ಬೆಂಗಳೂರು: ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ತಿಥಿಯಂದು ನಾಗಪಂಚಮಿ ಉತ್ಸವವನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಪಂಚಮಿ ತಿಥಿಯನ್ನು ನಾಗ ದೇವರಿಗೆ ಸಮರ್ಪಿಸಲಾಗಿದೆ ಮತ್ತು ನಾಗಪಂಚಮಿಯ ದಿನದಂದು ಎಂಟು ಎಂದು ದೇವತೆಗಳನ್ನು ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎನ್ನಲಾಗುತ್ತದೆ ಮತ್ತು ವ್ಯಕ್ತಿಗೆ ಸಾಕಷ್ಟು ಸಿರಿ ಸಂಪತ್ತು ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಈ ವರ್ಷ ನಾಗಪಂಚಮಿ 21 ಆಗಸ್ಟ್ 2023, ಸೋಮವಾರ ಬಂದಿದೆ. ಸೋಮವಾರದಂದು ನಾಗಪಂಚಮಿಯನ್ನು ಆಚರಿಸುವುದು ತುಂಬಾ ಮಂಗಳಕರ ಮತ್ತು ಶ್ರೇಯಸ್ಕರ ಎನ್ನಲಾಗುತ್ತದೆ. ಏಕೆಂದರೆ, ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಸೋಮವಾರವನ್ನು ಶಿವಾನಿಗೆ ಸಮರ್ಪಿತ ವಾರ ಎನ್ನಲಾಗುತ್ತದೆ.  ಇದಲ್ಲದೇ ನಾಗಪಂಚಮಿ ದಿನದಂದು ಅತ್ಯಂತ ಶುಭ ಯೋಗವೂ ರೂಪುಗೊಳ್ಳುತ್ತಿದೆ.

COMMERCIAL BREAK
SCROLL TO CONTINUE READING

ನಾಗಪಂಚಮಿಯ ದಿನ ನಿರ್ಮಾಣಗೊಳ್ಳುತ್ತಿದೆ ಅಪರೂಪದ ಶುಕ್ಲ ಯೋಗ
ಈ ವರ್ಷ ನಾಗಪಂಚಮಿಯ ದಿನ ಅತ್ಯಂತ ಮಂಗಳಕರ ಯೋಗ ರೂಪುಗೊಳ್ಳುತ್ತಿದೆ. ಈ ಯೋಗದಲ್ಲಿ ನಾಗದೇವತೆ ಮತ್ತು ಶಿವನನ್ನು ಪೂಜಿಸುವುದರಿಂದ ವಿಶೇಷ ಲಾಭಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತದೆ. ವಾಸ್ತವದಲ್ಲಿ, ಈ ಬಾರಿಯ ಶುಕ್ಲ ಯೋಗವು ನಾಗಪಂಚಮಿಯ ದಿನದಂದು ರೂಪುಗೊಳ್ಳುತ್ತಿದೆ, ಇದು ಶಿವನ ಅನುಗ್ರಹವನ್ನು ಪಡೆಯಲು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಆಗಸ್ಟ್ 21, 2023, ನಾಗಪಂಚಮಿಯ ದಿನದಂದು ಶುಕ್ಲ ಯೋಗವು ಕೆಲವು ರಾಶಿಗಳ ಜನರಿಗೆ  ಅತ್ಯಂತ ಮಂಗಳಕರ ಸಾಬೀತಾಗಲಿದೆ ಎನ್ನಲಾಗಿದೆ.   

ಮೇಷ ರಾಶಿ
ಮೇಷ ರಾಶಿಯವರಿಗೆ ನಾಗಪಂಚಮಿ ಅತ್ಯಂತ ಶುಭವಾಗಿರಲಿದೆ. ಕಾರ್ಯಸ್ಥಳದಲ್ಲಿ ನಿಮಗೆ ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಹಣಕಾಸಿನ ಭಾಗ ಅತ್ಯಂತ ಬಲವಾಗಿರಲಿದೆ. ವ್ಯಾಪಾರದಲ್ಲಿ ಧನಪ್ರಾಪ್ತಿಯ ಸಕಲ ಯೋಗಗಳು ನಿರ್ಮಾಣಗೊಳ್ಳುತ್ತಿವೆ.  

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯ ಅತ್ಯಂತ ಉತ್ತಮವಾಗಿದೆ. ಈ ಸಂದರ್ಭದಲ್ಲಿ ನೀವು ಕೂಡ ಹೊಸ ಹೂಡಿಕೆ ಮಾಡಬಹುದು. ದೊಡ್ಡ ಒಪ್ಪಂದವನ್ನು ಅಂತಿಮಗೊಳಿಸಬಹುದು. ವ್ಯಾಪಾರ ವರ್ಗಕ್ಕೆ ಈ ದಿನ ವಿಶೇಷವಾಗಿ ಫಲಪ್ರದವಾಗಿದೆ.  


ಇದನ್ನೂ ಓದಿ-ವಕ್ರಾವಸ್ಥೆಯಲ್ಲಿ ಬುಧನ ಉದಯ, ಈ ರಾಶಿಗಳ ಜನರ ಜೀವನದಲ್ಲಿ ಝಣಝಣಿಸಲಿದೆ ಕಾಂಚಾಣದ ಸದ್ದು!

ಧನು ರಾಶಿ
ಈ ದಿನವು ಧನು ರಾಶಿಯವರಿಗೆ ತುಂಬಾ ಮಂಗಳಕರ ಸಾಬೀತಾಗಲಿದೆ. ನಿಮಗೆ ಹಣ ಗಳಿಕೆಯ ಉತ್ತಮ ಅವಕಾಶಗಳು ಒದಗಿಬರಲಿವೆ.  ಹೂಡಿಕೆಯಿಂದ ಲಾಭವಾಗಲಿದೆ. ಕೆಲವು ಶುಭ ಸಮಾಚಾರಗಳು ಪ್ರಾಪ್ತಿಯಾದ ಬಳಿಕ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.  


ಇದನ್ನೂ ಓದಿ-ಮುಂದಿನ 10 ದಿನಗಳ ಕಾಲ ಈ ರಾಶಿಗಳ ಜನರಿಗೆ ಅಷ್ಟೈಶ್ವರ್ಯ ಕರುಣಿಸಲಿದ್ದಾಳೆ ಐಶ್ವರ್ಯ ಲಕ್ಷ್ಮಿ!

ಮಕರ ರಾಶಿ
ಮಕರ ರಾಶಿಯ ಜಾತಕದವರ ಬಹುಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಇದೀಗ ಪೂರ್ಣಗೊಳ್ಳಲು ಆರಂಭಿಸಲಿವೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮಗೆ ಸಂತಾನದಿಂದ ಸುಖ ಪ್ರಾಪ್ತಿಯಾಗಲಿದೆ.


ಇದನ್ನೂ ಓದಿ-ತನ್ನ ಸ್ನೇಹಿತನ ರಾಶಿ ಪ್ರವೇಶಿಸಲಿದ್ದಾನೆ ಗ್ರಹಗಳ ರಾಜ, 3 ರಾಶಿಗಳ ಜನರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ- 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ