ಬೆಂಗಳೂರು: ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಜೀವನ ಆರಾಮವಾಗಿ ಕಳೆಯಬೇಕು ಎಂಬ ಆಸೆ ಇರುತ್ತದೆ. ಇದಕ್ಕಾಗಿ ಅವನು ತುಂಬಾ ಶ್ರಮಿಸುತ್ತಾನೆ. ಆದರೂ ಕೂಡ, ಅನೇಕ ಜನರು ಕಷ್ಟಪಟ್ಟು ಕೆಲಸ ಮಾಡಿದರೂ ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರು ಆಗಾಗ್ಗೆ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳಿಗೆ ವಾಸ್ತು ದೋಷಗಳೂ ಕಾರಣವಾಗಿರಬಹುದು ಹೀಗಿರುವಾಗ, ವಾಸ್ತು ಶಾಸ್ತ್ರದಲ್ಲಿ ಕೆಲ ಪರಿಹಾರಗಳನ್ನು ಸೂಚಿಸಲಾಗಿದೆ. ಹಾಗಾದರೆ ಬನ್ನಿ ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೇಗೆ ತೊಲಗಿಸಬೇಕು ಮತ್ತು ಸುಖ-ಸಮೃದ್ಧಿಯನ್ನು ಹೇಗೆ ಹೆಚ್ಚಿಸಬೇಕು ತಿಳಿದುಕೊಳ್ಳೋಣ ಬನ್ನಿ.(Spiritual News In Kannada)


COMMERCIAL BREAK
SCROLL TO CONTINUE READING

ಮಲಗುವ ಮುನ್ನ ಈ ಪರಿಹಾರಗಳನ್ನು ಮಾಡಿ
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅತ್ಯಂತ ಕಾಳಜಿವಹಿಸಿ ತನ್ನ ಆಯ್ಕೆಯಂತೆ ಮನೆಯನ್ನು ನಿರ್ಮಿಸುತ್ತಾನೆ. ಅದನ್ನೂ ಅಚ್ಚುಕಟ್ಟಾಗಿ ಅಲಂಕರಿಸುತ್ತಾರೆ. ಆದರೆ, ಹಲವು ಬಾರಿ ವಾಸ್ತುವಿನ ಬಗ್ಗೆ ಸರಿಯಾಗಿ ಗಮನಹರಿಸುವುದಿಲ್ಲ, ಇದರಿಂದಾಗಿ ಮನೆಯಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹೀಗಿರುವಾಗ, ರಾತ್ರಿ ಮಲಗುವ ಮೊದಲು ಮನೆಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಬಹುದು.


ಅಡುಗೆಮನೆಯಲ್ಲಿ ನೀರು ತುಂಬಿಸಿದ ಬಕೆಟ್ ಇಡಿ
ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ನೀರು ತುಂಬಿ ಅಡುಗೆ ಮನೆಯಲ್ಲಿ ಇಡಿ. ಹೀಗೆ ಮಾಡುವುದರಿಂದ ಸಾಲದಿಂದ ಮುಕ್ತಿ ದೊರೆಯುತ್ತದೆ ಮತ್ತು ಹಣದ ಸಮಸ್ಯೆಯೂ ನಿವಾರಣೆಯಾಗುತ್ತದೆ. ಇದರೊಂದಿಗೆ ಮನೆಯ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗುತ್ತದೆ.


ಬಾತ್ ರೂಮ್ ನಲ್ಲಿ ತುಂಬಿದ ಬಕೆಟ್ 
ವಾಸ್ತು ಶಾಸ್ತ್ರದ ಪ್ರಕಾರ ಬಾತ್ ರೂಂನಲ್ಲಿ ಇಟ್ಟಿರುವ ಬಕೆಟ್ ಖಾಲಿ ಇರಬಾರದು. ಸ್ನಾನಗೃಹದಲ್ಲಿ ತುಂಬಿದ ಬಕೆಟ್‌ ಇಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಗೊಳ್ಳುತ್ತಾಳೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ರಾತ್ರಿ ಮಲಗುವ ಮೊದಲು, ಸ್ನಾನಗೃಹದಲ್ಲಿ ನೀರು ತುಂಬಿದ ಬಕೆಟ್ ಅನ್ನು ಇರಿಸಿ.


ಇದನ್ನೂ ಓದಿ-ಹತ್ತು ವರ್ಷಗಳ ಬಳಿಕ ಕೇತು-ಶುಕ್ರರ ಶುಭ ಸಂಯೋಜನೆ, ಶುಕ್ರದೆಸೆಯಿಂದ ಈ ಜನರಿಗೆ ಸಿಗಲಿದೆ ಅಪಾರ ಧನ-ಸಂಪತ್ತು!


ಮುಖ್ಯದ್ವಾರದ ಬಳಿ ದೀಪವನ್ನು ಬೆಳಗಿಸಿ
ನಿಮ್ಮ ಮನೆಯಲ್ಲಿ ಸದಾ ತಾಯಿ ಲಕ್ಷ್ಮಿಯ ವಾಸ ಇರಬೇಕು ಎಂದು ನೀವು ಬಯಸುತ್ತಿದ್ದರೆ, ಮನೆಯ ಮುಖ್ಯ ದ್ವಾರದಲ್ಲಿ ಪ್ರತಿದಿನ ಸಂಜೆ ದೀಪವನ್ನು ಬೆಳಗಿಸಬೇಕು. ಇದರೊಂದಿಗೆ ಮುಖ್ಯ ಬಾಗಿಲಿನ ಮೇಲೂ ದೀಪ ಬೆಳಗಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ.


ಇದನ್ನೂ ಓದಿ-ಕಡುಬಡವರಾಗಿ ಹುಟ್ಟಿದರೂ ಕೂಡ ಇವರನ್ನು ಶ್ರೀಮಂತರಾಗುವುದರಿಂದ ಯಾರೂ ತಡೆಯಲು ಸಾಧ್ಯವಿಲ್ಲ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ