Mahashivratri 2023 : ಶಿವನ ಭಕ್ತರು ವರ್ಷವಿಡೀ ಶಿವರಾತ್ರಿಗಾಗಿ ಕಾಯುತ್ತಿರುತ್ತಾರೆ. ಫೆಬ್ರವರಿ 18 ರಂದು ಶಿವರಾತ್ರಿ ಹಬ್ಬವನ್ನು ಆಚರಿಸಲಾಗುವುದು. ಈ ಬಾರಿ ಮಹಾಶಿವರಾತ್ರಿಯಂದು ಅದ್ಭುತವಾದ  ಯೋಗ ರೂಪುಗೊಳ್ಳುತ್ತಿದೆ. ಶಿವರಾತ್ರಿಗೂ ಮುನ್ನ ಎರಡು ದೊಡ್ಡ ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗಿವೆ. ಫೆಬ್ರವರಿ 13 ರಂದು, ದೇವತೆಗಳ ರಾಜ, ಸೂರ್ಯ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದಾದ ಬಳಿಕ ಫೆಬ್ರವರಿ 15 ರಂದು ಶುಕ್ರ ಮೀನರಾಶಿಯನ್ನು ಪ್ರವೇಶಿಸುತ್ತಾನೆ.   ಮಹಾಶಿವರಾತ್ರಿಯ ಮೊದಲು, ಆಗುವ ಗ್ರಹಗಳ ಚಲನೆಯಲ್ಲಿನ ಬದಲಾವಣೆ  ಐದು ರಾಶಿಯವರ ಜೀವನವನ್ನೇ ಬದಲಾಯಿಸಲಿದೆ. 


COMMERCIAL BREAK
SCROLL TO CONTINUE READING

ಶಿವರಾತ್ರಿಯ ನಂತರ ಹೊಳೆಯುತ್ತದೆ ಐದು ರಾಶಿಯವರ ಅದೃಷ್ಟ :
ಮಿಥುನ ರಾಶಿ : ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಮಹಾಶಿವರಾತ್ರಿಯಿಂದ, ಮಿಥುನ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಆರ್ಥಿಕ ಕ್ಷೇತ್ರದಲ್ಲಿ ಲಾಭವಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಕಚೇರಿಯಲ್ಲಿನ ಕೆಲಸವನ್ನು ಪ್ರಶಂಸಿಸಲಾಗುವುದು.  ಧೈರ್ಯ ಮತ್ತು ಶೌರ್ಯ ಹೆಚ್ಚಾಗುವುದರೊಂದಿಗೆ ಗೌರವವೂ ಹೆಚ್ಚಾಗುತ್ತದೆ. ವೈವಾಹಿಕ ಜೀವನವೂ ಸಂತೋಷಮಯವಾಗಿರುತ್ತದೆ. 


ಇದನ್ನೂ ಓದಿ : Aghori Baba: ಕರಾಳ ರಾತ್ರಿ, ತಂತ್ರ-ಮಂತ್ರ.. ಶವ ತಿನ್ನುತ್ತಾ ಶಿವಾರಾಧನೆ.. ಹೀಗಿರುತ್ತೆ ಅಘೋರ ಸಾಧನ.!


ಸಿಂಹ ರಾಶಿ:  ಈ ಹಬ್ಬದ ನಂತರ ಅದೃಷ್ಟ ಪಡೆಯುವ ಎರಡನೇ ರಾಶಿಯೆಂದರೆ ಸಿಂಹ. ಅದಕ್ಕಾಗಿಯೇ ಸಿಂಹ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯಾಗುವ ಸಾಧ್ಯತೆಯಿದೆ. ನೀವು ಹಾಕುವ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿವೆ. ಹೊಸ ಹಣಕಾಸು ವರ್ಷದಲ್ಲಿ ನಿಮ್ಮ ಬಡ್ತಿ ಮತ್ತು ಹೆಚ್ಚಳವಾಗುವ ಸಾಧ್ಯತೆಗಳಿವೆ. 


ಕನ್ಯಾ ರಾಶಿ :  ಈ ಮಹಾಶಿವರಾತ್ರಿಯು ಎಲ್ಲಾ 12 ರಾಶಿಯವರ ಒಳ್ಳೆಯ ಕಾರ್ಯಗಳಿಗೆ ಅನುಗುಣವಾಗಿ ಶಿವನ ಅನುಗ್ರಹ ಸಿಗಲಿದೆ. ಜಾತಕದ ಪ್ರಕಾರ, ಕನ್ಯಾ ರಾಶಿಗೆ ಸೇರಿದವರಾಗಿದ್ದರೆ,  ಶಿವರಾತ್ರಿ ಹಬ್ಬವು ನಿಮಗೆ ಮಂಗಳಕರವಾಗಿರಲಿದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಲಾಭವಾಗುವುದು. ಸಂಪತ್ತಿನ ಹೆಚ್ಚಳದ ಜೊತೆಗೆ, ನಗದು ಮತ್ತು ಹಣದ ವಹಿವಾಟುಗಳಲ್ಲಿಯೂ ಲಾಭವಾಗುವುದು. ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಮಯವೂ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ಮಾಡಿದ ಹೂಡಿಕೆಯು ದೀರ್ಘಾವಧಿಯ ಲಾಭವನ್ನು ನೀಡುತ್ತದೆ. ದಾಂಪತ್ಯ ಜೀವನದಲ್ಲೂ ಮಧುರತೆ ಇರುತ್ತದೆ.


ಧನು ರಾಶಿ :  ಮಹಾಶಿವರಾತ್ರಿಯಿಂದ ಧನು ರಾಶಿಯವರಿಗೆ ಒಳ್ಳೆಯ ದಿನಗಳೂ ಆರಂಭವಾಗಲಿವೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ಅಂದರೆ ಹಣದ ವ್ಯವಹಾರಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ಹೂಡಿಕೆಗೂ ಸಮಯ ಉತ್ತಮವಾಗಿರಲಿದೆ.  ಆದಾಯದ ಮೂಲಗಳು ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನಗಳು ಹೆಚ್ಚಾಗಲಿವೆ. 


ಇದನ್ನೂ ಓದಿ : Vastu Tips : ಈ 2 ವಸ್ತುವನ್ನು ಯಾವತ್ತೂ ಮನೆಯಲ್ಲಿ ಇಡಬೇಡಿ, ಇಡೀ ಕುಟುಂಬವೇ ದಿವಾಳಿಯಾಗುತ್ತೆ!


ಕುಂಭ ರಾಶಿ : ಮಹಾಶಿವರಾತ್ರಿಯ ಹಬ್ಬವು ಕುಂಭ ರಾಶಿಯ ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಮಹಾಶಿವರಾತ್ರಿಯ ಬಳಿಕ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಕುಂಭ ರಾಶಿಯವರಿಗೆ ಹಠಾತ್ ಹಣ ಲಾಭವಾಗುವ ಸಾಧ್ಯತೆ ಇದೆ. ಖರ್ಚಿನ ಮೇಲೆ ನಿಯಂತ್ರಣವಿರಲಿದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.