಯಂತ ಮಹತ್ವದ ದಿನವೆಂದು ಹೇಳಲಾಗಿದೆ. ಮುಸ್ಸಂಜೆಯಲ್ಲಿ ನರಸಿಂಹ ಅವತಾರವೆತ್ತಿ ಪ್ರಹ್ಲಾದನನ್ನು ರಕ್ಷಿಸಿದ ಕಥೆಯನ್ನು ನೀವು ಓದಿಯೇ ಇರುತ್ತೀರಿ.


ಪ್ರದೋಷದ ಸಮಯದಲ್ಲಿ ನಮ್ಮ ಸಮಸ್ಯೆಗಳು ದೂರವಾಗಬೇಕಾದರೆ ನರಸಿಂಹನನ್ನು ಹೇಗೆ ಪೂಜಿಸಬೇಕು? ಮತ್ತು ಯಾವ ಮಂತ್ರ ಪಠಿಸಬೇಕು? ಅನ್ನೋದನ್ನು ತಿಳಿಯಬೇಕು. ನಾಳೆ ಮಂಗಳವಾರ(ಜೂನ್‌ ೪) ಪ್ರದೋಷ ಬರಲಿದೆ. ಮಂಗಳವಾರ ಋಣ ಪರಿಹಾರಕ್ಕೆ ಪ್ರಶಸ್ತ ದಿನವಾಗಿರುವುದರಿಂದ ನಾಳೆ ಸಂಜೆ ಶಿವಾರಾಧನೆಯೊಂದಿಗೆ ನರಸಿಂಹನ ಪೂಜೆಯನ್ನು ಮಾಡಬಹುದು. ಮನೆ ಸಮೀಪದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಿ ನರಸಿಂಹ ದೇವರನ್ನು ನೆನೆದು ಈ ಪೂಜೆಯನ್ನು ಮಾಡಬಹುದು. ಇದನ್ನು ಮಾಡಲಾಗದವರು ಮನೆಯಲ್ಲಿ ಸಂಜೆ 4.30ರಿಂದ 6ರವರೆಗೆ ಪೂಜೆ ಮಾಡುತ್ತಾರೆ.


ಇದನ್ನೂ ಓದಿ: Astro Tips: ನಿಮ್ಮ ಅಡುಗೆ ಮನೆಯಲ್ಲಿ ಇವು ಖಾಲಿಯಾದ್ರೆ ಬಡತನ ಬೆನ್ನಟ್ಟಿ ಬರುತ್ತದೆ..!


ಪೂಜಾ ಕೋಣೆಯಲ್ಲಿ ದೀಪವನ್ನು ಹಚ್ಚಿ ಮತ್ತು ನರಸಿಂಹ ದೇವರನ್ನು ಧ್ಯಾನಿಸಬೇಕು. ನಿಮ್ಮ ಋಣ ತೀರಿಸಲು ಭಕ್ತಿಯಿಂದ ಪ್ರಾರ್ಥಿಸಬೇಕು. ಸಾಲದ ಹೊರೆ ಸೇರಿದಂತೆ ಸಂಸಾರದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ನಿಮಗೆ ತಕ್ಷಣವೇ ಪರಿಹಾರ ದೊರೆಯುತ್ತದೆ. ನರಸಿಂಹನಿಗೆ ನಾಳೆ ಎಂಬುದಿಲ್ಲ, ನೀವು ಕೇಳಿದ ವರಗಳನ್ನು ಕ್ಷಣಮಾತ್ರದಲ್ಲಿ ಕೊಡುವ ಶಕ್ತಿ ನರಸಿಂಹನಿಗೆ ಮಾತ್ರವಿದೆ. ಪ್ರಾರ್ಥನೆಯ ನಂತರ ಈ ಮಂತ್ರವನ್ನು 27 ಬಾರಿ ಪಠಿಸಬೇಕು. ನಂತರ ಕರ್ಪೂರದ ಆರತಿಯನ್ನು ಸ್ವಲ್ಪ ನೈವೇದ್ಯದೊಂದಿಗೆ ಪೂಜೆ ಮಾಡುವ ಮೂಲಕ ಪೂರ್ಣಗೊಳಿಸಬೇಕು.


ನರಸಿಂಹ ಗಾಯತ್ರಿ ಮಂತ್ರ


ʼಓಂ ನೃಸಿಂಹಯೇ ವಿದ್ಮಹೇ ವಜ್ರನಖಾಯ ಧೀಮಹಿ ತಾನ್ ನೋ ಸಿಂಹಃ ಪ್ರಚೋದಯಾತ್ |
ವಜ್ರ ನಖಾಯ ವಿದ್ಮಹೇ ತಿಕ್ಷ್ಣ ದಂಸ್ತ್ರಾಯ ಧೀಮಹಿ ತಾನ್ ನೋ ನರಸಿಂಹಃ ಪ್ರಚೋದಯಾತ್ ||


ಈ ಮಂತ್ರವನ್ನು ನಾಳೆ ಪ್ರದೋಷ ಸಮಯದಲ್ಲಿ ಪಠಿಸಿದರೆ ಶುಭಫಲ ಖಂಡಿತ ದೊರೆಯುತ್ತದೆ ಎಂದು ಹೇಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.