Mustard Vastu Tips: ಭಾರತೀಯ ಮನೆಗಳಲ್ಲಿ ಉಪಯೋಗಿಸಲ್ಪಡುವ ಸಾಮಾನ್ಯ ಸಾಂಬಾರ ಪದಾರ್ಥಗಳಲ್ಲಿ ಹಳದಿ ಸಾಸಿವೆ ಕೂಡ ಒಂದು. ಆದರೆ, ಈ ಹಳದಿ ಸಾಸಿವೆಗೆ ಜೋತಿಷ್ಯ ಶಾಸ್ತ್ರ (astrology) ಹಾಗೂ ವಾಸ್ತು ಶಾಸ್ತ್ರದಲ್ಲಿ (vastu shastra) ವಿಶೇಷ ಮಹತ್ವವಿದೆ. ಹಳದಿ ಸಾಸಿವೆಯ ಉಪಾಯಗಳು (vastu tips related to yellow mustards) ಮನೆಯ ಏಳಿಗೆಯ ಬಾಗಿಲನ್ನೇ ತೆರೆಯುತ್ತವೆ ಮತ್ತು ಮನೆಯಲ್ಲಿ ಹಣದ ಹರಿವಿಗೆ ಕಾರಣವಾಗುತ್ತವೆ.ಹಾಗಾದರೆ ಬನ್ನಿ ಹಳದಿ ಸಾಸಿವೆಯ ಆ ಲಾಭಕಾರಿ ಉಪಾಯಗಳಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)


COMMERCIAL BREAK
SCROLL TO CONTINUE READING

ಹಳದಿ ಸಾಸಿವೆಯ ಉಪಾಯಗಳು
ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಈ ಉಪಾಯ ಅನುಸರಿಸಿ (yellow mustard for goddess lakshmi)

ಬೆಳಗ್ಗೆ ಸ್ನಾನ ಮಾಡಿ ಪೂಜೆ ಮಾಡುವಾಗ ಸಗಣಿಯ ಕುಳ್ಲಿನ ಮೇಲೆ ಸ್ವಲ್ಪ ಹಳದಿ ಸಾಸಿವೆ ಕಾಳುಗಳನ್ನು ಹಾಕಿ ಉರಿಸಿ. ನಂತರ ಇಡೀ ಮನೆಯಲ್ಲಿ ಅದರ ಹೊಗೆಯನ್ನು ಆಡಿಸಿ. ಇದರಿಂದ ಸದಾ ನಿಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿಯ ವಾಸವಿರುತ್ತದೆ.


ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಲು ಈ ಉಪಾಯ ಅನುಸರಿಸಿ (yellow mustard to get rid of financial problems)
ಒಂದು ಮುಷ್ಠಿ ಹಳದಿ ಸಾಸಿವೆ ಕಾಳುಗಳನ್ನು  ಒಂದು ಹಳದಿ ಬಣ್ಣದ ವಸ್ತ್ರದಲ್ಲಿ ಕಟ್ಟಿ ತಾಯಿ ಬಾಂಗ್ಲಾಮುಖಿಗೆ ಅರ್ಪಿಸಿ. ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತವೆ.

ಆರ್ಥಿಕ ಹಾನಿಯಿಂದ ಮೇಲೇಳಲು ಈ ಉಪಾಯ ಅನುಸರಿಸಿ (yellow mustard for financial loss)
ಮನೆ ಮುಖ್ಯಸ್ಥನ ತಲೆ ಮೇಲಿಂದ ಕೆಲ ಸಾಸಿವೆ ಕಾಳುಗಳನ್ನು ನಿವಾಳಿಸಿ ಹೊರಹಾಕಿ. ಇದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಮೆಲ್ಲಗೆ ನಿವಾರಣೆಯಾಗುತ್ತವೆ.

ಧನವಂತರಾಗಲು ಈ ಉಪಾಯ ಅನುಸರಿಸಿ (yellow mustard for richness)
ಬೆಳ್ಳಿ ಅಥವಾ ಸಾಮಾನ್ಯ ಧಾತುವಿನಿಂದ ತಯಾರಿಸಲಾಗಿರುವ ಒಂದು ಬಟ್ಟಲಲ್ಲಿ ಹಳದಿ ಸಾಸಿವೆ ಕಾಳುಗಳನ್ನು ಕರ್ಪೂರದ ಜೊತೆಗೆ ಉರಿಸಿ. ಈ ಕೆಲಸ ನಿತ್ಯ ಅನುಸರಿಸಿದರೆ, ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ ಮತ್ತು ಧನಾಗಮನ ಹೆಚ್ಚಾಗುತ್ತದೆ.

ದೃಷ್ಟಿ ದೋಷ ನಿವಾರಿಸಲು ಈ ಉಪಾಯ ಅನುಸರಿಸಿ (yellow mustard for evil eye)
ಕೆಟ್ಟ ದೃಷ್ಟಿ ದೋಷವನ್ನು ನಿವಾರಿಸಲು ಹಳದಿ ಸಾಸಿವೆಯ ಕೆಲ ಕಾಳುಗಳನ್ನು ಮನೆಯ ಎಲ್ಲಾ ಕೋಣೆಗಳಲ್ಲಿ ಸಿಂಪಡಿಸಿ. ಉಳಿದ ಕಾಳುಗಳನ್ನು ಮನೆಯ ನಾಲ್ಕು ದಿಕ್ಕುಗಳಲ್ಲಿ ಬೀರಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ.


ಇದನ್ನೂ ಓದಿ-Vastu Tips: ತುಳಸಿ ಗಿಡ ಅಷ್ಟೇ ಅಲ್ಲ ಮನೆಯಲ್ಲಿನ ಈ ಗಿಡಗಳು ಒಣಗಿದರೂ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ!


ಧನ ವೃದ್ಧಿಯ ಉಪಾಯ
ಗುರುವಾರದಂದು ಸ್ವಲ್ಪ ಹಳದಿ ಸಾಸಿವೆ ಮತ್ತು ಕರ್ಪೂರವನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಮುಖ್ಯ ಬಾಗಿಲಿಗೆ ನೇತು ಹಾಕಿ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಇದು ತುಂಬಾ ಸಹಕಾರಿಯಾಗಿದೆ. 


ಇದನ್ನೂ ಓದಿ-Malavya Rajyog: ಶೀಘ್ರದಲ್ಲೇ ಶುಕ್ರನ ಕೃಪೆಯಿಂದ ಮಾಲವ್ಯ ರಾಜಯೋಗ ರಚನೆ, ಈ ಜನರ ಮನೆಗೆ ಸಾಕ್ಷಾತ್ ಲಕ್ಷ್ಮಿ ಪ್ರವೇಶ!

(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ