ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ, ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಶಿವನ ಅನುಗ್ರಹವನ್ನು ಆಹ್ವಾನಿಸಲು, ಶಕ್ತಿಯುತ ಸಪ್ತಋಷಿ ಆವಾಹನವನ್ನು ನಡೆಸಿದರು. ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳಿಂದ ನೂರಾರು ಜನರು, ಸಂಜೆ 6 ಗಂಟೆಗೆ ಪ್ರಾರಂಭವಾಗಿ 8:15 ಕ್ಕೆ ಕೊನೆಗೊಂಡ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆದಿಯೋಗಿ ಬಳಿ ಸೇರಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಾಸನದಲ್ಲಿ ಖಾಕಿ ವೇಷ ಧರಿಸಿ ಮಹಿಳೆಯಿಂದ ಮಹಾಮೋಸ


ಹಲವಾರು ಸಹಸ್ರಮಾನಗಳ ಹಿಂದೆ, ಶಿವನು ತನ್ನ ಮೊದಲ ಶಿಷ್ಯರಾದ ಸಪ್ತಋಷಿಗಳಿಗೆ ದೇವಿಯ ಸಮ್ಮುಖದಲ್ಲಿ ಈ ಪ್ರಕ್ರಿಯೆಯನ್ನು ಕಲಿಸಿದನೆಂದು ಹೇಳಲಾಗುತ್ತದೆ.ಸಪ್ತಋಷಿಗಳು ಪ್ರಪಂಚದ ಮೂಲೆ ಮೂಲೆಗಳಿಗೆ ಸಾಗಿ ಯೋಗ ವಿಜ್ಞಾನವನ್ನು ಜನರಿಗೆ ಅರ್ಪಿಸಲು ಪ್ರಯಾಣಿಸುತ್ತಿರುವಾಗ, ಶಿವನ ಉಪಸ್ಥಿತಿಗಾಗಿ ಮತ್ತು ಅವನ ಅನುಗ್ರಹವನ್ನು ಆಹ್ವಾನಿಸುವ ಸಾಧನವಾಗಿ ಇದನ್ನು ಅವರಿಗೆ ಅರ್ಪಿಸಲಾಗಿತ್ತು.


ಇದನ್ನೂ ಓದಿ: ಪ್ರಿಯಾಂಕ ಜಾರಕಿಹೊಳಿಗೆ ಚಿಕ್ಕೋಡಿ ಲೋಕಸಭೆ ಟಿಕೆಟ್..!‌


ಸಾವಿರಾರು ವರ್ಷಗಳಿಂದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ಪ್ರಕ್ರಿಯೆಯನ್ನು ಇನ್ನೂ ಅಷ್ಟೇ ಪಾವಿತ್ರ್ಯತೆಯಲ್ಲಿ ಸಂರಕ್ಷಿಸಲಾಗಿದೆ. ಪ್ರತಿ ವರ್ಷ, ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನವನ್ನು ನಡೆಸಿಕೊಡುತ್ತಾರೆ. ಇದು ಕಾಶಿ ದೇವಾಲಯದ ಹೊರಗೆ ಈ ಪ್ರಕ್ರಿಯೆಯನ್ನು ನಡೆಸುವ ಏಕೈಕ ನಿದರ್ಶನವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.