ಮಂಗಳ ರಾಶಿ ಪರಿವರ್ತನೆ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧೈರ್ಯ, ಶಕ್ತಿಕಾರಕ ಎಂದು ಪರಿಗಣಿಸಲ್ಪಟ್ಟಿರುವ ಮಂಗಳ ಗ್ರಹವು ಅಕ್ಟೋಬರ್ 16ರಂದು ಮಿಥುನ ರಾಶಿಯಲ್ಲಿ ಸಂಚರಿಸಲಿದೆ. ಅದರ ಹದಿನೈದು ದಿನಗಳ ಬಳಿಕ ಅಂದರೆ ಅಕ್ಟೋಬರ್ 30ರಂದು, ಮಂಗಳನು ಅದೇ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ನವೆಂಬರ್ 13ರವರೆಗೂ ಮಂಗಳನು ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ತಿಂಗಳಲ್ಲಿ ಮಂಗಳನ ಈ ಎರಡು ಪ್ರಮುಖ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮ ಉಂಟು ಮಾಡಲಿದೆ. ಮಂಗಳ ಗ್ರಹ ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೂ, ಕೆಲವು ರಾಶಿಯವರ ಜೀವನವನ್ನು ಸುಖ-ಸಂತೋಷದಿಂದ ತುಂಬಲಿದೆ. ಮಾತ್ರವಲ್ಲ, ಅವರ ಜೀವನದಲ್ಲಿ ಅಪಾರ ಸಂಪತ್ತನ್ನು ಸಹ ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ....


COMMERCIAL BREAK
SCROLL TO CONTINUE READING

ಮಂಗಳನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಅಪಾರ ಪ್ರಯೋಜನ:
ಮೇಷ ರಾಶಿ:

ಅಕ್ಟೋಬರ್ ಮಾಸದಲ್ಲಿ ಮಂಗಳನ ರಾಶಿ ಬದಲಾವಣೆ ಮತ್ತು ಹಿಮ್ಮುಖ ಚಲನೆಯು ಮೇಷ ರಾಶಿಯವರಿಗೆ ಧೈರ್ಯವನ್ನು ಹೆಚ್ಚಿಸುತ್ತದೆ. ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇದು ಮೇಷ ರಾಶಿಯ ಜನರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಇವರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತವಾಗಲಿದೆ.  ಅದೃಷ್ಟದ ಸಹಾಯದಿಂದ ನೀವು ಬಡ್ತಿ ಪಡೆಯಬಹುದು. ಆದಾಯವೂ ಹೆಚ್ಚಾಗಲಿದೆ. 


ವೃಷಭ ರಾಶಿ: 
ಮಂಗಳನ ಸ್ಥಾನ ಬದಲಾವಣೆಯಿಂದ ವೃಷಭ ರಾಶಿಯವರಿಗೆ ಭಾರೀ ಲಾಭವಾಗಬಹುದು. ಈ ಸಂದರ್ಭದಲ್ಲಿ ಹೂಡಿಕೆಯು ಅಪಾರ ಲಾಭವನ್ನು ತರಲಿದೆ. ಆದರೆ ಅನಗತ್ಯವಾಗಿಖರ್ಚುಗಳಿಗೆ ಕಡಿವಾಣ ಹಾಕಿ, ಇಲ್ಲವೇ ಮುಂದಿನ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ತಲೆದೂರಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭ ಇರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಕೆಲವು ದೊಡ್ಡ ಕೆಲಸಗಳು ಪೂರ್ಣಗೊಳ್ಳಲಿವೆ. ಆದರೆ, ನಿಮ್ಮ ಆರೋಗ್ಯದ ಬಗ್ಗೆ ಗಮನವಹಿಸಿ.


ಇದನ್ನೂ ಓದಿ- Chanakya Niti: ನಿತ್ಯ ಈ 6 ಕೆಲಸ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ!


ಸಿಂಹ ರಾಶಿ: 
ಮಂಗಳ ಸಂಚಾರವು ಸಿಂಹ ರಾಶಿಯವರಿಗೆ ದೊಡ್ಡ ಲಾಭವನ್ನು ನೀಡುತ್ತದೆ. ಹೂಡಿಕೆ ಲಾಭದಾಯಕವಾಗಲಿದೆ. ಹಣ ಖರ್ಚು ಮಾಡಿ ದುಡ್ಡು ಗಳಿಸುವಿರಿ. ಆದಾಯದ ಹೊಸ ಮೂಲಗಳು ಸ್ರುಶ್ತಿಯಾಗಲಿವೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪೂರ್ಣ ಫಲ ಸಿಗಲಿದೆ. ಜೀವನದಲ್ಲಿ ಸಂತೋಷ ಇರುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. 


ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ವೃತ್ತಿಯಲ್ಲಿ ಮಂಗಳನು ​​ಲಾಭವನ್ನು ನೀಡುತ್ತಾನೆ. ಹೊಸ ಉದ್ಯೋಗ ಸಿಗಬಹುದು. ನೀವು ವ್ಯಾಪಾರದಲ್ಲಿ ದೊಡ್ಡ ಆರ್ಡರ್ ಸಿಗಬಹುದು. ಹೊಸ ಅವಕಾಶಗಳು ಬರಲಿವೆ. ಆರ್ಥಿಕ ಪ್ರಗತಿ ಇರುತ್ತದೆ. ನೀವು ಹೊಸ ಮನೆ ಅಥವಾ ಕಾರು ಖರೀದಿಸಬಹುದು. ಒಟ್ಟಿನಲ್ಲಿ ಮಂಗಳನ ಸಂಚಾರವು ನಿಮ್ಮ ಜೀವನದಲ್ಲಿ ಅಪಾರ ಸಂಪತ್ತನ್ನು ಕರುಣಿಸಲಿದೆ.


ಇದನ್ನೂ ಓದಿ- Chanakya Niti: ಪ್ರತಿನಿತ್ಯ ಈ 3 ಕೆಲಸ ಮಾಡುವ ಮನೆಯಲ್ಲಿ ಸದಾ ನೆಲೆಸುತ್ತಾಳೆ ತಾಯಿ ಲಕ್ಷ್ಮಿ


ಕುಂಭ ರಾಶಿ: 
ಮಂಗಳ ಸಂಚಾರವು ಕುಂಭ ರಾಶಿಯವರಿಗೆ ಅನೇಕ ಕ್ಷೇತ್ರಗಳಲ್ಲಿ ಲಾಭವನ್ನು ನೀಡುತ್ತದೆ. ಸಂಬಂಧಗಳು ಉತ್ತಮವಾಗಿರುತ್ತವೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಕೆಲಸದಲ್ಲಿ ದಕ್ಷತೆ ಹೆಚ್ಚುತ್ತದೆ. ಇದರೊಂದಿಗೆ ಸಹೋದ್ಯೋಗಿಗಳು ನಿಮ್ಮ ಕೆಲಸಕ್ಕೆ ಮನ್ನಣೆಯನ್ನೂ ನೀಡುತ್ತಾರೆ. ನಿಮ್ಮ ಯೋಜನೆಗೆಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಕೆಲಸದಲ್ಲಿ ಸಣ್ಣ ಅಜಾಗರೂಕತೆಯೂ ನಿಮಗೆ ಭಾರೀ ನಷ್ಟವನ್ನು ಉಂಟುಮಾಡಬಹುದು. ಹಾಗಾಗಿ, ಸೋಮಾರಿ ತನವನ್ನು ತಪ್ಪಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.