ಭಾರತವು ಸರ್ಪಗಳಿಗೆ ಮೀಸಲಾಗಿರುವ ಹಲವಾರು ದೇವಾಲಯಗಳಿಗೆ ನೆಲೆಯಾಗಿದೆ. ಅವುಗಳಲ್ಲಿ ಕೆಲವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಭಾರತೀಯ ಪುರಾಣಗಳಲ್ಲಿ ಹಾವುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ನಾಗನನ್ನು ಪೂಜಿಸಲಾಗುತ್ತದೆ. ಹಿಂದೂಗಳು ಹಾವುಗಳನ್ನು ದೇವರೆಂದು ಪೂಜಿಸುತ್ತಾರೆ ಮತ್ತು ನಾಗದೇವತೆ ಎಂದು ಕರೆಯುತ್ತಾರೆ. ಹಾವುಗಳನ್ನು ಕೊಲ್ಲುವುದು ಪಾಪವೆಂದು ಪರಿಗಣಿಸಲಾಗಿದೆ. ಆಕಸ್ಮಿಕವಾಗಿ ಹಾವು ಸತ್ತರೆ ಪೂಜೆ ನಡೆಯುತ್ತದೆ. ಭಾರತದ ಟಾಪ್ 7 ನಾಗದೇವಾಲಯಗಳು ಇಲ್ಲಿವೆ.


COMMERCIAL BREAK
SCROLL TO CONTINUE READING

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕರ್ನಾಟಕ:


ಸುಬ್ರಹ್ಮಣ್ಯ, ವಾಸುಕಿ ಮತ್ತು ಶೇಷ, ಸರ್ಪ ಈ ದೇವಸ್ಥಾನದ ಮುಖ್ಯ ದೇವರುಗಳು. ಇದು ಸುಂದರವಾದ ಕುಮಾರ ಪರ್ವತ ಶಿಖರವನ್ನು ಅದರ ಹಿನ್ನೆಲೆಯಾಗಿ ಹೊಂದಿದೆ ಮತ್ತು ಕುಮಾರಧಾರಾ ನದಿಯಿಂದ ಆವೃತವಾಗಿದೆ ಈ ದೇವಾಲಯ. ಸುಬ್ರಹ್ಮಣ್ಯದಲ್ಲಿನ ಗುಹೆಗಳಲ್ಲಿ ವಾಸುಕಿ ಮತ್ತು ಇತರ ಹಾವುಗಳು ಆಶ್ರಯ ಪಡೆದಿವೆ ಎಂಬ ಪ್ರತೀತಿ ಇಲ್ಲಿದೆ. ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಸರ್ಪದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅನೇಕ ಕಾಲದಿಂದಲೂ ಇದೆ.


ಅಗಸನಹಳ್ಳಿ ನಾಗಪ್ಪ, ಬೆಂಗಳೂರು:


ಸುಬ್ರಹ್ಮಣ್ಯನ ರೂಪದಲ್ಲಿ ನರಸಿಂಹ ದೇವರಿಗಾಗಿ ನಿರ್ಮಿಸಲಾದ ದೇವಾಲಯ ಇದು. ನರಸಿಂಹನ ನೈಸರ್ಗಿಕವಾಗಿ ರೂಪುಗೊಂಡಿರುವ ಇರುವೆ ಬೆಟ್ಟ ಗರ್ಭಗುಡಿಯಲ್ಲಿದೆ. ದೇವಾಲಯದ ಸುತ್ತಲೂ ಬಂಗಾರದ ಬಣ್ಣದ ಹಾವು ಕಾಣಿಸಿಕೊಂಡಿದೆ. ಅಮಾವಾಸ್ಯೆಯ ದಿನಗಳಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುತ್ತಾರೆ. ಇಲ್ಲಿ ಧ್ಯಾನ ಮಾಡಿದ ಅಗಸ್ತ್ಯ ಋಷಿಯಿಂದ ಅಗಸನಹಳ್ಳಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯೂ ಇದೆ.


ಇದನ್ನೂ ಓದಿ: ವಧು ದಕ್ಷಿಣೆ ಕೊಟ್ಟು ಮೇಕೆಯನ್ನು ವರಿಸಿದ ಭೂಪ! ಕಾರಣವೇ ವಿಚಿತ್ರ


ಮನ್ನರಸಲ ದೇವಸ್ಥಾನ, ಕೇರಳ: 


ಇದು ಕೇರಳದ ಮನ್ನರಸಲದಲ್ಲಿರುವ ದೇವಸ್ಥಾನ ಭಾರತದ ಅತಿದೊಡ್ಡ ಮತ್ತು ಜನಪ್ರಿಯ ನಾಗದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಸರ್ಪಗಳ ರಾಜನಾದ ನಾಗರಾಜ ದೇವರಿಗೆ ಸಮರ್ಪಿತವಾಗಿದೆ. ದೇವಾಲಯದ ಆವರಣದೊಳಗೆ ಸುಮಾರು 30,000 ಕಲ್ಲಿನ ನಾಗರ ವಿಗ್ರಹಗಳು ಮತ್ತು ಚಿತ್ರಗಳಿವೆ. ಈ ದೇವಾಲಯವು 3,000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ನವವಿವಾಹಿತರು ಮತ್ತು ಮಕ್ಕಳಿಲ್ಲದ ದಂಪತಿಗಳು ಮಕ್ಕಳಿಗಾಗಿ ಹರಕೆ ಹೊರಲು ಇಲ್ಲಿಗೆ ಭೇಟಿ ನೀಡುವ ಸಂಪ್ರದಾಯವಿದೆ.


ಭುಜಂಗ ನಾಗದೇವಾಲಯ, ಗುಜರಾತ:


ಭುಜಿಯ ಕೋಟೆಯು ಗುಜರಾತ ರಾಜ್ಯದ ಭುಜ್‌ನ ಹೊರವಲಯದಲ್ಲಿದೆ. ಜಾನಪದದ ಪ್ರಕಾರ, ಕೋಟೆಯು ಯುದ್ಧದಲ್ಲಿ ಮಡಿದ ಕೊನೆಯ ನಾಗ ಕುಲದ ಭುಜಂಗನಿಗೆ ಸಮರ್ಪಿತವಾಗಿದೆ. ಸ್ಥಳೀಯರು ಅವನ ನೆನಪಿಗಾಗಿ ಭುಜಿಯ ಬೆಟ್ಟಗಳ ಮೇಲೆ ದೇವಾಲಯವನ್ನು ನಿರ್ಮಿಸುತ್ತಾರೆ. ಇದನ್ನು ಭುಜಂಗ್ ನಾಗ ದೇವಾಲಯ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ನಾಗ ಪಂಚಮಿಯಂದು ದೇವಸ್ಥಾನದ ಸುತ್ತ ಜಾತ್ರೆ ನಡೆಯುತ್ತದೆ. ಪ್ರಸ್ತುತ, ಕೋಟೆಯು ಭಾರತೀಯ ಸೇನೆಯ ವಶದಲ್ಲಿದೆ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಬಳಸಲಾಗುತ್ತದೆ.


ಶೇಷನಾಗ ದೇವಾಲಯ, ಜಮ್ಮು ಮತ್ತು ಕಾಶ್ಮೀರ:


ಪುರಾಣಗಳ ಪ್ರಕಾರ, ಹಾವುಗಳ ರಾಜ ಎಂದೂ ಕರೆಯಲ್ಪಡುವ ಶೇಷನಾಗ ಪಹಲ್ಗಾಮ್ ಬಳಿ ಸರೋವರವನ್ನು ರಚಿಸಿದನು. ಶೇಷನಾಗ ಇನ್ನೂ ಇಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಈ ನದಿಯ ದಡದಲ್ಲಿ ಸರ್ಪ ದೇವರಿಗೆ ಸಮರ್ಪಿತವಾದ ದೇವಾಲಯವನ್ನು ನಿರ್ಮಿಸಲಾಗಿದೆ. ಅಮರನಾಥ ಗುಹೆಗೆ ಯಾತ್ರಾರ್ಥಿಗಳು ಈ ಸರೋವರಕ್ಕೆ ಭೇಟಿ ನೀಡಿ, ಶೇಷನಾಗನನ್ನು ಪೂಜಿಸುತ್ತಾರೆ. ಧಾರ್ಮಿಕ ಸ್ಥಳದ ಅದ್ಭುತ ಪರಿಸರ ಮತ್ತು ಹಚ್ಚ ಹಸಿರಿನ ಸಸ್ಯವರ್ಗವು ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. 


ನಾಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು: 


ತಿರುನಾಗೇಶ್ವರಂನಲ್ಲಿರುವ ನಾಗನಂತ ಸ್ವಾಮಿ ದೇವಾಲಯವು ಶಿವ ದೇವಾಲಯಕ್ಕೆ ಪರಸಿದ್ಧಿ ಪಡೆದಿದೆ. ಇಲ್ಲಿನ ಅಧಿದೇವತೆ ಕೇತು. ಪೌರಾಣಿಕ ಹಾವುಗಳಾದ ದಕ್ಷಿಣ, ಕಾರ್ಕೋಟಕ ಮತ್ತು ಆದಿ ಶೇಷ ಈ ದೇವಾಲಯದಲ್ಲಿ ಶಿವನನ್ನು ಪೂಜಿಸುತ್ತವೆ ಎಂಬ ನಂಬಿಕೆ ಇಲ್ಲಿದೆ. 


ಇದನ್ನೂ ಓದಿ: Weight loss Diet Plan: ಈ ಆಹಾರಕ್ರಮವನ್ನು ಅನುಸರಿಸಿ ಕೆಲವೇ ದಿನಗಳಲ್ಲಿ ತೂಕ ಇಳಿಸಿ


ನಾಗರಾಜ ದೇವಸ್ಥಾನ, ತಮಿಳುನಾಡು: 


ನಾಗರಕೋಯಿಲ್ ಪಟ್ಟಣದ ಹೃದಯಭಾಗದಲ್ಲಿರುವ ಈ ದೇವಾಲಯವು ಅಸಂಖ್ಯಾತ ಸರ್ಪಗಳ, ಅದರಲ್ಲೂ ವಿಶೇಷವಾಗಿ ನಾಗರ ಪ್ರತಿಮೆಗಳನ್ನು ಹೊಂದಿದೆ. ದೇವಾಲಯವು ಎರಡು ಪ್ರಮುಖ ದೇವತೆಗಳನ್ನು ಹೊಂದಿದೆ. ಒಂದ ಕೃಷ್ಣ ಮತ್ತೊಂದು ನಾಗರಾಜ. ಗಣೇಶ, ಶಿವ, ಸುಬ್ರಹ್ಮಣ್ಯ ಸ್ವಾಮಿ ಮತ್ತು ದ್ವಾರಪಾಲಕ ಇಲ್ಲಿನ ಉಪದೇವತೆಗಳು. ನಾಗರಾಜನ ವಿಗ್ರಹವನ್ನು ಐದು ತಲೆಯ ಸರ್ಪವಾಗಿ ನಿರೂಪಿಸಲಾಗಿದೆ. ನಾಗರಕೋಯಿಲ್ ನಗರವು ನಾಗರಾಜ ದೇವಸ್ಥಾನದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.